<p><strong>ಶಿರಸಿ:</strong> ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ಇಸಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. </p>.<p>ಜಿಲ್ಲಾ ಪಂಚಾಯಿತಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ₹3.52 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ವಿಜ್ಞಾನ ಕೇಂದ್ರದ ನಿರ್ಮಾಣಕ್ಕೆ ಸರ್ಕಾರ ₹7.25 ಕೋಟಿ ನಿಗದಿ ಮಾಡಿದೆ. ಪ್ರಥಮ ಹಂತದ ಕಾಮಗಾರಿಗೆ ₹3.52 ಕೋಟಿ ಮೊತ್ತದಲ್ಲಿ ಆಗಲಿದೆ. ಉಳಿದ ಮೊತ್ತದಲ್ಲಿ ಯಂತ್ರೋಪಕರಣ, ವಿವಿಧ ಉಪಕರಣಗಳ ಖರೀದಿ ಆಗಲಿದೆ’ ಎಂದರು.</p>.<p>‘ಕೇಂದ್ರದಲ್ಲಿ ಮುಖ್ಯವಾಗಿ ಖಗೋಳ ವೀಕ್ಷಣೆಯ ಅವಕಾಶ ಇರಲಿದೆ. ಕಟ್ಟಡ ಕಾರ್ಯಾಚರಣೆ ಆರಂಭದ ಬಳಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯಂತ್ರೋಪಕರಣ ಕಳಿಸಲಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಆಗಬೇಕು. ವಿಜ್ಞಾನ ಭವನ ನಿರ್ಮಾಣಗೊಂಡು ಮಕ್ಕಳಿಗೆ ಜ್ಞಾನ ಹಂಚುವ ಕಾರ್ಯ ಆಗಲಿ’ ಎಂದರು.</p>.<p>ಡಿಡಿಪಿಐ ಬಸವರಾಜ ಪಾರಿ, ‘ಶಿರಸಿ ಶೈಕ್ಷಣಿಕ ಜಿಲ್ಲೆಗೆ ಇದು ಅನುಕೂಲ ಆಗಲಿದೆ. ಮಕ್ಕಳ ಜ್ಞಾನ ಹಂಚಲು ಇದು ಕೇಂದ್ರವಾಗಲಿದೆ’ ಎಂದರು.</p>.<p>ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಇಸಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಶೆಟ್ಟರ, ಉಪಾಧ್ಯಕ್ಷೆ ಉಷಾ ಶೆಟ್ಟಿ, ಸದಸ್ಯ ನವೀನ ಶೆಟ್ಟಿ, ಪಿ.ವಿ. ಹೆಗಡೆ, ಘಟಕಾಧ್ಯಕ್ಷ ಸಿದ್ದು, ದುಷ್ಯಂತಗೌಡ ಕೊಲ್ಲೂರಿ, ಲೋಕೋಪಯೋಗಿ ಇಲಾಖೆಯ ಹನುಮಂತ, ಅರುಣ ಗೌಡರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ಇಸಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು. </p>.<p>ಜಿಲ್ಲಾ ಪಂಚಾಯಿತಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ₹3.52 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ವಿಜ್ಞಾನ ಕೇಂದ್ರದ ನಿರ್ಮಾಣಕ್ಕೆ ಸರ್ಕಾರ ₹7.25 ಕೋಟಿ ನಿಗದಿ ಮಾಡಿದೆ. ಪ್ರಥಮ ಹಂತದ ಕಾಮಗಾರಿಗೆ ₹3.52 ಕೋಟಿ ಮೊತ್ತದಲ್ಲಿ ಆಗಲಿದೆ. ಉಳಿದ ಮೊತ್ತದಲ್ಲಿ ಯಂತ್ರೋಪಕರಣ, ವಿವಿಧ ಉಪಕರಣಗಳ ಖರೀದಿ ಆಗಲಿದೆ’ ಎಂದರು.</p>.<p>‘ಕೇಂದ್ರದಲ್ಲಿ ಮುಖ್ಯವಾಗಿ ಖಗೋಳ ವೀಕ್ಷಣೆಯ ಅವಕಾಶ ಇರಲಿದೆ. ಕಟ್ಟಡ ಕಾರ್ಯಾಚರಣೆ ಆರಂಭದ ಬಳಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯಂತ್ರೋಪಕರಣ ಕಳಿಸಲಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಆಗಬೇಕು. ವಿಜ್ಞಾನ ಭವನ ನಿರ್ಮಾಣಗೊಂಡು ಮಕ್ಕಳಿಗೆ ಜ್ಞಾನ ಹಂಚುವ ಕಾರ್ಯ ಆಗಲಿ’ ಎಂದರು.</p>.<p>ಡಿಡಿಪಿಐ ಬಸವರಾಜ ಪಾರಿ, ‘ಶಿರಸಿ ಶೈಕ್ಷಣಿಕ ಜಿಲ್ಲೆಗೆ ಇದು ಅನುಕೂಲ ಆಗಲಿದೆ. ಮಕ್ಕಳ ಜ್ಞಾನ ಹಂಚಲು ಇದು ಕೇಂದ್ರವಾಗಲಿದೆ’ ಎಂದರು.</p>.<p>ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಇಸಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಶೆಟ್ಟರ, ಉಪಾಧ್ಯಕ್ಷೆ ಉಷಾ ಶೆಟ್ಟಿ, ಸದಸ್ಯ ನವೀನ ಶೆಟ್ಟಿ, ಪಿ.ವಿ. ಹೆಗಡೆ, ಘಟಕಾಧ್ಯಕ್ಷ ಸಿದ್ದು, ದುಷ್ಯಂತಗೌಡ ಕೊಲ್ಲೂರಿ, ಲೋಕೋಪಯೋಗಿ ಇಲಾಖೆಯ ಹನುಮಂತ, ಅರುಣ ಗೌಡರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>