ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಾರವಾರ | ಕರಾವಳಿ ಕಾಡುವ ಕಡಲು ಕೊರೆತ: ಸಾರ್ವಜನಿಕರ ಅಸಮಾಧಾನ

Published : 31 ಆಗಸ್ಟ್ 2024, 6:32 IST
Last Updated : 31 ಆಗಸ್ಟ್ 2024, 6:32 IST
ಫಾಲೋ ಮಾಡಿ
Comments
ಕಡಲು ಕೊರೆತ ತಡೆಗೆ ತುರ್ತು ಕಾಮಗಾರಿಗೆ ಕರಾವಳಿಯ ಮೂರು ಜಿಲ್ಲೆ ಸೇರಿ ₹20 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ಘೋಷಿಸಿದೆ. ಅನುದಾನ ಲಭಿಸಿದ ತಕ್ಷಣ ರಕ್ಷಣಾ ಕಾಮಗಾರಿ ಕೈಗೊಳ್ಳುತ್ತೇವೆ
ಕ್ಯಾಪ್ಟನ್ ಸಿ.ಸ್ವಾಮಿ ಬಂದರು ಜಲಸಾರಿಗೆ ಮಂಡಳಿ ನಿರ್ದೇಶಕ
ನೈಸರ್ಗಿಕ ಕ್ರಮದಿಂದಲೇ ರಕ್ಷಿಸಬಹುದು
‘ಕಡಲು ಕೊರೆತ ತಡೆಗೆ ಕಡಲತೀರದಲ್ಲಿ ಬಂಡೆಕಲ್ಲಿನ ರಾಶಿ ಸುರಿದು ತಡೆಗೋಡೆ ನಿರ್ಮಿಸುವ ಬದಲು ಮಣ್ಣಿನ ಸವಕಳಿ ತಡೆಯುವ ಬೀಚ್ ಮಾರ್ನಿಂಗ್ ಗ್ಲೋರಿ (ಬಂಗುಡೆ ಬಳ್ಳಿ) ಬಳ್ಳಿಗಳನ್ನು ಬೆಳೆಸುವುದು ಹೆಚ್ಚು ವೆಚ್ಚ ಇಲ್ಲದೆ ನೈಸರ್ಗಿಕವಾಗಿ ಸಮಸ್ಯೆ ತಡೆಯಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಕಡಲಜೀವಶಾಸ್ತ್ರಜ್ಞ ವಿ.ಎನ್.ನಾಯಕ. ‘ಕಡಲು ಕೊರೆತ ಮಳೆಗಾಲದ ವೇಳೆ ನಡೆಯುವ ಸಹಜ ನೈಸರ್ಗಿಕ ಪ್ರಕ್ರಿಯೆ. ಅದನ್ನು ತಡೆಗಟ್ಟಲು ಯಾವುದೇ ಕ್ರಮದಿಂದಲೂ ಸಾಧ್ಯವಾಗದು. ಸಿ.ಆರ್.ಝಡ್ ನಿಯಮಗಳ ಪಾಲನೆ ಬಿಗುಕ್ರಮಗಳ ಮೂಲಕ ಕಡಲತೀರದ ಅಂಚಿನಲ್ಲಿ ಶಾಶ್ವತ ಕಟ್ಟಡ ನಿರ್ಮಾಣದ ಅಭಿವೃದ್ಧಿ ಚಟುವಟಿಕೆ ತಡೆಯುವುದರಿಂದ ಕಡಲು ಕೊರೆತದಿಂದ ಉಂಟಾಗಬಹುದಾದ ಹಾನಿ ತಡೆಗಟ್ಟಬಹುದಷ್ಟೆ’ ಎನ್ನುತ್ತಾರೆ ಅವರು.
ಎಲ್ಲೆಲ್ಲಿದೆ ಕಡಲು ಕೊರೆತದ ಸಮಸ್ಯೆ
ಕಾರವಾರದ ದೇವಬಾಗ ಹಿಪ್ಪಳಿ ದಾಂಡೇಬಾಗ ಟ್ಯಾಗೋರ್ ಕಡಲತೀರ. ಅಂಕೋಲಾ ತಾಲ್ಲೂಕಿನ ಹಾರವಾಡ ಬೆಳಂಬಾರ. ಕುಮಟಾದ ನಾಡುಮಾಸ್ಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆಲವು ಸ್ಥಳಗಳು ಧಾರೇಶ್ವರ ಹಂದಿಗೋಣ ಕಲಭಾಗ. ಹೊನ್ನಾವರದ ತೊಪ್ಪಲಕೇರಿ ಹೆಗಡೆಹಿತ್ಲು ಪಾವಿನಕುರ್ವ ಕಾಸರಕೋಡ. ಭಟ್ಕಳದ ಗೋರ್ಟೆ ಬೆಳ್ಕೆ ತಲಗೋಡ ತೆಂಗಿನಗುಂಡಿ ಅಳ್ವೇಕೋಡಿ ಮುರ್ಡೇಶ್ವರ ಬೈಲೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT