ನೈಸರ್ಗಿಕ ಕ್ರಮದಿಂದಲೇ ರಕ್ಷಿಸಬಹುದು
‘ಕಡಲು ಕೊರೆತ ತಡೆಗೆ ಕಡಲತೀರದಲ್ಲಿ ಬಂಡೆಕಲ್ಲಿನ ರಾಶಿ ಸುರಿದು ತಡೆಗೋಡೆ ನಿರ್ಮಿಸುವ ಬದಲು ಮಣ್ಣಿನ ಸವಕಳಿ ತಡೆಯುವ ಬೀಚ್ ಮಾರ್ನಿಂಗ್ ಗ್ಲೋರಿ (ಬಂಗುಡೆ ಬಳ್ಳಿ) ಬಳ್ಳಿಗಳನ್ನು ಬೆಳೆಸುವುದು ಹೆಚ್ಚು ವೆಚ್ಚ ಇಲ್ಲದೆ ನೈಸರ್ಗಿಕವಾಗಿ ಸಮಸ್ಯೆ ತಡೆಯಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಕಡಲಜೀವಶಾಸ್ತ್ರಜ್ಞ ವಿ.ಎನ್.ನಾಯಕ. ‘ಕಡಲು ಕೊರೆತ ಮಳೆಗಾಲದ ವೇಳೆ ನಡೆಯುವ ಸಹಜ ನೈಸರ್ಗಿಕ ಪ್ರಕ್ರಿಯೆ. ಅದನ್ನು ತಡೆಗಟ್ಟಲು ಯಾವುದೇ ಕ್ರಮದಿಂದಲೂ ಸಾಧ್ಯವಾಗದು. ಸಿ.ಆರ್.ಝಡ್ ನಿಯಮಗಳ ಪಾಲನೆ ಬಿಗುಕ್ರಮಗಳ ಮೂಲಕ ಕಡಲತೀರದ ಅಂಚಿನಲ್ಲಿ ಶಾಶ್ವತ ಕಟ್ಟಡ ನಿರ್ಮಾಣದ ಅಭಿವೃದ್ಧಿ ಚಟುವಟಿಕೆ ತಡೆಯುವುದರಿಂದ ಕಡಲು ಕೊರೆತದಿಂದ ಉಂಟಾಗಬಹುದಾದ ಹಾನಿ ತಡೆಗಟ್ಟಬಹುದಷ್ಟೆ’ ಎನ್ನುತ್ತಾರೆ ಅವರು.