<p><strong>ಕಾರವಾರ</strong>: ತ್ಯಾಗ, ಬಲಿದಾನದ ಸಂಕೇತವಾಗಿ ಮುಸ್ಲಿಮರು ಆಚರಿಸುವ ಬಕ್ರೀದ್ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸಿದ್ಧತೆ ಜೋರಾಗಿ ನಡೆದಿದ್ದು, ಕುರಿಗಳ ವಹಿವಾಟು ತುರುಸು ಪಡೆದುಕೊಂಡಿದೆ.</p>.<p>ಇಲ್ಲಿನ ಕಾಜುಬಾಗ, ಕೋಡಿಬಾಗ, ಗಾಂಧಿನಗರ, ಸದಾಶಿವಗಡ ಸೇರಿದಂತೆ ಹಲವೆಡೆಗಳಲ್ಲಿ ಕುರಿಗಳ ಮಾರಾಟ ನಡೆಯುತ್ತಿದೆ. ವಿವಿಧ ಬಗೆಯ, ಗಾತ್ರಗಳ ಕುರಿಗಳನ್ನು ಖರೀದಿಸುವಲ್ಲಿ ಜನರು ನಿರತರಾಗಿದ್ದಾರೆ. ದೇವದುರ್ಗ, ಅಮೀನಗಡ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ನಾನಾ ಭಾಗದಿಂದ ಕುರಿಗಳನ್ನು ತಂದು ಮಾರಾಟಕ್ಕಿರಿಸಲಾಗಿದೆ.</p>.<p>ಬಕ್ರೀದ್ ಹಬ್ಬಕ್ಕೆ ಬಲಿದಾನದ ಸಂಕೇತವಾಗಿ ಕುರಿಗಳನ್ನು ಬಲಿ ಕೊಡುವ ಪದ್ಧತಿ ನಡೆಯುತ್ತದೆ. ಪ್ರವಾದಿಯವರ ಆಣತಿಯಂತೆ ಸ್ಥಿತಿವಂತರು ಮನೆಯಲ್ಲಿ ಕುರಿಯ ರೂಪದಲ್ಲಿ ಬಲಿದಾನ ಅರ್ಪಿಸುತ್ತಾರೆ. ಅದನ್ನು ಮೂರು ಪಾಲು ಮಾಡಿ ಬಡವರಿಗೆ, ಬಂಧುಗಳ, ನೆರೆಹೊರೆಯವರಿಗೆ ಹಂಚಿಕೆ ಮಾಡಲಾಗುತ್ತದೆ. ಜೂನ್ 7 ರಂದು ಆಚರಣೆ ನಡೆಯಲಿದ್ದು, ಹಬ್ಬಕ್ಕೆ ನಾಲ್ಕೈದು ದಿನ ಮುಂಚಿನಿಂದ ಕುರಿಗಳ ವಹಿವಾಟು ಚಿಗಿತುಕೊಂಡಿದೆ.</p>.<p>‘ಕಳೆದ ಬಾರಿಗಿಂತ ಈ ಬಾರಿ ವಿಭಿನ್ನ ತಳಿಗಳ ಕುರಿಗಳು ಮಾರಾಟಕ್ಕೆ ಬಂದಿವೆ. ಗಾತ್ರಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗುತ್ತಿದೆ. ಕೆಲ ವ್ಯಾಪಾರಿಗಳು ದುಬಾರಿ ದರ ಹೇಳಿ ಚೌಕಾಸಿ ಬಳಿಕ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ’ ಎಂದು ಕೆಎಚ್ಬಿ ಕಾಲೊನಿಯ ಶಾರುಕ್ ಹಸನ್ ಹೇಳಿದರು.</p>.<p>‘₹20 ಸಾವಿರದಿಂದ ಆರಂಭಗೊಂಡು ₹60 ಸಾವಿರ ದರದವರೆಗಿನ ಕುರಿಗಳನ್ನು ಮಾರಾಟಕ್ಕಿರಿಸಲಾಗಿದೆ. ಖರೀದಿ ಪ್ರಮಾಣ ಸಮಾಧಾನಕರವಾಗಿದೆ. ಇನ್ನೂ ಎರಡು ದಿನ ಸಮಯವಿದ್ದು ಮತ್ತಷ್ಟು ಕುರಿಗಳು ಮಾರಾಟವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ವ್ಯಾಪಾರಿ ಇಮ್ರಾನ್ ಶೇಖ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ತ್ಯಾಗ, ಬಲಿದಾನದ ಸಂಕೇತವಾಗಿ ಮುಸ್ಲಿಮರು ಆಚರಿಸುವ ಬಕ್ರೀದ್ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸಿದ್ಧತೆ ಜೋರಾಗಿ ನಡೆದಿದ್ದು, ಕುರಿಗಳ ವಹಿವಾಟು ತುರುಸು ಪಡೆದುಕೊಂಡಿದೆ.</p>.<p>ಇಲ್ಲಿನ ಕಾಜುಬಾಗ, ಕೋಡಿಬಾಗ, ಗಾಂಧಿನಗರ, ಸದಾಶಿವಗಡ ಸೇರಿದಂತೆ ಹಲವೆಡೆಗಳಲ್ಲಿ ಕುರಿಗಳ ಮಾರಾಟ ನಡೆಯುತ್ತಿದೆ. ವಿವಿಧ ಬಗೆಯ, ಗಾತ್ರಗಳ ಕುರಿಗಳನ್ನು ಖರೀದಿಸುವಲ್ಲಿ ಜನರು ನಿರತರಾಗಿದ್ದಾರೆ. ದೇವದುರ್ಗ, ಅಮೀನಗಡ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ನಾನಾ ಭಾಗದಿಂದ ಕುರಿಗಳನ್ನು ತಂದು ಮಾರಾಟಕ್ಕಿರಿಸಲಾಗಿದೆ.</p>.<p>ಬಕ್ರೀದ್ ಹಬ್ಬಕ್ಕೆ ಬಲಿದಾನದ ಸಂಕೇತವಾಗಿ ಕುರಿಗಳನ್ನು ಬಲಿ ಕೊಡುವ ಪದ್ಧತಿ ನಡೆಯುತ್ತದೆ. ಪ್ರವಾದಿಯವರ ಆಣತಿಯಂತೆ ಸ್ಥಿತಿವಂತರು ಮನೆಯಲ್ಲಿ ಕುರಿಯ ರೂಪದಲ್ಲಿ ಬಲಿದಾನ ಅರ್ಪಿಸುತ್ತಾರೆ. ಅದನ್ನು ಮೂರು ಪಾಲು ಮಾಡಿ ಬಡವರಿಗೆ, ಬಂಧುಗಳ, ನೆರೆಹೊರೆಯವರಿಗೆ ಹಂಚಿಕೆ ಮಾಡಲಾಗುತ್ತದೆ. ಜೂನ್ 7 ರಂದು ಆಚರಣೆ ನಡೆಯಲಿದ್ದು, ಹಬ್ಬಕ್ಕೆ ನಾಲ್ಕೈದು ದಿನ ಮುಂಚಿನಿಂದ ಕುರಿಗಳ ವಹಿವಾಟು ಚಿಗಿತುಕೊಂಡಿದೆ.</p>.<p>‘ಕಳೆದ ಬಾರಿಗಿಂತ ಈ ಬಾರಿ ವಿಭಿನ್ನ ತಳಿಗಳ ಕುರಿಗಳು ಮಾರಾಟಕ್ಕೆ ಬಂದಿವೆ. ಗಾತ್ರಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗುತ್ತಿದೆ. ಕೆಲ ವ್ಯಾಪಾರಿಗಳು ದುಬಾರಿ ದರ ಹೇಳಿ ಚೌಕಾಸಿ ಬಳಿಕ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ’ ಎಂದು ಕೆಎಚ್ಬಿ ಕಾಲೊನಿಯ ಶಾರುಕ್ ಹಸನ್ ಹೇಳಿದರು.</p>.<p>‘₹20 ಸಾವಿರದಿಂದ ಆರಂಭಗೊಂಡು ₹60 ಸಾವಿರ ದರದವರೆಗಿನ ಕುರಿಗಳನ್ನು ಮಾರಾಟಕ್ಕಿರಿಸಲಾಗಿದೆ. ಖರೀದಿ ಪ್ರಮಾಣ ಸಮಾಧಾನಕರವಾಗಿದೆ. ಇನ್ನೂ ಎರಡು ದಿನ ಸಮಯವಿದ್ದು ಮತ್ತಷ್ಟು ಕುರಿಗಳು ಮಾರಾಟವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ವ್ಯಾಪಾರಿ ಇಮ್ರಾನ್ ಶೇಖ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>