ಪುರಾತತ್ವ ಇಲಾಖೆಯು ಗುಡ್ನಾಪುರದಲ್ಲಿ ಇನ್ನಷ್ಟು ಉತ್ಖನನ ನಡೆಸಬೇಕು. ರಾಣಿ ನಿವಾಸ ಕಟ್ಟಡದ ಅವಶೇಷ ರಕ್ಷಣೆ ಮಾಡಬೇಕು. ಕಟ್ಟಡದ ಅವಶೇಷಗಳು ಹಾಳಾಗಿ ಹೋಗದಂತೆ ಎಚ್ಚರಿಕೆ ವಹಿಸಬೇಕು
ನಿರ್ಮಲಾ ನಾಯ್ಕ ಗ್ರಾ.ಪಂ. ಅಧ್ಯಕ್ಷೆ ಗುಡ್ನಾಪುರ
ರಾಣಿ ನಿವಾಸದ ಅವಶೇಷಗಳಿಗೆ ಹಾನಿಯಾಗದಂತೆ ಆವರಣ ಗೋಡೆಗಳ ದುರಸ್ತಿ ಸ್ವಚ್ಛತೆ ಮಾಡಬೇಕು. ಪ್ರವೇಶ ದ್ವಾರದಲ್ಲಿ ಮಾಹಿತಿ ಫಲಕ ಅಳವಡಿಸಿ ಶಿಲಾ ಶಾಸನವನ್ನು ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡುವಂತೆ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ