ತಾಲ್ಲೂಕಿನಲ್ಲಿ ಬರದ ಛಾಯೆ ದಿನದಿಂದ ದಿನಕ್ಕೆ ಹೆಚ್ಚು ಪರಿಣಾಮ ಬೀರುತ್ತಿದೆ. ಜಲಾಶಯದ ನೀರು ಹರಿದು ಹೋಗುವ ಕಾಲುವೆ ಎಡಬಲ ಇರುವ ಸಣ್ಣ ಕೆರೆಗಳಲ್ಲಿ ತಕ್ಕ ಮಟ್ಟಿಗೆ ನೀರು ನಿಂತಿದೆ. ಇದೇ ನೀರು ಕೆಲವು ರೈತರಿಗೆ ಬೇಸಿಗೆಯಲ್ಲಿ ಆಸರೆಯಾಗಿದ್ದು, ಬೆಳೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ, ಸಿಕ್ಕಷ್ಟು ನೀರನ್ನು ಹಾಯಿಸಿ, ತೋಟ, ಗದ್ದೆಗಳನ್ನು ಹಸಿರು ಆಗಿ ಇರುವಂತೆ ಶ್ರಮಿಸುತ್ತಿದ್ದಾರೆ. ವಾರಕ್ಕೊಮ್ಮೆ ಎಂಬಂತೆ ತೋಟಗಳಿಗೆ ಟ್ಯಾಂಕರ್ ಮೂಲಕ, ಇಲ್ಲವೇ ಕೆರೆಯಿಂದ ನೀರು ಹರಿಸುತ್ತಿದ್ದಾರೆ.