<p><strong>ಶಿರಸಿ: </strong>ವಿದ್ಯಾರ್ಥಿಗಳಿಗೆ ಪಾಠ ಮಾಡುವುದಷ್ಟೆ ಕರ್ತವ್ಯ ಎಂದು ಭಾವಿಸಿ ಕೆಲಸ ಮಾಡುವ ಶಿಕ್ಷಕರ ನಡುವೆ ಮುಂಡಗೋಡ ತಾಲ್ಲೂಕಿನ ಬಡ್ಡಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಾಲಚಂದ್ರ ಹೆಗಡೆ ವಿಭಿನ್ನ ಎನಿಸುತ್ತಾರೆ.</p>.<p>ತೀರಾ ಹಿಂದುಳಿದ ಪ್ರದೇಶಗಳಲ್ಲೇ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅವರನ್ನು ‘ಕುಗ್ರಾಮದ ಜನರ ಗುರು’ ಎಂದೇ ಹಲವರು ಗುರುತಿಸುತ್ತಾರೆ. ಮುಂಡಗೋಡ ತಾಲ್ಲೂಕಿನ ಅತಿ ಹಿಂದುಳಿದ ಪ್ರದೇಶಗಳಾದ ಬಸವನಕೊಪ್ಪ, ಚೌಡಳ್ಳಿ, ಬಡ್ಡಿಗೇರಿ ಶಾಲೆಗಳಲ್ಲಿ ಕೆಲಸ ಮಾಡಿ, ಗ್ರಾಮಸ್ಥರಲ್ಲಿ ಸಾಕ್ಷರತೆಯ ಬೀಜ ಬಿತ್ತಿರುವುದು ಇದಕ್ಕೆ ಕಾರಣ.</p>.<p>ಬಾಲಚಂದ್ರ ಹೆಗಡೆ ಮೂಲತಃ ಶಿರಸಿ ತಾಲ್ಲೂಕು ಬಿಸಲಕೊಪ್ಪ ಗ್ರಾಮದವರು. ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ನೂರಾರು ಮಕ್ಕಳ ಬಾಳಿಗೆ ಬೆಳಕು ನೀಡಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.</p>.<p class="Subhead"><strong>ಬಡ ಮಕ್ಕಳಿಗೆ ಮನೆಯಲ್ಲಿಯೇ ಆಶ್ರಯ:</strong>ಗೌಳಿಗರು ಹೆಚ್ಚಿರುವ ಬಡ್ಡಿಗೇರಿ ಶಾಲೆಯಲ್ಲಿ ಆರು ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಶಿಕ್ಷಣ ಒದಗಿಸಲು ಮಕ್ಕಳ ಪಾಲಕರನ್ನು ಪ್ರೇರೇಪಿಸುತ್ತಿದ್ದಾರೆ. ಕಡು ಬಡತನದ ಕುಟುಂಬದ ಮಕ್ಕಳಿದ್ದರೆ ಅವರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಶಿಕ್ಷಣ ಒದಗಿಸುತ್ತಿದ್ದಾರೆ.</p>.<p>ಬಸವನಕೊಪ್ಪ ಗ್ರಾಮದಲ್ಲಿ 1999–2002ರಲ್ಲಿ ಶಾಲೆ ಅವಧಿ ಮುಗಿದ ನಂತರ ಪಾಲಕರಿಗೆ ಓದು, ಬರಹ ಕಲಿಸಿ ಅಲ್ಲಿನ ಹತ್ತಾರು ಕುಟುಂಬಗಳನ್ನು ಸಾಕ್ಷರರನ್ನಾಗಿಸಿದ್ದರು. ಈ ಕಾರ್ಯ ಈಗಲೂ ಮುಂದುವರೆದಿದ್ದು ಬಡ್ಡಿಗೇರಿಯಲ್ಲಿ ಅಕ್ಷರ ಪಾಠ ಮುಂದುವರೆದಿದೆ. ಕವಿಯಾಗಿ, ಭಾಷಣಕಾರರಾಗಿಯೂ ಅವರು ಹೆಸರು ಮಾಡಿದ್ದಾರೆ.</p>.<p>‘ಬಡತನದಲ್ಲಿ ಬೆಳೆದ ನನಗೆ ಶಿಕ್ಷಕನಾಗಬೇಕು ಎಂಬ ಗುರಿ ಇತ್ತು. ಈಗ ಬಡ ಮಕ್ಕಳು ಶಿಕ್ಷಣ ವಂಚಿತ ಆಗಬಾರದು ಎಂಬುದೇ ಗುರಿಯಾಗಿದೆ. ಅದನ್ನು ಸಾಧಿಸುವುದಷ್ಟೆ ನನ್ನ ಕೆಲಸ’ ಎನ್ನುತ್ತಾರೆ ಬಾಲಚಂದ್ರ ಹೆಗಡೆ.</p>.<p>*</p>.<p>ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತೆ ನೀಡುವ ಸಲಹೆಯನ್ನು ನಯವಾಗಿಯೇ ನಿರಾಕರಿಸುತ್ತೇನೆ. ಯಾವ ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳುವುದೇ ನನ್ನ ಪಾಲಿಗೆ ದೊಡ್ಡ ಪ್ರಶಸ್ತಿ.<br /><em><strong>-ಬಾಲಚಂದ್ರ ಹೆಗಡೆ,ಬಡ್ಡಿಗೇರಿ ಶಾಲೆ ಶಿಕ್ಷಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ವಿದ್ಯಾರ್ಥಿಗಳಿಗೆ ಪಾಠ ಮಾಡುವುದಷ್ಟೆ ಕರ್ತವ್ಯ ಎಂದು ಭಾವಿಸಿ ಕೆಲಸ ಮಾಡುವ ಶಿಕ್ಷಕರ ನಡುವೆ ಮುಂಡಗೋಡ ತಾಲ್ಲೂಕಿನ ಬಡ್ಡಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಾಲಚಂದ್ರ ಹೆಗಡೆ ವಿಭಿನ್ನ ಎನಿಸುತ್ತಾರೆ.</p>.<p>ತೀರಾ ಹಿಂದುಳಿದ ಪ್ರದೇಶಗಳಲ್ಲೇ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅವರನ್ನು ‘ಕುಗ್ರಾಮದ ಜನರ ಗುರು’ ಎಂದೇ ಹಲವರು ಗುರುತಿಸುತ್ತಾರೆ. ಮುಂಡಗೋಡ ತಾಲ್ಲೂಕಿನ ಅತಿ ಹಿಂದುಳಿದ ಪ್ರದೇಶಗಳಾದ ಬಸವನಕೊಪ್ಪ, ಚೌಡಳ್ಳಿ, ಬಡ್ಡಿಗೇರಿ ಶಾಲೆಗಳಲ್ಲಿ ಕೆಲಸ ಮಾಡಿ, ಗ್ರಾಮಸ್ಥರಲ್ಲಿ ಸಾಕ್ಷರತೆಯ ಬೀಜ ಬಿತ್ತಿರುವುದು ಇದಕ್ಕೆ ಕಾರಣ.</p>.<p>ಬಾಲಚಂದ್ರ ಹೆಗಡೆ ಮೂಲತಃ ಶಿರಸಿ ತಾಲ್ಲೂಕು ಬಿಸಲಕೊಪ್ಪ ಗ್ರಾಮದವರು. ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ನೂರಾರು ಮಕ್ಕಳ ಬಾಳಿಗೆ ಬೆಳಕು ನೀಡಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.</p>.<p class="Subhead"><strong>ಬಡ ಮಕ್ಕಳಿಗೆ ಮನೆಯಲ್ಲಿಯೇ ಆಶ್ರಯ:</strong>ಗೌಳಿಗರು ಹೆಚ್ಚಿರುವ ಬಡ್ಡಿಗೇರಿ ಶಾಲೆಯಲ್ಲಿ ಆರು ವರ್ಷಗಳಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಶಿಕ್ಷಣ ಒದಗಿಸಲು ಮಕ್ಕಳ ಪಾಲಕರನ್ನು ಪ್ರೇರೇಪಿಸುತ್ತಿದ್ದಾರೆ. ಕಡು ಬಡತನದ ಕುಟುಂಬದ ಮಕ್ಕಳಿದ್ದರೆ ಅವರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿ ಶಿಕ್ಷಣ ಒದಗಿಸುತ್ತಿದ್ದಾರೆ.</p>.<p>ಬಸವನಕೊಪ್ಪ ಗ್ರಾಮದಲ್ಲಿ 1999–2002ರಲ್ಲಿ ಶಾಲೆ ಅವಧಿ ಮುಗಿದ ನಂತರ ಪಾಲಕರಿಗೆ ಓದು, ಬರಹ ಕಲಿಸಿ ಅಲ್ಲಿನ ಹತ್ತಾರು ಕುಟುಂಬಗಳನ್ನು ಸಾಕ್ಷರರನ್ನಾಗಿಸಿದ್ದರು. ಈ ಕಾರ್ಯ ಈಗಲೂ ಮುಂದುವರೆದಿದ್ದು ಬಡ್ಡಿಗೇರಿಯಲ್ಲಿ ಅಕ್ಷರ ಪಾಠ ಮುಂದುವರೆದಿದೆ. ಕವಿಯಾಗಿ, ಭಾಷಣಕಾರರಾಗಿಯೂ ಅವರು ಹೆಸರು ಮಾಡಿದ್ದಾರೆ.</p>.<p>‘ಬಡತನದಲ್ಲಿ ಬೆಳೆದ ನನಗೆ ಶಿಕ್ಷಕನಾಗಬೇಕು ಎಂಬ ಗುರಿ ಇತ್ತು. ಈಗ ಬಡ ಮಕ್ಕಳು ಶಿಕ್ಷಣ ವಂಚಿತ ಆಗಬಾರದು ಎಂಬುದೇ ಗುರಿಯಾಗಿದೆ. ಅದನ್ನು ಸಾಧಿಸುವುದಷ್ಟೆ ನನ್ನ ಕೆಲಸ’ ಎನ್ನುತ್ತಾರೆ ಬಾಲಚಂದ್ರ ಹೆಗಡೆ.</p>.<p>*</p>.<p>ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತೆ ನೀಡುವ ಸಲಹೆಯನ್ನು ನಯವಾಗಿಯೇ ನಿರಾಕರಿಸುತ್ತೇನೆ. ಯಾವ ಮಕ್ಕಳು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳುವುದೇ ನನ್ನ ಪಾಲಿಗೆ ದೊಡ್ಡ ಪ್ರಶಸ್ತಿ.<br /><em><strong>-ಬಾಲಚಂದ್ರ ಹೆಗಡೆ,ಬಡ್ಡಿಗೇರಿ ಶಾಲೆ ಶಿಕ್ಷಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>