ಜಿಲ್ಲೆಯಲ್ಲಿ ತಮ್ಮ ಕರ್ತವ್ಯ ಅವಧಿಯ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಉತ್ತರ ಕನ್ನಡದಲ್ಲಿ ಕೆಲಸ ಮಾಡಿದ್ದು ಅತ್ಯಂತ ಉತ್ತಮ ಅನುಭವ ನೀಡಿದೆ. ಭೌಗೋಳಿಕವಾಗಿ ವಿಶಾಲವಾಗಿರುವ ಇಲ್ಲಿ, ಹಲವು ಸವಾಲುಗಳ ನಡುವೆ ಕೆಲಸ ಮಾಡಬೇಕಾಯಿತು. ಕೋವಿಡ್, ಪ್ರವಾಹ, ಕೆಲವು ಚುನಾವಣೆಗಳನ್ನು ಸಮರ್ಪಕವಾಗಿ ನಿಭಾಯಿಸಿದ್ದು ತೃಪ್ತಿ ತಂದಿದೆ’ ಎಂದರು.