ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕಾಡುಕೋಣದ ಕಳೆಬರ ಪತ್ತೆ

Published 1 ಜುಲೈ 2023, 15:44 IST
Last Updated 1 ಜುಲೈ 2023, 15:44 IST
ಅಕ್ಷರ ಗಾತ್ರ

ಕಾರವಾರ: ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಬಳಿ ಪಾಂಡುಪುರ ಹಳ್ಳದಲ್ಲಿ ಶುಕ್ರವಾರ ರಾತ್ರಿ ಕಾಡುಕೋಣದ ಕಳೆಬರ ಪತ್ತೆಯಾಗಿದೆ.

ನೀರಿನಲ್ಲಿ ತೇಲಿ ಬರುತ್ತಿದ್ದ ಕಳೆಬರವನ್ನು ಬೊಗ್ರಿಗದ್ದೆಯ ಕಟ್ಟಿಗೆ ಸಮೀಪದ ಸೇತುವೆ ಬಳಿ ಗ್ರಾಮಸ್ಥರು ತಡೆಹಿಡಿದಿಟ್ಟು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕ್ರೇನ್ ಬಳಸಿ ಮೃತದೇಹವನ್ನು ದಡಕ್ಕೆ ಎಳೆದು ತರಲಾಗಿತ್ತು.

‘ಕಾಡುಕೋಣದ ಕುತ್ತಿಗೆ ಬಳಿ ಗಾಯದ ಗುರುತು ಇದ್ದುದರಿಂದ ಬೇಟೆಗೆ ಯತ್ನಿಸಿರುವ ಸಾಧ್ಯತೆ ಇದೆ’ ಎಂದು ಸ್ಥಳೀಯರು ಶಂಕಿಸಿದ್ದರು.

‘ಕಾಡುಕೋಣ ಸಹಜವಾಗಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಎರಡು ದಿನಗಳಲ್ಲಿ ಖಚಿತ ವರದಿ ಕೈಸೇರಲಿದೆ’ ಎಂದು ಅಂಕೋಲಾ ಆರ್.ಎಫ್.ಒ ಜಿ.ವಿ.ನಾಯ್ಕ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT