ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಯುವಕ ಸಂಚರಿಸಿದ ಪ್ರದೇಶಗಳ ಬಗ್ಗೆ ಮತ್ತು ಕುಟುಂಬದ ಮಾಹಿತಿ ಕಲೆ ಹಾಕಲಾಗಿದೆ. ತಾನು ಪೋಳೆಂ ಚೆಕ್ಪೋಸ್ಟ್ನಲ್ಲಿ ತಪಾಸಣೆಗೆಂದುಮೂರುಗಂಟೆ ನಿಂತಿದ್ದು ಹೊರತಾಗಿ ಮತ್ತೆಲ್ಲೂ ಪ್ರಯಾಣಿಸಿಲ್ಲ ಎಂದು ಹೇಳಿದ್ದಾರೆ. ಉಳಿದಂತೆ, ಅಣಶಿ ಸಮೀಪ ಅವರ ಮನೆ ಒಂದೇ ಇದ್ದು, ಸುತ್ತಮುತ್ತ ಬೇರೆ ಜನವಸತಿಯಿಲ್ಲ. ಮನೆಯಲ್ಲಿ ತಂದೆ, ತಾಯಿ, ಅಣ್ಣ ಇದ್ದಾರೆ.ಅವರ ಆರೋಗ್ಯವನ್ನು ತಪಾಸಣೆ ಮಾಡಲಾಗುತ್ತದೆ.ಅತ್ತಿಗೆ ಮತ್ತು ಮಗು ಅವರ ತಾಯಿ ಮನೆಯಲ್ಲಿದ್ದಾರೆ’ ಎಂದು ತಿಳಿಸಿದರು.