<p><strong>ಸಿದ್ದಾಪುರ:</strong> ನೂರು ವರ್ಷಕ್ಕಿಂತ ಹೆಚ್ಚು ಹಳೆಯದಾಗಿರುವ ಪಟ್ಟಣದ ತಹಸೀಲ್ದಾರರ ಕಾರ್ಯಾಲಯದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಈ ಸರ್ಕಾರಿ ಕಚೇರಿಯ ಒಳಹೊಕ್ಕವರು ಭಯಗೊಳ್ಳುವಂತಿದೆ. ಈ ಕಟ್ಟಡದ ಮುಂಭಾಗವನ್ನು ಬ್ರಿಟಿಷರ ಕಾಲದಲ್ಲಿ ಅಂದರೆ 1881ರ ಸುಮಾರಿಗೆ ನಿರ್ಮಾಣ ಮಾಡಲಾಗಿದೆ. ಆದರೆ ಇದೇ ಕಟ್ಟಡದ ಹಿಂಭಾಗವನ್ನು 20-25 ವರ್ಷಗಳ ಹಿಂದೆ ದುರಸ್ತಿ ಮಾಡಲಾಗಿದೆ. ಕಟ್ಟಡದ ಮುಂದಿನ ಭಾಗ ಇಂದಿನ ಅಗತ್ಯಕ್ಕೆ ಹೊಂದಿಕೊಳ್ಳದಿದ್ದರೂ, ತಲೆಯ ಮೇಲೆ ತಕ್ಷಣ ಬೀಳುವಂತೆ ಭಯಹುಟ್ಟಿಸುವದಿಲ್ಲ. ಆದರೆ ಇದೇ ಕಟ್ಟಡದ ಹಿಂಭಾಗ ಮಾತ್ರ ಶೋಚನೀಯ ಸ್ಥಿತಿಯಲ್ಲಿದೆ. <br /> <br /> ಇಲ್ಲಿ ಕೆಲಸ ಮಾಡುವ ಕಂದಾಯ ಇಲಾಖೆಯ ಸಿಬ್ಬಂದಿ ಅಕ್ಷರಶಃ ಜೀವವನ್ನು ಕೈಯಲ್ಲಿ ಹಿಡಿದೇ ಕೆಲಸ ಮಾಡುತ್ತಾರೆ. ಕಂದಾಯ ಇಲಾಖೆಯ ಮೂವರು ಶಿರಸ್ತೇದಾರರು ಮತ್ತು ಇತರ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುವ ವಿಭಾಗ ಮತ್ತು ಕಂಪ್ಯೂಟರೀಕೃತ ಪಹಣಿ ಪತ್ರಿಕೆಗಳ ವಿಭಾಗವೂ ಕೂಡ ಈ ಭಾಗದಲ್ಲಿದೆ. ಆದ್ದರಿಂದ ಇಲ್ಲಿಗೆ ಸಾರ್ವಜನಿಕರು ದಿನನಿತ್ಯವೂ ಭೇಟಿ ನೀಡುತ್ತಲೇ ಇರುತ್ತಾರೆ. ಕಿತ್ತು ಬೀಳುತ್ತಿರುವ ಸಿಮೆಂಟ್ ಛಾವಣಿ, ಒಡೆದು ಹೋದ ಬೀಮ್(ತೊಲೆ)ಗಳು, ಬೀಳುವಂತಿರುವ ಗೋಡೆಗಳು, ಹಾಳಾದ ಕಿಟಕಿಗಳು ನಾಗರಿಕರಿಗೆ ಭಯ ಹುಟ್ಟಿಸುತ್ತವೆ. <br /> <br /> ಶಿರಸ್ತೇದಾರರೊಬ್ಬರು ಮತ್ತು ಇತರ ಮೂರ್ನಾಲ್ಕು ಸಿಬ್ಬಂದಿ ಕೆಲಸ ಮಾಡುವ ಕೊಠಡಿಯಲ್ಲಿ ಇತ್ತೀಚೆಗೆ ಮೇಲ್ಛಾವಣಿಯ ಸಾಕಷ್ಟು ಅಗಲವಾದ ಸಿಮೆಂಟ್ ಕಿತ್ತು ಕೆಳಗೆ ಬಿದ್ದಿದೆ. ಆದರೆ ಅಂದು ರಜೆಯ ದಿನವಾಗಿದ್ದರಿಂದ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ಈ ತಹಸೀಲ್ದಾರ ಕಚೇರಿಗೆ ಹೊಂದಿಕೊಂಡಂತೆ ಇದ್ದ ಪೊಲೀಸ್ ಠಾಣೆಯೂ ಕೆಲವು ವರ್ಷಗಳ ಹಿಂದೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. <br /> <br /> ಹೊಸ ಕಟ್ಟಡ?: ಈ ಮಧ್ಯೆ ತಾಲ್ಲೂಕಿಗೆ ಅತ್ಯಗತ್ಯವಾಗಿರುವ ಮಿನಿ ವಿಧಾನಸೌಧ ನಿರ್ಮಾಣ ಮಾತ್ರ ಗಗನ ಕುಸುಮವಾಗಿಯೇ ಉಳಿದಿದೆ. ಪಟ್ಟಣದಲ್ಲಿರುವ ಬಹಳಷ್ಟು ಸರ್ಕಾರಿ ಕಚೇರಿಗಳು ಸುಸಜ್ಜಿತವಾಗಿವೆ. ಕೆಲವು ಕಟ್ಟಡಗಳಂತೂ ಶ್ರೀಮಂತಿಕೆಯನ್ನೇ ಹೊರಸೂಸುತ್ತವೆ. ಆದರೆ ಜನರು ನಿತ್ಯವೂ ಭೇಟಿ ನೀಡುವ ತಹಸೀಲ್ದಾರ ಕಾರ್ಯಾಲಯ ಮಾತ್ರ ಅಧಿಕಾರಸ್ಥರ ಕಣ್ಣಿಗೆ ಬಿದ್ದಂತಿಲ್ಲ. <br /> ‘ತಹಸೀಲ್ದಾರ ಕಾರ್ಯಾಲಯ ಕಟ್ಟಡವಿರುವಲ್ಲಿ ಕಂದಾಯ ಇಲಾಖೆಗೆ ಸೇರಿದ 27 ಗುಂಟೆ ಸ್ಥಳವಿದ್ದು, ಈ ಸ್ಥಳದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನಕ್ಷೆ ಸಿದ್ಧಪಡಿಸಲಾಗಿದೆ. <br /> <br /> ಹಣಕಾಸು ಇಲಾಖೆಯ ಒಪ್ಪಿಗಾಗಿ ಕಾಯಲಾಗುತ್ತಿದೆ’ ಎಂದು ತಹಸೀಲ್ದಾರ ಗಣಪತಿ ಕಟ್ಟಿನಕೆರೆ ವಿವರ ನೀಡುತ್ತಾರೆ. ಮತ್ತೊಂದು ಮಳೆಗಾಲ ಬರುತ್ತಿದೆ. ಸೋರುವ ತಹಸೀಲ್ದಾರ ಕಚೇರಿಯ ಹಳೆಯ ಕಟ್ಟಡ ಮಾತ್ರ ಕಳೆದ ಮಳೆಗಾಲದಂತೆ ಈ ವರ್ಷವೂ ಸೋರುತ್ತಲೇ ಸಾರ್ವಜನಿಕರನ್ನು ಸ್ವಾಗತಿಸಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ:</strong> ನೂರು ವರ್ಷಕ್ಕಿಂತ ಹೆಚ್ಚು ಹಳೆಯದಾಗಿರುವ ಪಟ್ಟಣದ ತಹಸೀಲ್ದಾರರ ಕಾರ್ಯಾಲಯದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಈ ಸರ್ಕಾರಿ ಕಚೇರಿಯ ಒಳಹೊಕ್ಕವರು ಭಯಗೊಳ್ಳುವಂತಿದೆ. ಈ ಕಟ್ಟಡದ ಮುಂಭಾಗವನ್ನು ಬ್ರಿಟಿಷರ ಕಾಲದಲ್ಲಿ ಅಂದರೆ 1881ರ ಸುಮಾರಿಗೆ ನಿರ್ಮಾಣ ಮಾಡಲಾಗಿದೆ. ಆದರೆ ಇದೇ ಕಟ್ಟಡದ ಹಿಂಭಾಗವನ್ನು 20-25 ವರ್ಷಗಳ ಹಿಂದೆ ದುರಸ್ತಿ ಮಾಡಲಾಗಿದೆ. ಕಟ್ಟಡದ ಮುಂದಿನ ಭಾಗ ಇಂದಿನ ಅಗತ್ಯಕ್ಕೆ ಹೊಂದಿಕೊಳ್ಳದಿದ್ದರೂ, ತಲೆಯ ಮೇಲೆ ತಕ್ಷಣ ಬೀಳುವಂತೆ ಭಯಹುಟ್ಟಿಸುವದಿಲ್ಲ. ಆದರೆ ಇದೇ ಕಟ್ಟಡದ ಹಿಂಭಾಗ ಮಾತ್ರ ಶೋಚನೀಯ ಸ್ಥಿತಿಯಲ್ಲಿದೆ. <br /> <br /> ಇಲ್ಲಿ ಕೆಲಸ ಮಾಡುವ ಕಂದಾಯ ಇಲಾಖೆಯ ಸಿಬ್ಬಂದಿ ಅಕ್ಷರಶಃ ಜೀವವನ್ನು ಕೈಯಲ್ಲಿ ಹಿಡಿದೇ ಕೆಲಸ ಮಾಡುತ್ತಾರೆ. ಕಂದಾಯ ಇಲಾಖೆಯ ಮೂವರು ಶಿರಸ್ತೇದಾರರು ಮತ್ತು ಇತರ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುವ ವಿಭಾಗ ಮತ್ತು ಕಂಪ್ಯೂಟರೀಕೃತ ಪಹಣಿ ಪತ್ರಿಕೆಗಳ ವಿಭಾಗವೂ ಕೂಡ ಈ ಭಾಗದಲ್ಲಿದೆ. ಆದ್ದರಿಂದ ಇಲ್ಲಿಗೆ ಸಾರ್ವಜನಿಕರು ದಿನನಿತ್ಯವೂ ಭೇಟಿ ನೀಡುತ್ತಲೇ ಇರುತ್ತಾರೆ. ಕಿತ್ತು ಬೀಳುತ್ತಿರುವ ಸಿಮೆಂಟ್ ಛಾವಣಿ, ಒಡೆದು ಹೋದ ಬೀಮ್(ತೊಲೆ)ಗಳು, ಬೀಳುವಂತಿರುವ ಗೋಡೆಗಳು, ಹಾಳಾದ ಕಿಟಕಿಗಳು ನಾಗರಿಕರಿಗೆ ಭಯ ಹುಟ್ಟಿಸುತ್ತವೆ. <br /> <br /> ಶಿರಸ್ತೇದಾರರೊಬ್ಬರು ಮತ್ತು ಇತರ ಮೂರ್ನಾಲ್ಕು ಸಿಬ್ಬಂದಿ ಕೆಲಸ ಮಾಡುವ ಕೊಠಡಿಯಲ್ಲಿ ಇತ್ತೀಚೆಗೆ ಮೇಲ್ಛಾವಣಿಯ ಸಾಕಷ್ಟು ಅಗಲವಾದ ಸಿಮೆಂಟ್ ಕಿತ್ತು ಕೆಳಗೆ ಬಿದ್ದಿದೆ. ಆದರೆ ಅಂದು ರಜೆಯ ದಿನವಾಗಿದ್ದರಿಂದ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ. ಈ ತಹಸೀಲ್ದಾರ ಕಚೇರಿಗೆ ಹೊಂದಿಕೊಂಡಂತೆ ಇದ್ದ ಪೊಲೀಸ್ ಠಾಣೆಯೂ ಕೆಲವು ವರ್ಷಗಳ ಹಿಂದೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. <br /> <br /> ಹೊಸ ಕಟ್ಟಡ?: ಈ ಮಧ್ಯೆ ತಾಲ್ಲೂಕಿಗೆ ಅತ್ಯಗತ್ಯವಾಗಿರುವ ಮಿನಿ ವಿಧಾನಸೌಧ ನಿರ್ಮಾಣ ಮಾತ್ರ ಗಗನ ಕುಸುಮವಾಗಿಯೇ ಉಳಿದಿದೆ. ಪಟ್ಟಣದಲ್ಲಿರುವ ಬಹಳಷ್ಟು ಸರ್ಕಾರಿ ಕಚೇರಿಗಳು ಸುಸಜ್ಜಿತವಾಗಿವೆ. ಕೆಲವು ಕಟ್ಟಡಗಳಂತೂ ಶ್ರೀಮಂತಿಕೆಯನ್ನೇ ಹೊರಸೂಸುತ್ತವೆ. ಆದರೆ ಜನರು ನಿತ್ಯವೂ ಭೇಟಿ ನೀಡುವ ತಹಸೀಲ್ದಾರ ಕಾರ್ಯಾಲಯ ಮಾತ್ರ ಅಧಿಕಾರಸ್ಥರ ಕಣ್ಣಿಗೆ ಬಿದ್ದಂತಿಲ್ಲ. <br /> ‘ತಹಸೀಲ್ದಾರ ಕಾರ್ಯಾಲಯ ಕಟ್ಟಡವಿರುವಲ್ಲಿ ಕಂದಾಯ ಇಲಾಖೆಗೆ ಸೇರಿದ 27 ಗುಂಟೆ ಸ್ಥಳವಿದ್ದು, ಈ ಸ್ಥಳದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ನಕ್ಷೆ ಸಿದ್ಧಪಡಿಸಲಾಗಿದೆ. <br /> <br /> ಹಣಕಾಸು ಇಲಾಖೆಯ ಒಪ್ಪಿಗಾಗಿ ಕಾಯಲಾಗುತ್ತಿದೆ’ ಎಂದು ತಹಸೀಲ್ದಾರ ಗಣಪತಿ ಕಟ್ಟಿನಕೆರೆ ವಿವರ ನೀಡುತ್ತಾರೆ. ಮತ್ತೊಂದು ಮಳೆಗಾಲ ಬರುತ್ತಿದೆ. ಸೋರುವ ತಹಸೀಲ್ದಾರ ಕಚೇರಿಯ ಹಳೆಯ ಕಟ್ಟಡ ಮಾತ್ರ ಕಳೆದ ಮಳೆಗಾಲದಂತೆ ಈ ವರ್ಷವೂ ಸೋರುತ್ತಲೇ ಸಾರ್ವಜನಿಕರನ್ನು ಸ್ವಾಗತಿಸಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>