ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ | ಕಲುಷಿತ ನೀರು ಕುಡಿದು 14 ಜನ ಅಸ್ವಸ್ಥ

Published 21 ಜುಲೈ 2023, 14:42 IST
Last Updated 21 ಜುಲೈ 2023, 14:42 IST
ಅಕ್ಷರ ಗಾತ್ರ

ಹರಪನಹಳ್ಳಿ : ತಾಲ್ಲೂಕಿನ ಕಣಿವಿಹಳ್ಳಿ ಗ್ರಾಮದಲ್ಲಿ ಗುರುವಾರ ಕಲುಷಿತ ನೀರು ಕುಡಿದು 14 ಜನರಿಗೆ ವಾಂತಿ ಭೇದಿಯಾಗಿದ್ದು, ತೀವ್ರ ಅಸ್ವಸ್ಥರಾದ ಒಬ್ಬರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ನಂದಿಬೇವೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕಣಿವಿಹಳ್ಳಿಯಲ್ಲಿ ಅಸ್ವಸ್ಥಗೊಂಡ ಜನರೆಲ್ಲ ಒಂದೇ ಓಣಿಯಲ್ಲಿದ್ದಾರೆ. ಆ ಪ್ರದೇಶಕ್ಕೆ ಪೂರೈಸುವ ನೀರಿನ ಪೈಪ್‌  ಒಡೆದು, ಚರಂಡಿ ನೀರು ಸೇರಿದ್ದರಿಂದ ವಾಂತಿ ಭೇದಿಯಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರಿಗೆ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT