<p>ಹಗರಿಬೊಮ್ಮನಹಳ್ಳಿ: ಆಷಾಢದಲ್ಲಿ ಮಲ್ಲಿಗೆ ಹೂವಿಗೆ ಉತ್ತಮ ಬೆಲೆ ಸಿಗದೇ ಪರದಾಡುತ್ತಿದ್ದ ರೈತರಿಗೆ ಬಕ್ರೀದ್ ಕಾರಣಕ್ಕೆ ಉತ್ತಮ ಬೆಲೆ ದೊರೆತಿದೆ.</p>.<p>ತಾಲ್ಲೂಕಿನಲ್ಲಿ 316 ಹೆಕ್ಟೇರ್ನಲ್ಲಿ ಹಡಗಲಿ ಮಲ್ಲಿಗೆ ಬೆಳೆಯಲಾಗಿದೆ. ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ ಶೇಕಡ 70ರಷ್ಟು ರೈತರು ಮಲ್ಲಿಗೆ ಬೆಳೆದಿದ್ದಾರೆ. ಹೊಸ ಆನಂದೇವನಹಳ್ಳಿ, ಹಂಪಾಪಟ್ಟಣ, ಕಡಲಬಾಳು, ಬ್ಯಾಸಿಗಿದೇರಿ, ಶಿವಾನಂದನಗರ, ಕೇಶವರಾಯನಬಂಡಿ, ಕೆಚ್ಚಿನಬಂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೂರಾರು ರೈತರು ಮಲ್ಲಿಗೆಯಿಂದಲೇ ಬದುಕು ಕಂಡುಕೊಂಡಿದ್ದಾರೆ.</p>.<p>ಮಹಿಳಾ ಕಾರ್ಮಿಕರಿಗೆ ಮಲ್ಲಿಗೆ ಬಿಡಿಸುವ ಕಾರ್ಯ ವರದಾನವಾಗಿದೆ. ಪ್ರತಿ ಕೆ.ಜಿಗೆ ₹ 100 ದೊರೆಯುತ್ತದೆ. ತಾಲ್ಲೂಕಿನಿಂದ ನಿತ್ಯ ನಾಲ್ಕು ಟನ್ ಮಲ್ಲಿಗೆ ಹೊಸಪೇಟೆ, ಗಂಗಾವತಿ, ಕೊಟ್ಟೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಚಿತ್ರದುರ್ಗ ಸೇರಿದಂತೆ ಹೊರ ರಾಜ್ಯಗಳಿಗೂ ರವಾನೆಯಾಗುತ್ತಿದೆ.</p>.<p>‘ಪ್ರತಿ ಆಷಾಢದಲ್ಲಿ ಕೆ.ಜಿ. ಮಲ್ಲಿಗೆಗೆ ಕೇವಲ ₹100–₹120 ದೊರೆಯುತ್ತಿತ್ತು. ಕಾರ್ಮಿಕರ, ಸಾರಿಗೆ ವೆಚ್ಚ ಸೇರಿದಂತೆ ರೈತರ ಕೈಗೆ ಅಲ್ಪಸ್ವಲ್ಪ ಆದಾಯ ಮಾತ್ರ ಸೇರುತ್ತಿತ್ತು. ಆದರೆ ಈ ಬಾರಿ ಬಕ್ರೀದ್ ಕಾರಣಕ್ಕಾಗಿ ₹300 ಸಿಗುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ’ ಎನ್ನುತ್ತಾರೆ ಪಿಂಜಾರ್ ಹೆಗ್ಡಾಳು ಗ್ರಾಮದ ರೈತ ಜೆ.ಎಂ.ಚಂದ್ರಾಧರ ಸ್ವಾಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಗರಿಬೊಮ್ಮನಹಳ್ಳಿ: ಆಷಾಢದಲ್ಲಿ ಮಲ್ಲಿಗೆ ಹೂವಿಗೆ ಉತ್ತಮ ಬೆಲೆ ಸಿಗದೇ ಪರದಾಡುತ್ತಿದ್ದ ರೈತರಿಗೆ ಬಕ್ರೀದ್ ಕಾರಣಕ್ಕೆ ಉತ್ತಮ ಬೆಲೆ ದೊರೆತಿದೆ.</p>.<p>ತಾಲ್ಲೂಕಿನಲ್ಲಿ 316 ಹೆಕ್ಟೇರ್ನಲ್ಲಿ ಹಡಗಲಿ ಮಲ್ಲಿಗೆ ಬೆಳೆಯಲಾಗಿದೆ. ಪಿಂಜಾರ್ ಹೆಗ್ಡಾಳು ಗ್ರಾಮದಲ್ಲಿ ಶೇಕಡ 70ರಷ್ಟು ರೈತರು ಮಲ್ಲಿಗೆ ಬೆಳೆದಿದ್ದಾರೆ. ಹೊಸ ಆನಂದೇವನಹಳ್ಳಿ, ಹಂಪಾಪಟ್ಟಣ, ಕಡಲಬಾಳು, ಬ್ಯಾಸಿಗಿದೇರಿ, ಶಿವಾನಂದನಗರ, ಕೇಶವರಾಯನಬಂಡಿ, ಕೆಚ್ಚಿನಬಂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೂರಾರು ರೈತರು ಮಲ್ಲಿಗೆಯಿಂದಲೇ ಬದುಕು ಕಂಡುಕೊಂಡಿದ್ದಾರೆ.</p>.<p>ಮಹಿಳಾ ಕಾರ್ಮಿಕರಿಗೆ ಮಲ್ಲಿಗೆ ಬಿಡಿಸುವ ಕಾರ್ಯ ವರದಾನವಾಗಿದೆ. ಪ್ರತಿ ಕೆ.ಜಿಗೆ ₹ 100 ದೊರೆಯುತ್ತದೆ. ತಾಲ್ಲೂಕಿನಿಂದ ನಿತ್ಯ ನಾಲ್ಕು ಟನ್ ಮಲ್ಲಿಗೆ ಹೊಸಪೇಟೆ, ಗಂಗಾವತಿ, ಕೊಟ್ಟೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಚಿತ್ರದುರ್ಗ ಸೇರಿದಂತೆ ಹೊರ ರಾಜ್ಯಗಳಿಗೂ ರವಾನೆಯಾಗುತ್ತಿದೆ.</p>.<p>‘ಪ್ರತಿ ಆಷಾಢದಲ್ಲಿ ಕೆ.ಜಿ. ಮಲ್ಲಿಗೆಗೆ ಕೇವಲ ₹100–₹120 ದೊರೆಯುತ್ತಿತ್ತು. ಕಾರ್ಮಿಕರ, ಸಾರಿಗೆ ವೆಚ್ಚ ಸೇರಿದಂತೆ ರೈತರ ಕೈಗೆ ಅಲ್ಪಸ್ವಲ್ಪ ಆದಾಯ ಮಾತ್ರ ಸೇರುತ್ತಿತ್ತು. ಆದರೆ ಈ ಬಾರಿ ಬಕ್ರೀದ್ ಕಾರಣಕ್ಕಾಗಿ ₹300 ಸಿಗುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ’ ಎನ್ನುತ್ತಾರೆ ಪಿಂಜಾರ್ ಹೆಗ್ಡಾಳು ಗ್ರಾಮದ ರೈತ ಜೆ.ಎಂ.ಚಂದ್ರಾಧರ ಸ್ವಾಮಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>