‘ಪತ್ರಿಕೆ ಹಂಚಿ ಶಿಕ್ಷಣದ ಖರ್ಚನ್ನು ನಾನೇ ಸಂಪಾದಿಸುತ್ತಿದ್ದೆ. ಮೊಬೈಲ್, ಜಾಲತಾಣಗಳಿಂದ ದೂರವಾಗಿ ಕಷ್ಟಪಟ್ಟ ಅಧ್ಯಯನ ಮಾಡುತ್ತಿದ್ದೆ. ಗ್ರಂಥಾಲಯದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದೆ. ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರ ಮಾರ್ಗದರ್ಶನದಲ್ಲಿ ರ್ಯಾಂಕ್ ಸಾಧನೆ ಸಾಧ್ಯವಾಯಿತು. ಸದ್ಯ ಬೆಂಗಳೂರು ವಿಶ್ವವಿದ್ಯಾಯಲದಲ್ಲಿ ಎಂ.ಎ. ಓದುತ್ತಿದ್ದು, ಐಎಎಸ್ ಗುರಿ ಹೊಂದಿದ್ದೇನೆ’ ಎಂದು ವಿಕಾಸ್ ಮಂತ್ರೋಡಿ ಹೇಳಿದರು.