<p><strong>ಮರಿಯಮ್ಮನಹಳ್ಳಿ</strong>: ಸಮೀಪದ ನಂದಿಬಂಡಿ ಗ್ರಾಮದಲ್ಲಿ ಶನಿವಾರ ನಡೆದಿದ್ದ ಮನೆಗಳ್ಳನ ಪ್ರಕರಣವನ್ನು ಕೇವಲ 24ತಾಸಿನಲ್ಲಿ ಪತ್ತೆ ಹಚ್ಚಿದ ಸ್ಥಳೀಯ ಪೊಲೀಸರು, ಆರೋಪಿಯನ್ನು ಬಂಧಿಸಿ ಆತನಿಂದ ₹53ಸಾವಿರ ಮೌಲ್ಯದ ಬಂಗಾರ–ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ನಂದಿಬಂಡಿ ಗ್ರಾಮದ ಯು.ಮಹೇಶ(35) ಬಂಧಿತ ಆರೋಪಿ.</p>.<p><strong>ಘಟನೆ ವಿವರ:</strong> </p><p>ನಂದಿಬಂಡಿ ಗ್ರಾಮದ ಪುಷ್ಪ ಹಾಗೂ ಅವರ ಮನೆಯವರು ಶನಿವಾರ ಬೆಳಿಗ್ಗೆ 10ಗಂಟೆಗೆ ಮನೆಯ ಬೀಗ ಹಾಕಿ ಕೆಲಕ್ಕೆ ಹೋಗಿದ್ದಾರೆ. ಮಧ್ಯಾಹ್ನ ಮನೆಗೆ ವಾಪಾಸು ಬಂದಾಗ ಮನೆ ಕಳ್ಳತನವಾಗಿದ್ದು ಗೊತ್ತಾಗಿದೆ. ಮನೆಯ ಬೀಗ ಮುರಿದು ಒಳಗಡೆಯಿದ್ದ ಅಲೆಮಾರದಲ್ಲಿದ್ದ ₹25ಸಾವಿರ ಮೌಲ್ಯದ 4 ಗ್ರಾಂ ಚಿನ್ನದ ಬೆಂಡೋಲೆ, ₹10ಸಾವಿರ ಮೌಲ್ಯದ 2 ಗ್ರಾಂ ಚಿನ್ನದುಂಗುರ, ಸಾವಿರ ರೂಪಾಯಿ ಬೆಲೆಬಾಳುವ ಮೂಗುತಿ, ₹17ಸಾವಿರ ಮೌಲ್ಯದ 27ಗ್ರಾಂನ ಎರಡು ಜೊತೆ ಬೆಳ್ಳಿ ಕಾಲುಗೆಜ್ಜೆ ಹಾಗೂ ₹15ಸಾವಿರ ನಗದು ಸೇರಿದಂತೆ ಒಟ್ಟು ₹68ಸಾವಿರ ನಗದು ಹಾಗೂ ಆಭರಣಗಳನ್ನು ಕಳ್ಳತನವಾದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<p>ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ಅದೇ ಗ್ರಾಮದ ಆರೋಪಿ ಮಹೇಶನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮರಿಯಮ್ಮನಹಳ್ಳಿ</strong>: ಸಮೀಪದ ನಂದಿಬಂಡಿ ಗ್ರಾಮದಲ್ಲಿ ಶನಿವಾರ ನಡೆದಿದ್ದ ಮನೆಗಳ್ಳನ ಪ್ರಕರಣವನ್ನು ಕೇವಲ 24ತಾಸಿನಲ್ಲಿ ಪತ್ತೆ ಹಚ್ಚಿದ ಸ್ಥಳೀಯ ಪೊಲೀಸರು, ಆರೋಪಿಯನ್ನು ಬಂಧಿಸಿ ಆತನಿಂದ ₹53ಸಾವಿರ ಮೌಲ್ಯದ ಬಂಗಾರ–ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ನಂದಿಬಂಡಿ ಗ್ರಾಮದ ಯು.ಮಹೇಶ(35) ಬಂಧಿತ ಆರೋಪಿ.</p>.<p><strong>ಘಟನೆ ವಿವರ:</strong> </p><p>ನಂದಿಬಂಡಿ ಗ್ರಾಮದ ಪುಷ್ಪ ಹಾಗೂ ಅವರ ಮನೆಯವರು ಶನಿವಾರ ಬೆಳಿಗ್ಗೆ 10ಗಂಟೆಗೆ ಮನೆಯ ಬೀಗ ಹಾಕಿ ಕೆಲಕ್ಕೆ ಹೋಗಿದ್ದಾರೆ. ಮಧ್ಯಾಹ್ನ ಮನೆಗೆ ವಾಪಾಸು ಬಂದಾಗ ಮನೆ ಕಳ್ಳತನವಾಗಿದ್ದು ಗೊತ್ತಾಗಿದೆ. ಮನೆಯ ಬೀಗ ಮುರಿದು ಒಳಗಡೆಯಿದ್ದ ಅಲೆಮಾರದಲ್ಲಿದ್ದ ₹25ಸಾವಿರ ಮೌಲ್ಯದ 4 ಗ್ರಾಂ ಚಿನ್ನದ ಬೆಂಡೋಲೆ, ₹10ಸಾವಿರ ಮೌಲ್ಯದ 2 ಗ್ರಾಂ ಚಿನ್ನದುಂಗುರ, ಸಾವಿರ ರೂಪಾಯಿ ಬೆಲೆಬಾಳುವ ಮೂಗುತಿ, ₹17ಸಾವಿರ ಮೌಲ್ಯದ 27ಗ್ರಾಂನ ಎರಡು ಜೊತೆ ಬೆಳ್ಳಿ ಕಾಲುಗೆಜ್ಜೆ ಹಾಗೂ ₹15ಸಾವಿರ ನಗದು ಸೇರಿದಂತೆ ಒಟ್ಟು ₹68ಸಾವಿರ ನಗದು ಹಾಗೂ ಆಭರಣಗಳನ್ನು ಕಳ್ಳತನವಾದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.</p>.<p>ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ಅದೇ ಗ್ರಾಮದ ಆರೋಪಿ ಮಹೇಶನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>