<p><strong>ಹೊಸಪೇಟೆ (ವಿಜಯನಗರ):</strong> ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಮುಂಭಾಗ ಬಿರುಕು ಬಿಟ್ಟಿರುವ ಗೋಪುರದ ಸಮಗ್ರ ಸಂರಕ್ಷಣೆಗೆ 3ಡಿ ಮಾದರಿ ಸಿದ್ಧಪಡಿಸಲು ಸೋಮವಾರದಿಂದ ಆರಂಭವಾಗಿದ್ದ ಡ್ರೋನ್ ಕ್ಯಾಮೆರಾ ಒಳಗೊಂಡ ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಡಿಪಿಎಸ್) ಮತ್ತು ಲಿಡಾರ್ ಸಮೀಕ್ಷೆ ಮಂಗಳವಾರ ಮಧ್ಯಾಹ್ನ ಕೊನೆಗೊಂಡಿತು.</p>.<p>‘ಈ 3ಡಿ ಮಾದರಿ ಸಮೀಕ್ಷೆ ಸೆಂಟಿಮೀಟರ್ ಅಳತೆಯಲ್ಲೂ ನ್ಯೂನತೆ ಬರದಂತಹ ಕರಾರುವಕ್ಕಾದ ಚಿತ್ರಣ ನೀಡುತ್ತದೆ. ಮುಂದಿನ ದಿನಗಳಲ್ಲಿ ಗೋಪುರದ ದುರಸ್ತಿ ಕಾರ್ಯಗಳ ಯೋಜನೆ ರೂಪಿಸುವುದಕ್ಕೆ ನೆರವಾಗಲಿದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಹಂಪಿ ವೃತ್ತದ ಅಧೀಕ್ಷಕ ನಿಹಿಲ್ ದಾಸ್ ತಿಳಿಸಿದ್ದಾರೆ.</p>.<p>‘3ಡಿ ಮಾದರಿ ಸಿದ್ಧಗೊಂಡ ಬಳಿಕ ಬಿರುಕು ಮುಚ್ಚುವ ಮತ್ತು ಗೋಪುರದ ಸಂಪೂರ್ಣ ಸಂರಕ್ಷಣೆಯ ಯೋಜನೆ ರೂಪಿಸಲಾಗುವುದು. ಇದಕ್ಕೆ ಬಹಳ ಸಮಯ ಬೇಕಾಗಬಹುದು’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.</p>.<p>ಡ್ರೋನ್ ಸರ್ವೆ ಕೊನೆಗೊಂಡ ಕಾರಣ ಮಂಗಳವಾರ ಮಧ್ಯಾಹ್ನದಿಂದ ಸಾರ್ವಜನಿಕರಿಗೆ ಇದೇ ಗೋಪುರದ ಮೂಲಕ ದೇವಸ್ಥಾನಕ್ಕೆ ತೆರಳಲು ಅವಕಾಶ ಕಲ್ಪಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಮುಂಭಾಗ ಬಿರುಕು ಬಿಟ್ಟಿರುವ ಗೋಪುರದ ಸಮಗ್ರ ಸಂರಕ್ಷಣೆಗೆ 3ಡಿ ಮಾದರಿ ಸಿದ್ಧಪಡಿಸಲು ಸೋಮವಾರದಿಂದ ಆರಂಭವಾಗಿದ್ದ ಡ್ರೋನ್ ಕ್ಯಾಮೆರಾ ಒಳಗೊಂಡ ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಡಿಪಿಎಸ್) ಮತ್ತು ಲಿಡಾರ್ ಸಮೀಕ್ಷೆ ಮಂಗಳವಾರ ಮಧ್ಯಾಹ್ನ ಕೊನೆಗೊಂಡಿತು.</p>.<p>‘ಈ 3ಡಿ ಮಾದರಿ ಸಮೀಕ್ಷೆ ಸೆಂಟಿಮೀಟರ್ ಅಳತೆಯಲ್ಲೂ ನ್ಯೂನತೆ ಬರದಂತಹ ಕರಾರುವಕ್ಕಾದ ಚಿತ್ರಣ ನೀಡುತ್ತದೆ. ಮುಂದಿನ ದಿನಗಳಲ್ಲಿ ಗೋಪುರದ ದುರಸ್ತಿ ಕಾರ್ಯಗಳ ಯೋಜನೆ ರೂಪಿಸುವುದಕ್ಕೆ ನೆರವಾಗಲಿದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಹಂಪಿ ವೃತ್ತದ ಅಧೀಕ್ಷಕ ನಿಹಿಲ್ ದಾಸ್ ತಿಳಿಸಿದ್ದಾರೆ.</p>.<p>‘3ಡಿ ಮಾದರಿ ಸಿದ್ಧಗೊಂಡ ಬಳಿಕ ಬಿರುಕು ಮುಚ್ಚುವ ಮತ್ತು ಗೋಪುರದ ಸಂಪೂರ್ಣ ಸಂರಕ್ಷಣೆಯ ಯೋಜನೆ ರೂಪಿಸಲಾಗುವುದು. ಇದಕ್ಕೆ ಬಹಳ ಸಮಯ ಬೇಕಾಗಬಹುದು’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.</p>.<p>ಡ್ರೋನ್ ಸರ್ವೆ ಕೊನೆಗೊಂಡ ಕಾರಣ ಮಂಗಳವಾರ ಮಧ್ಯಾಹ್ನದಿಂದ ಸಾರ್ವಜನಿಕರಿಗೆ ಇದೇ ಗೋಪುರದ ಮೂಲಕ ದೇವಸ್ಥಾನಕ್ಕೆ ತೆರಳಲು ಅವಕಾಶ ಕಲ್ಪಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>