ಮಾಜಿ ದೇವದಾಸಿಯರಿಗೆ ನಿವೇಶನ ಕೊಡಬೇಕು. ಮನೆ ಕಟ್ಟಿಸಿಕೊಡಬೇಕು. ಉಳುಮೆ ಮಾಡಿ ಬದುಕಲು ಕೃಷಿ ಜಮೀನು ಕೊಡಬೇಕು. ಪಿಂಚಣಿ ಕೊಡಬೇಕು. ಸರ್ವೇಯಿಂದ ಅನೇಕ ಮಾಜಿ ದೇವದಾಸಿಯರು ಹೊರಗುಳಿದಿದ್ದಾರೆ. ಹೊಸದಾಗಿ ಸರ್ವೇ ನಡೆಸಿ, ಬಿಟ್ಟು ಹೋದವರ ಹೆಸರು ಸೇರಿಸಿ, ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.