ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಪೂರ್ವದಿಂದಲೂ ಉಳುಮೆ ಮಾಡುತ್ತಿರುವ ಅರಣ್ಯದಂಚಿನ ರೈತರಿಗೆ ಪಟ್ಟಾ ವಿತರಿಸಬೇಕು, ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು, ಸಂಡೂರು ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಬೇಕು, ತಾಲ್ಲೂಕಿನ 3,800 ಎಕರೆ ಪಹಣಿಗಳಲ್ಲಿ ಮೂಲ ವಾರಸುದಾರರ ಹೆಸರನ್ನು ರದ್ದುಪಡಿಸಿ ‘ಬ’ ಕರಾಬು ಎಂದು ನಮೂದಾಗಿದೆ, ಪಹಣಿಯಲ್ಲಿ ಮೊದಲಿನಂತೆ ಇರುವ ವಾರಸುದಾರರ ಹೆಸರು ಸೇರಿಸಬೇಕು ಎಂಬ ಹಲವು ಹಕ್ಕೊತ್ತಾಯಗಳನ್ನು ಮಾಡಲಾಗುವುದು’ ಎಂದರು.