‘ಮತದಾರರು ಪ್ರಬುದ್ಧರಿದ್ದಾರೆ. ಲಾಂಛನದಲ್ಲಿ ಕಮಲ ಇದೆ ಅಂತ ಅದನ್ನು ನೋಡಿ ಕಮಲಕ್ಕೆ ಮತ ಹಾಕುತ್ತಾರೆಯೇ? ಹಾಗಿದ್ದರೆ ‘ಕೈ’ ಕಂಡರೆ ಅದನ್ನು ಬಟ್ಟೆಯಲ್ಲಿ ಮುಚ್ಚಬೇಕೇ? ಅಸಂಬದ್ಧ ತರ್ಕ ಮಾಡಿ ಸಮಯ, ಹಣ ವ್ಯರ್ಥಮಾಡುವ ಚುನಾವಣಾ ಆಯೋಗ, ನಿಜವಾದ ಸಮಸ್ಯೆಯತ್ತ ಗಮನ ಹರಿಸಿದರೆ ಒಳ್ಳೆಯದು’ ಎಂದು ಕಮಲಾಪುರದ ಮತದಾರರಾದ ಸುನಿತಾ ಮೆಟ್ರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.