<p><strong>ಹೊಸಪೇಟೆ</strong> (ವಿಜಯನಗರ): ಕೂಡ್ಲಿಗಿ ತಾಲ್ಲೂಕಿನ ಚಿರಬಿಯಲ್ಲಿ 2019ರ ನವೆಂಬರ್ 4ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ದೊಡ್ಡಗೊಲ್ಲರಹಟ್ಟಿ ಗ್ರಾಮದ ಮಹಾಲಿಂಗ ಎಂಬಾತನಿಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.</p>.<p>ಶಿಕ್ಷೆಯ ಜತೆಗೆ ಅಪರಾಧಿ ₹1 ಲಕ್ಷ ದಂಡ ಕಟ್ಟಬೇಕು, ಇದರಲ್ಲಿ ₹40 ಸಾವಿರ ಮೃತ ಎಂ.ಮಂಜುನಾಥನ ವಾರಸುದಾರರಿಗೆ, ₹40 ಸಾವಿರ ಮೃತ ಸುಜಾತಾ ವಾರಸುದಾರರಿಗೆ ನೀಡಬೇಕು ಹಾಗೂ ₹20 ಸಾವಿರವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ತಮ್ಮ ಆದೇಶದಲ್ಲಿ ತಿಳಿಸಿದರು.</p>.<p>ಘಟನೆಯ ಹಿನ್ನೆಲೆ: ಚಿರಬಿ ಮೀಸಲು ಅರಣ್ಯದಲ್ಲಿ ಮಹಾಲಿಂಗ ಮತ್ತು ಸುಜಾತಾ ಕುರಿಹಟ್ಟಿ ಹಾಕಿ, ಗುಡಿಸಲಿನಲ್ಲಿ ವಾಸವಿದ್ದರು. ಮಂಜುನಾಥನು ಸುಜಾತಾ ಜತೆಗೆ ಸಲುಗೆಯಿಂದ ವರ್ತಿಸುತ್ತಿದ್ದುದನ್ನು ಕಂಡಿದ್ದ ಮಹಾಲಿಂಗ, ತನ್ನ ಹಂಡತಿಯ ಶೀಲದ ಬಗ್ಗೆ ಸಂಶಯಗೊಂಡಿದ್ದ. ಆ ಕುರಿತು ಆಗಾಗ ಜಗಳ ಸಹ ಆಗುತ್ತಿತ್ತು. 2019ರ ನವೆಂಬರ್ 4ರಂದು ಬೆಳಿಗ್ಗೆ 6 ಗಂಟೆಗೆ ಚಿರಬಿ ಮೀಸಲು ಅರಣ್ಯದ ಮಸಕಲ್ಲುಬಂಡಿ ಹಳ್ಳದಲ್ಲಿ ಇಬ್ಬರೂ ಜತೆಯಾಗಿ ಇರುವುದನ್ನು ಕಂಡ ಮಹಾಲಿಂಗ ಅವರಿಬ್ಬರನ್ನೂ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ.</p>.<p>ಅಂದಿನ ತನಿಖಾಧಿಕಾರಿ ಪಿಎಸ್ಐ ತಿಮ್ಮಣ್ಣ ಎಸ್.ಚಾಮನೂರು ಹಾಗೂ ಬಳಿಕ ಸಿಪಿಐ ಪಂಪನಗೌಡ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಟಿ.ಅಂಬಣ್ಣ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong> (ವಿಜಯನಗರ): ಕೂಡ್ಲಿಗಿ ತಾಲ್ಲೂಕಿನ ಚಿರಬಿಯಲ್ಲಿ 2019ರ ನವೆಂಬರ್ 4ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ದೊಡ್ಡಗೊಲ್ಲರಹಟ್ಟಿ ಗ್ರಾಮದ ಮಹಾಲಿಂಗ ಎಂಬಾತನಿಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.</p>.<p>ಶಿಕ್ಷೆಯ ಜತೆಗೆ ಅಪರಾಧಿ ₹1 ಲಕ್ಷ ದಂಡ ಕಟ್ಟಬೇಕು, ಇದರಲ್ಲಿ ₹40 ಸಾವಿರ ಮೃತ ಎಂ.ಮಂಜುನಾಥನ ವಾರಸುದಾರರಿಗೆ, ₹40 ಸಾವಿರ ಮೃತ ಸುಜಾತಾ ವಾರಸುದಾರರಿಗೆ ನೀಡಬೇಕು ಹಾಗೂ ₹20 ಸಾವಿರವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ತಮ್ಮ ಆದೇಶದಲ್ಲಿ ತಿಳಿಸಿದರು.</p>.<p>ಘಟನೆಯ ಹಿನ್ನೆಲೆ: ಚಿರಬಿ ಮೀಸಲು ಅರಣ್ಯದಲ್ಲಿ ಮಹಾಲಿಂಗ ಮತ್ತು ಸುಜಾತಾ ಕುರಿಹಟ್ಟಿ ಹಾಕಿ, ಗುಡಿಸಲಿನಲ್ಲಿ ವಾಸವಿದ್ದರು. ಮಂಜುನಾಥನು ಸುಜಾತಾ ಜತೆಗೆ ಸಲುಗೆಯಿಂದ ವರ್ತಿಸುತ್ತಿದ್ದುದನ್ನು ಕಂಡಿದ್ದ ಮಹಾಲಿಂಗ, ತನ್ನ ಹಂಡತಿಯ ಶೀಲದ ಬಗ್ಗೆ ಸಂಶಯಗೊಂಡಿದ್ದ. ಆ ಕುರಿತು ಆಗಾಗ ಜಗಳ ಸಹ ಆಗುತ್ತಿತ್ತು. 2019ರ ನವೆಂಬರ್ 4ರಂದು ಬೆಳಿಗ್ಗೆ 6 ಗಂಟೆಗೆ ಚಿರಬಿ ಮೀಸಲು ಅರಣ್ಯದ ಮಸಕಲ್ಲುಬಂಡಿ ಹಳ್ಳದಲ್ಲಿ ಇಬ್ಬರೂ ಜತೆಯಾಗಿ ಇರುವುದನ್ನು ಕಂಡ ಮಹಾಲಿಂಗ ಅವರಿಬ್ಬರನ್ನೂ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ.</p>.<p>ಅಂದಿನ ತನಿಖಾಧಿಕಾರಿ ಪಿಎಸ್ಐ ತಿಮ್ಮಣ್ಣ ಎಸ್.ಚಾಮನೂರು ಹಾಗೂ ಬಳಿಕ ಸಿಪಿಐ ಪಂಪನಗೌಡ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಟಿ.ಅಂಬಣ್ಣ ವಾದಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>