<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಇಟ್ಟಿಗಿ-ಕೊಟ್ಟೂರು ರಸ್ತೆ ಮಾರ್ಗ ದುರಸ್ತಿ ಕಾಮಗಾರಿ ಅರೆಬರೆಯಾಗಿರುವುದರಿಂದ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿ ಎದ್ದಿರುವ ಜಲ್ಲಿ ಕಲ್ಲುಗಳು, ತಗ್ಗು ಗುಂಡಿಗಳು ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿವೆ.</p>.<p>ನಾಡಿನ ಐತಿಹಾಸಿಕ ಧಾರ್ಮಿಕ ಸುಕ್ಷೇತ್ರ ಕೊಟ್ಟೂರಿನಲ್ಲಿ ಫೆ.12ರಂದು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದೆ. ಹೂವಿನಹಡಗಲಿ ತಾಲ್ಲೂಕು ಸೇರಿದಂತೆ ಕೊಪ್ಪಳ, ಗದಗ ಜಿಲ್ಲೆಯ ಅಪಾರ ಭಕ್ತರು ಈ ಮಾರ್ಗ ಮೂಲಕ ಪಾದಯಾತ್ರೆಯಲ್ಲಿ ತೆರಳುತ್ತಾರೆ. ಹೊಳಗುಂದಿ ಉತ್ತಂಗಿ ಮಧ್ಯೆ ಹಾಗೂ ಇಟ್ಟಿಗಿಯಿಂದ ಅಲಬೂರು ಗ್ರಾಮದ ವರೆಗೆ ರಸ್ತೆಯ ಆಯ್ದ ಭಾಗವನ್ನು ಎರಡು ತಿಂಗಳ ಹಿಂದೆ ಅಗೆದು ಹಾಗೇ ಬಿಟ್ಟಿರುವುದರಿಂದ ಪಾದಯಾತ್ರಿಗಳ ನಡಿಗೆಗೆ ಅಡಚಣೆ ಉಂಟಾಗಿದೆ.</p>.<p>‘ಜಲ್ಲಿಕಲ್ಲು ಎದ್ದಿರುವ ಹದಗೆಟ್ಟ ಈ ರಸ್ತೆಯಲ್ಲಿ ಬರಿಗಾಲಲ್ಲಿ ನಡೆಯುವ ಪಾದಯಾತ್ರಿಗಳನ್ನು ಸ್ವಾಮಿ ಕೊಟ್ಟೂರೇಶ್ವರನೇ ಕಾಪಾಡಬೇಕು’ ಎಂದು ಇಟ್ಟಿಗಿ ಗ್ರಾಮಸ್ಥರು ಮರುಕಪಡುತ್ತಿದ್ದಾರೆ.</p>.<p>ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯ ಮಾರ್ಗ ಆಗಿರುವುದರಿಂದ ನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಉತ್ತಂಗಿಯಿಂದ ಇಟ್ಟಿಗಿವರೆಗೆ ಕಳೆದ ವರ್ಷ ಉತ್ತಮವಾಗಿ ರಸ್ತೆ ನಿರ್ಮಿಸಲಾಗಿದೆ. ಇಟ್ಟಿಗಿ-ಅಲಬೂರುವರೆಗೆ ಆಯ್ದ ಭಾಗಗಳಲ್ಲಿ ಗುಂಡಿಗಳು ಬಿದ್ದಿವೆ. ದುರಸ್ತಿಯ ಸಲುವಾಗಿ ಎರಡು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಕೈ ಬಿಡಲಾಗಿದೆ. ‘ರಸ್ತೆಯಲ್ಲಿ ಜಲ್ಲಿಕಲ್ಲು ಎದ್ದಿರುವುದರಿಂದ ಈ ಮಾರ್ಗದಲ್ಲಿ ವಾಹನ ಓಡಿಸುವುದು ಕಷ್ಟಕರವಾಗಿದೆ. ಕೆಲ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ’ ಎಂದು ನಾಗರಿಕರು ದೂರಿದ್ದಾರೆ.</p>.<p>‘ಕೊಟ್ಟೂರು ಮುಖ್ಯ ರಸ್ತೆಯ ರಿಪೇರಿ ಕೆಲಸ ಸ್ಥಗಿತಗೊಂಡಿರುವುದರಿಂದ ಈ ಮಾರ್ಗದಲ್ಲಿ ಓಡಾಡುವವರು ಯಾತನೆ ಅನುಭವಿಸುತ್ತಿದ್ದಾರೆ. ಕೊಟ್ಟೂರೇಶ್ವರ ಸ್ವಾಮಿಯ ಅಪಾರ ಭಕ್ತರು ಈ ಮಾರ್ಗ ಮೂಲಕ ಸುಕ್ಷೇತ್ರಕ್ಕೆ ಪಾದಯಾತ್ರೆ ಹೋಗುತ್ತಾರೆ. ರಸ್ತೆಯನ್ನು ಅಗೆದು, ಜಲ್ಲಿಕಲ್ಲು ಹರಡಿ ಹೋದವರು ಇತ್ತ ಕಡೆ ಸುಳಿದಿಲ್ಲ. ಜಾತ್ರೆ ಒಳಗಾಗಿ ದುರಸ್ತಿ ಕೆಲಸ ಮುಗಿಸಿದ್ದರೆ ಭಕ್ತರಿಗೆ ಅನುಕೂಲ ಆಗುತಿತ್ತು’ ಎಂದು ಇಟ್ಟಿಗಿ ಗ್ರಾಮದ ರಾಜಶೇಖರ್ ಹೇಳಿದರು.</p>.<p>‘ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ರಸ್ತೆ ರಿಪೇರಿ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<p> ಫೆ.12ರಂದು ಕೊಟ್ಟೂರು ರಥೋತ್ಸವ ಲಕ್ಷಾಂತರ ಭಕ್ತರಿಂದ ಇದೇ ರಸ್ತೆಯಲ್ಲಿ ಪಾದಯಾತ್ರೆ ಅಷ್ಟರೊಳಗೆ ದುರಸ್ತಿ ಆಗಲಿ ಎಂಬ ಒತ್ತಾಯ</p>.<p><strong>ವೈಯಕ್ತಿಕ ಸಮಸ್ಯೆಯಿಂದ ಗುತ್ತಿಗೆದಾರರು ದುರಸ್ತಿ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಅನ್ಯ ಕಾರಣ ಹೇಳದೇ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇವೆ </strong></p><p><strong>–ರಾಜಪ್ಪ ಎಇಇ ಪಿಡಬ್ಲೂಡಿ ಉಪ ವಿಭಾಗ ಹೂವಿನಹ</strong>ಡಗಲಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ತಾಲ್ಲೂಕಿನ ಇಟ್ಟಿಗಿ-ಕೊಟ್ಟೂರು ರಸ್ತೆ ಮಾರ್ಗ ದುರಸ್ತಿ ಕಾಮಗಾರಿ ಅರೆಬರೆಯಾಗಿರುವುದರಿಂದ ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿ ಎದ್ದಿರುವ ಜಲ್ಲಿ ಕಲ್ಲುಗಳು, ತಗ್ಗು ಗುಂಡಿಗಳು ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿವೆ.</p>.<p>ನಾಡಿನ ಐತಿಹಾಸಿಕ ಧಾರ್ಮಿಕ ಸುಕ್ಷೇತ್ರ ಕೊಟ್ಟೂರಿನಲ್ಲಿ ಫೆ.12ರಂದು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದೆ. ಹೂವಿನಹಡಗಲಿ ತಾಲ್ಲೂಕು ಸೇರಿದಂತೆ ಕೊಪ್ಪಳ, ಗದಗ ಜಿಲ್ಲೆಯ ಅಪಾರ ಭಕ್ತರು ಈ ಮಾರ್ಗ ಮೂಲಕ ಪಾದಯಾತ್ರೆಯಲ್ಲಿ ತೆರಳುತ್ತಾರೆ. ಹೊಳಗುಂದಿ ಉತ್ತಂಗಿ ಮಧ್ಯೆ ಹಾಗೂ ಇಟ್ಟಿಗಿಯಿಂದ ಅಲಬೂರು ಗ್ರಾಮದ ವರೆಗೆ ರಸ್ತೆಯ ಆಯ್ದ ಭಾಗವನ್ನು ಎರಡು ತಿಂಗಳ ಹಿಂದೆ ಅಗೆದು ಹಾಗೇ ಬಿಟ್ಟಿರುವುದರಿಂದ ಪಾದಯಾತ್ರಿಗಳ ನಡಿಗೆಗೆ ಅಡಚಣೆ ಉಂಟಾಗಿದೆ.</p>.<p>‘ಜಲ್ಲಿಕಲ್ಲು ಎದ್ದಿರುವ ಹದಗೆಟ್ಟ ಈ ರಸ್ತೆಯಲ್ಲಿ ಬರಿಗಾಲಲ್ಲಿ ನಡೆಯುವ ಪಾದಯಾತ್ರಿಗಳನ್ನು ಸ್ವಾಮಿ ಕೊಟ್ಟೂರೇಶ್ವರನೇ ಕಾಪಾಡಬೇಕು’ ಎಂದು ಇಟ್ಟಿಗಿ ಗ್ರಾಮಸ್ಥರು ಮರುಕಪಡುತ್ತಿದ್ದಾರೆ.</p>.<p>ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯ ಮಾರ್ಗ ಆಗಿರುವುದರಿಂದ ನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಉತ್ತಂಗಿಯಿಂದ ಇಟ್ಟಿಗಿವರೆಗೆ ಕಳೆದ ವರ್ಷ ಉತ್ತಮವಾಗಿ ರಸ್ತೆ ನಿರ್ಮಿಸಲಾಗಿದೆ. ಇಟ್ಟಿಗಿ-ಅಲಬೂರುವರೆಗೆ ಆಯ್ದ ಭಾಗಗಳಲ್ಲಿ ಗುಂಡಿಗಳು ಬಿದ್ದಿವೆ. ದುರಸ್ತಿಯ ಸಲುವಾಗಿ ಎರಡು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಕೈ ಬಿಡಲಾಗಿದೆ. ‘ರಸ್ತೆಯಲ್ಲಿ ಜಲ್ಲಿಕಲ್ಲು ಎದ್ದಿರುವುದರಿಂದ ಈ ಮಾರ್ಗದಲ್ಲಿ ವಾಹನ ಓಡಿಸುವುದು ಕಷ್ಟಕರವಾಗಿದೆ. ಕೆಲ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ’ ಎಂದು ನಾಗರಿಕರು ದೂರಿದ್ದಾರೆ.</p>.<p>‘ಕೊಟ್ಟೂರು ಮುಖ್ಯ ರಸ್ತೆಯ ರಿಪೇರಿ ಕೆಲಸ ಸ್ಥಗಿತಗೊಂಡಿರುವುದರಿಂದ ಈ ಮಾರ್ಗದಲ್ಲಿ ಓಡಾಡುವವರು ಯಾತನೆ ಅನುಭವಿಸುತ್ತಿದ್ದಾರೆ. ಕೊಟ್ಟೂರೇಶ್ವರ ಸ್ವಾಮಿಯ ಅಪಾರ ಭಕ್ತರು ಈ ಮಾರ್ಗ ಮೂಲಕ ಸುಕ್ಷೇತ್ರಕ್ಕೆ ಪಾದಯಾತ್ರೆ ಹೋಗುತ್ತಾರೆ. ರಸ್ತೆಯನ್ನು ಅಗೆದು, ಜಲ್ಲಿಕಲ್ಲು ಹರಡಿ ಹೋದವರು ಇತ್ತ ಕಡೆ ಸುಳಿದಿಲ್ಲ. ಜಾತ್ರೆ ಒಳಗಾಗಿ ದುರಸ್ತಿ ಕೆಲಸ ಮುಗಿಸಿದ್ದರೆ ಭಕ್ತರಿಗೆ ಅನುಕೂಲ ಆಗುತಿತ್ತು’ ಎಂದು ಇಟ್ಟಿಗಿ ಗ್ರಾಮದ ರಾಜಶೇಖರ್ ಹೇಳಿದರು.</p>.<p>‘ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ರಸ್ತೆ ರಿಪೇರಿ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<p> ಫೆ.12ರಂದು ಕೊಟ್ಟೂರು ರಥೋತ್ಸವ ಲಕ್ಷಾಂತರ ಭಕ್ತರಿಂದ ಇದೇ ರಸ್ತೆಯಲ್ಲಿ ಪಾದಯಾತ್ರೆ ಅಷ್ಟರೊಳಗೆ ದುರಸ್ತಿ ಆಗಲಿ ಎಂಬ ಒತ್ತಾಯ</p>.<p><strong>ವೈಯಕ್ತಿಕ ಸಮಸ್ಯೆಯಿಂದ ಗುತ್ತಿಗೆದಾರರು ದುರಸ್ತಿ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಅನ್ಯ ಕಾರಣ ಹೇಳದೇ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇವೆ </strong></p><p><strong>–ರಾಜಪ್ಪ ಎಇಇ ಪಿಡಬ್ಲೂಡಿ ಉಪ ವಿಭಾಗ ಹೂವಿನಹ</strong>ಡಗಲಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>