<p><strong>ಹೊಸಪೇಟೆ:</strong> ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತದಿಂದ ಸ್ಮಶಾನ ಕಾಂಪೌಂಡ್ವರೆಗೆ ಅಳವಡಿಸಲಾಗಿರುವ ಪಾದಚಾರಿ ಗ್ರಿಲ್ನಿಂದ ಯಾವುದೇ ಉಪಯೋಗ ಇಲ್ಲದೆ, ವಾಹನ ನಿಲುಗಡೆಗೂ ತೊಂದರೆ ಆಗಿದೆ, ತಕ್ಷಣ ಈ ಗ್ರಿಲ್ ತೆರವುಗೊಳಿಸಬೇಕು ಎಂದು ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಹೇಳಿದ್ದಾರೆ.</p>.<p>ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಸ್ತುಸಂಗ್ರಹಾಲಯ ನೋಡಲು ನಿತ್ಯ ನೂರಾರು ಮಂದಿ ಬರುತ್ತಾರೆ, ಇಲ್ಲಿ ವಾಹನ ನಿಲ್ಲಿಸಿ ಮ್ಯೂಸಿಯಂನತ್ತ ತೆರಳುವುದು ವಾಡಿಕೆ, ಹೀಗಾಗಿ ಈ ಪಾದಚಾರಿ ರಸ್ತೆಯನ್ನು ಬಳಸುವವರೇ ಇಲ್ಲ, ಗ್ರಿಲ್ ತೆರವುಗೊಳಿಸಿದರೆ ಆ ಪಾದಚಾರಿ ರಸ್ತೆಯನ್ನು ವಾಹನ ನಿಲುಗಡೆಗೆ ಬಳಸಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದು ಸಾಧ್ಯ ಎಂದು ಹೇಳಿದ್ದಾರೆ.</p>.<p>ಕಮಲಾಪುರ ನಂಬರ್ ಓನ್ ಸೊಸೈಟಿಯಿಂದ ಸ್ಮಶಾನದ ವರೆಗೆ ಹಾಕಿರುವ ರಸ್ತೆ ಗ್ರಿಲ್ ತಕ್ಷಣ ತೆರವುಗೊಳಿಸದಿದ್ದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತದಿಂದ ಸ್ಮಶಾನ ಕಾಂಪೌಂಡ್ವರೆಗೆ ಅಳವಡಿಸಲಾಗಿರುವ ಪಾದಚಾರಿ ಗ್ರಿಲ್ನಿಂದ ಯಾವುದೇ ಉಪಯೋಗ ಇಲ್ಲದೆ, ವಾಹನ ನಿಲುಗಡೆಗೂ ತೊಂದರೆ ಆಗಿದೆ, ತಕ್ಷಣ ಈ ಗ್ರಿಲ್ ತೆರವುಗೊಳಿಸಬೇಕು ಎಂದು ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಹೇಳಿದ್ದಾರೆ.</p>.<p>ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಸ್ತುಸಂಗ್ರಹಾಲಯ ನೋಡಲು ನಿತ್ಯ ನೂರಾರು ಮಂದಿ ಬರುತ್ತಾರೆ, ಇಲ್ಲಿ ವಾಹನ ನಿಲ್ಲಿಸಿ ಮ್ಯೂಸಿಯಂನತ್ತ ತೆರಳುವುದು ವಾಡಿಕೆ, ಹೀಗಾಗಿ ಈ ಪಾದಚಾರಿ ರಸ್ತೆಯನ್ನು ಬಳಸುವವರೇ ಇಲ್ಲ, ಗ್ರಿಲ್ ತೆರವುಗೊಳಿಸಿದರೆ ಆ ಪಾದಚಾರಿ ರಸ್ತೆಯನ್ನು ವಾಹನ ನಿಲುಗಡೆಗೆ ಬಳಸಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದು ಸಾಧ್ಯ ಎಂದು ಹೇಳಿದ್ದಾರೆ.</p>.<p>ಕಮಲಾಪುರ ನಂಬರ್ ಓನ್ ಸೊಸೈಟಿಯಿಂದ ಸ್ಮಶಾನದ ವರೆಗೆ ಹಾಕಿರುವ ರಸ್ತೆ ಗ್ರಿಲ್ ತಕ್ಷಣ ತೆರವುಗೊಳಿಸದಿದ್ದರೆ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>