ಆರಂಭದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪೂಜಾರಿಗಳು ಸದ್ಭಕ್ತರೊಂದಿಗೆ ದೇವಸ್ಥಾನದಿಂದ ರಥದವರೆಗೂ ಹೊತ್ತು ತಂದು, ರಥದ ಸುತ್ತ ಪ್ರದಕ್ಷಿಣೆ ಹಾಕಿ, ರಥದಲ್ಲಿ ಪ್ರತಿಷ್ಠಾಪನೆ ಮಾಡಿದರು. ಈ ವೇಳೆ ಹರಾಜು ಹಾಕಲಾದ ದೇವಿಯ ಪಟವನ್ನು ಕೂಡ್ಲಿಗಿ ಪಟ್ಟಣದ ಜೂಗಲರ್ ಭೀಮಣ್ಣ ₹2,51,501ಕ್ಕೆಪಡೆದುಕೊಂಡರು. ನಂತರ ನೆರೆದಿದ್ದ ಭಕ್ತರು ಜಯಘೋಷದೊಂದಿಗೆ ರಥವನ್ನು ಪಾದಗಟ್ಟೆವರಗೆ ಎಳೆದುಕೊಂಡು ಹೋಗಿ, ಮರಳಿ ಬಂದು ದೇವಸ್ಥಾನದ ಬಳಿ ನಿಲ್ಲಿಸಿದರು.