ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿರಿಗೇರಿ ಮೂಲಮಠದ ಭಕ್ತರು. ದ್ರಾವಿಡರು, ಆರ್ಯರು ಯಾರೆಂದು ಕೇಳಿದರೆ ಹೇಗೆ? ದ್ರಾವಿಡರು ಈ ದೇಶ ಕಟ್ಟಿದವರು. ಮೂಲನಿವಾಸಿಗಳು. ಆದರೆ, ಮುಗ್ಧ ಜನರ ತಲೆಯಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬಿ, ಕಷ್ಟಕ್ಕೆ ದೂಡಿದ್ದಾರೆ. ಕೋಮುವಾದ, ಮೂಲಭೂತವಾದ, ಜಾತಿವಾದವು ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ನೀಡಿದೆ. ಈ ದೇಶದ ಮೂಲ ನಿವಾಸಿಗಳು ಸಂವಿಧಾನ ರಕ್ಷಿಸಬೇಕಿದೆ’ ಎಂದರು.