<p><strong>ಹೊಸಪೇಟೆ</strong> (ವಿಜಯನಗರ): ಹೂವಿನಹಡಗಲಿಯ ವಲಯ ಅರಣ್ಯ ಅಧಿಕಾರಿ ಎಂ.ರೇಣುಕಮ್ಮ, ಹಗರಿಬೊಮ್ಮನಹಳ್ಳಿ ಜೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಸೇರಿ ಕೆಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆ ದಾಳಿ ನಡೆಸಿ, ಪರಿಶೀಲಿಸಿದರು.</p>.<p>ಬಳ್ಳಾರಿ ಜಿಲ್ಲೆ ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ರವಿ ಅವರ ಕಚೇರಿ, ಬಳ್ಳಾರಿಯ ಮನೆ ಮೇಲೆ ಸಹ ದಾಳಿ ನಡೆದಿದೆ.</p>.<p>ಸಿಎಂ ಪದಕ ಪಡೆದಿದ್ದರು: ಹೂವಿನಹಡಗಲಿಯ ಆರ್ಎಫ್ಒ ಎಂ. ರೇಣುಕಮ್ಮ ಅವರು ಕೂಡ್ಲಿಗಿಯಲ್ಲಿ ಅರಣ್ಯಾಧಿಕಾರಿಯಾಗಿದ್ದ ವೇಳೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಸೇವೆಗಾಗಿ ಕಳೆದ ವರ್ಷ ಮುಖ್ಯಮಂತ್ರಿ ಪದಕ ಪಡೆದಿದ್ದರು. ಇವರ ಪತಿ ಮಲ್ಲಪ್ಪ ಹರಪನಹಳ್ಳಿಯಲ್ಲಿ ವಲಯ ಅರಣ್ಯಾಧಿಕಾರಿ ಆಗಿದ್ದಾರೆ.</p>.<p>‘ಮನೆ ಶೋಧದ ವೇಳೆ 150 ಗ್ರಾಂ. ಚಿನ್ನ, ಲಕ್ಷಕ್ಕಿಂತ ಹೆಚ್ಚು ನಗದು, ಸ್ಕಾರ್ಪಿಯೊ ವಾಹನ, ಒಂದು ಕಾರು, ಎರಡು ಬೈಕ್ ಹೊಂದಿರುವುದು ಪತ್ತೆಯಾಗಿದೆ. ಕೊಪ್ಪಳ ಸಮೀಪ ಲಿಂಗದಹಳ್ಳಿಯಲ್ಲಿ 6 ಎಕರೆ ತೋಟ ಹಾಗೂ ಮನೆ, ಗಂಗಾವತಿ ಸಮೀಪದ ಸಂಗಾಪುರದ ವಿನಾಯಕ ಲೇಔಟ್ನಲ್ಲಿ ಎರಡು ಮನೆ, ಒಂದು ನಿವೇಶನ ಹೊಂದಿದ್ದಾರೆ. ಶೋಧ ಕಾರ್ಯ ಮುಂದುವರಿದಿದ್ದು ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong> (ವಿಜಯನಗರ): ಹೂವಿನಹಡಗಲಿಯ ವಲಯ ಅರಣ್ಯ ಅಧಿಕಾರಿ ಎಂ.ರೇಣುಕಮ್ಮ, ಹಗರಿಬೊಮ್ಮನಹಳ್ಳಿ ಜೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಸೇರಿ ಕೆಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆ ದಾಳಿ ನಡೆಸಿ, ಪರಿಶೀಲಿಸಿದರು.</p>.<p>ಬಳ್ಳಾರಿ ಜಿಲ್ಲೆ ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ರವಿ ಅವರ ಕಚೇರಿ, ಬಳ್ಳಾರಿಯ ಮನೆ ಮೇಲೆ ಸಹ ದಾಳಿ ನಡೆದಿದೆ.</p>.<p>ಸಿಎಂ ಪದಕ ಪಡೆದಿದ್ದರು: ಹೂವಿನಹಡಗಲಿಯ ಆರ್ಎಫ್ಒ ಎಂ. ರೇಣುಕಮ್ಮ ಅವರು ಕೂಡ್ಲಿಗಿಯಲ್ಲಿ ಅರಣ್ಯಾಧಿಕಾರಿಯಾಗಿದ್ದ ವೇಳೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಸೇವೆಗಾಗಿ ಕಳೆದ ವರ್ಷ ಮುಖ್ಯಮಂತ್ರಿ ಪದಕ ಪಡೆದಿದ್ದರು. ಇವರ ಪತಿ ಮಲ್ಲಪ್ಪ ಹರಪನಹಳ್ಳಿಯಲ್ಲಿ ವಲಯ ಅರಣ್ಯಾಧಿಕಾರಿ ಆಗಿದ್ದಾರೆ.</p>.<p>‘ಮನೆ ಶೋಧದ ವೇಳೆ 150 ಗ್ರಾಂ. ಚಿನ್ನ, ಲಕ್ಷಕ್ಕಿಂತ ಹೆಚ್ಚು ನಗದು, ಸ್ಕಾರ್ಪಿಯೊ ವಾಹನ, ಒಂದು ಕಾರು, ಎರಡು ಬೈಕ್ ಹೊಂದಿರುವುದು ಪತ್ತೆಯಾಗಿದೆ. ಕೊಪ್ಪಳ ಸಮೀಪ ಲಿಂಗದಹಳ್ಳಿಯಲ್ಲಿ 6 ಎಕರೆ ತೋಟ ಹಾಗೂ ಮನೆ, ಗಂಗಾವತಿ ಸಮೀಪದ ಸಂಗಾಪುರದ ವಿನಾಯಕ ಲೇಔಟ್ನಲ್ಲಿ ಎರಡು ಮನೆ, ಒಂದು ನಿವೇಶನ ಹೊಂದಿದ್ದಾರೆ. ಶೋಧ ಕಾರ್ಯ ಮುಂದುವರಿದಿದ್ದು ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>