ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆ; ಬ್ಯಾಂಕ್‌ನಲ್ಲಿ ಜನದಟ್ಟಣೆ

Last Updated 1 ಜೂನ್ 2021, 13:09 IST
ಅಕ್ಷರ ಗಾತ್ರ

ಹೊಸಪೇಟೆ(ವಿಜಯನಗರ): ಬುಧವಾರದಿಂದ (ಜೂ. 2) ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ನಾಲ್ಕು ದಿನ ಬ್ಯಾಂಕುಗಳು ಮುಚ್ಚಿರುವುದರಿಂದ ಮಂಗಳವಾರ ನಗರದ ವಿವಿಧ ಬ್ಯಾಂಕುಗಳಲ್ಲಿ ಜನದಟ್ಟಣೆ ಕಂಡು ಬಂತು.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ಜನರ ಓಡಾಟ ನಿಯಂತ್ರಿಸಲು ಮುಂದಾಗಿದೆ. ಅದರ ಭಾಗವಾಗಿ ಎಲ್ಲ ಬ್ಯಾಂಕುಗಳನ್ನು ನಾಲ್ಕು ದಿನ ಮುಚ್ಚಲು ಸೋಮವಾರ ಆದೇಶ ಹೊರಡಿಸಿತು. ಈ ವಿಷಯ ತಿಳಿದು ಮಂಗಳವಾರ ಬೆಳಿಗ್ಗೆಯೇ ಜನ ವಿವಿಧ ಬ್ಯಾಂಕುಗಳಿಗೆ ಬಂದಿದ್ದರು.

ಬಿಸಿಲು ಏರುತ್ತಿದ್ದಂತೆ ಉದ್ದನೆಯ ಸಾಲಿನಲ್ಲಿ ಜನ ಹಣ ಬಿಡಿಸಿಕೊಳ್ಳಲು ನಿಂತಿದ್ದರು. ರಾಷ್ಟ್ರೀಕೃತ, ವಾಣಿಜ್ಯ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಎದುರು ಗ್ರಾಹಕರ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂತರ ಕಾಯ್ದುಕೊಳ್ಳದೆ ಜನ ನಿಂತಿರುವುದು ಕಂಡು ಬಂತು. ಎಟಿಎಂಗಳಿಂದ ಎಂದಿನಂತೆ ಜನ ಹಣ ಬಿಡಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT