<p><strong>ಹೊಸಪೇಟೆ:</strong> ಚಂದ್ರಗ್ರಹಣ ನಿಮಿತ್ತ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಸ್ಥಾನಗಳನ್ನು ಮುಚ್ಚಲಾಗುತ್ತದೆ, ಗ್ರಹಣ ಮುಕ್ತಾಯಗೊಂಡ ಬಳಿಕ ದೇವಸ್ಥಾನಗಳಲ್ಲಿ ಶುದ್ಧೀಕರಣ ನಡೆದು ಪುನಃ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.</p>.<p>ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ, ಜಂಬುನಾಥ ಗುಡ್ಡದ ಜಂಬುನಾಥೇಶ್ವರ ದೇವಸ್ಥಾನ, ವಡಕರಾಯ, ಹೊಸೂರಮ್ಮ ಸಹಿತ ಎಲ್ಲಾ ದೇವಸ್ಥಾನಗಳಲ್ಲಿ ಈ ಪದ್ಧತಿ ಜಾರಿಯಲ್ಲಿರಲಿದೆ. ವಡಕರಾಯ ದೇವಸ್ಥಾನದ ನವಗ್ರಹಗಳಲ್ಲಿ ಮಾತ್ರ ಗ್ರಹಣ ಅವಧಿಯಲ್ಲೇ ವಿಶೇಷ ಪೂಜೆ ನಡೆಯಲಿದೆ, ಹೀಗಾಗಿ ಪ್ರತ್ಯೇಕ ಪ್ರವೇಶ ದ್ವಾರದ ವ್ಯವಸ್ಥೆ ಮಾಡಲಾಗಿದೆ.</p>.<p>‘ಗ್ರಹಣ ಅವಧಿಯಲ್ಲಿ ಇತರ ಎಲ್ಲ ದೇವಸ್ಥಾನಗಳು ಬಂದ್ ಆಗಿರುತ್ತವೆ. ಆದರೆ ವಡಕರಾಯ ದೇವಸ್ಥಾನದ ನವಗ್ರಹ ಪೂಜಾ ಸ್ಥಳದಲ್ಲಿ ಸಂಜೆ 4.30ರಿಂದ ವಿಶೇಷ ಪೂಜೆ, ಸಂಕಲ್ಪ, ದಾನಾದಿ ಕಾರ್ಯಗಳು ನಡೆಯಲಿವೆ’ ಎಂದು ಅರ್ಚಕ ಅನಿಲ್ ಜೋಶಿ ತಿಳಿಸಿದರು.</p>.<p>ನಾಳೆ ಹೋಳಿ: ಸೋಮವಾರ ರಾತ್ರಿ ಕಾಮದಹನ ನಡೆಯಲಿದೆ, ಮಂಗಳವಾರ ಎಲ್ಲೆಡೆ ಹೋಳಿ ಆಚರಣೆ ನಡೆಯಲಿದೆ. ಈ ಬಾರಿ ಸಹ ಜಿಲ್ಲಾ ಕ್ರೀಡಾಂಗಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಳಿ ಆಚರಣೆಗೆ ಸಿದ್ಧತೆಗಳು ನಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ಚಂದ್ರಗ್ರಹಣ ನಿಮಿತ್ತ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುಜರಾಯಿ ಇಲಾಖೆಗೆ ಸೇರಿದ ಎಲ್ಲಾ ದೇವಸ್ಥಾನಗಳನ್ನು ಮುಚ್ಚಲಾಗುತ್ತದೆ, ಗ್ರಹಣ ಮುಕ್ತಾಯಗೊಂಡ ಬಳಿಕ ದೇವಸ್ಥಾನಗಳಲ್ಲಿ ಶುದ್ಧೀಕರಣ ನಡೆದು ಪುನಃ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.</p>.<p>ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನ, ಜಂಬುನಾಥ ಗುಡ್ಡದ ಜಂಬುನಾಥೇಶ್ವರ ದೇವಸ್ಥಾನ, ವಡಕರಾಯ, ಹೊಸೂರಮ್ಮ ಸಹಿತ ಎಲ್ಲಾ ದೇವಸ್ಥಾನಗಳಲ್ಲಿ ಈ ಪದ್ಧತಿ ಜಾರಿಯಲ್ಲಿರಲಿದೆ. ವಡಕರಾಯ ದೇವಸ್ಥಾನದ ನವಗ್ರಹಗಳಲ್ಲಿ ಮಾತ್ರ ಗ್ರಹಣ ಅವಧಿಯಲ್ಲೇ ವಿಶೇಷ ಪೂಜೆ ನಡೆಯಲಿದೆ, ಹೀಗಾಗಿ ಪ್ರತ್ಯೇಕ ಪ್ರವೇಶ ದ್ವಾರದ ವ್ಯವಸ್ಥೆ ಮಾಡಲಾಗಿದೆ.</p>.<p>‘ಗ್ರಹಣ ಅವಧಿಯಲ್ಲಿ ಇತರ ಎಲ್ಲ ದೇವಸ್ಥಾನಗಳು ಬಂದ್ ಆಗಿರುತ್ತವೆ. ಆದರೆ ವಡಕರಾಯ ದೇವಸ್ಥಾನದ ನವಗ್ರಹ ಪೂಜಾ ಸ್ಥಳದಲ್ಲಿ ಸಂಜೆ 4.30ರಿಂದ ವಿಶೇಷ ಪೂಜೆ, ಸಂಕಲ್ಪ, ದಾನಾದಿ ಕಾರ್ಯಗಳು ನಡೆಯಲಿವೆ’ ಎಂದು ಅರ್ಚಕ ಅನಿಲ್ ಜೋಶಿ ತಿಳಿಸಿದರು.</p>.<p>ನಾಳೆ ಹೋಳಿ: ಸೋಮವಾರ ರಾತ್ರಿ ಕಾಮದಹನ ನಡೆಯಲಿದೆ, ಮಂಗಳವಾರ ಎಲ್ಲೆಡೆ ಹೋಳಿ ಆಚರಣೆ ನಡೆಯಲಿದೆ. ಈ ಬಾರಿ ಸಹ ಜಿಲ್ಲಾ ಕ್ರೀಡಾಂಗಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಳಿ ಆಚರಣೆಗೆ ಸಿದ್ಧತೆಗಳು ನಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>