ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ನುರಿವ ಯಂತ್ರಕ್ಕೆ ಸಿಲುಕಿ ಬೇರ್ಪಟ್ಟ ವ್ಯಕ್ತಿಯ ರುಂಡ

Last Updated 25 ಮಾರ್ಚ್ 2022, 9:23 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಗಾಣದ ಕಬ್ಬು ನುರಿಯುವ ಯಂತ್ರಕ್ಕೆ ಸಿಲುಕಿ ವ್ಯಕ್ತಿಯ ರುಂಡ ಬೇರ್ಪಟ್ಟ ಘಟನೆ ತಾಲ್ಲೂಕಿನ ನಾಗೇನಹಳ್ಳಿ ಸಮೀಪ ಶುಕ್ರವಾರ ನಡೆದಿದೆ.

ಉತ್ತರ ಪ್ರದೇಶದ ಸುಶೀಲ್‌ (40) ಮೃತ ವ್ಯಕ್ತಿ. ‘ನಾಗೇನಹಳ್ಳಿ ಸಮೀಪದ ಕಬ್ಬಿನ ಗಾಣದ ಮನೆಯಲ್ಲಿ ಕಬ್ಬು ನುರಿಯುವ ಯಂತ್ರಕ್ಕೆ ಸುಶೀಲ್‌ ಗ್ರೀಸ್‌ ಹಚ್ಚುತ್ತಿದ್ದ ವೇಳೆ ಅದರೊಳಗೆ ಸಿಲುಕಿಕೊಂಡಿದ್ದಾನೆ. ಯಂತ್ರ ವೇಗವಾಗಿ ತಿರುಗುತ್ತಿದ್ದರಿಂದ ರುಂಡ ಬೇರ್ಪಟ್ಟಿದೆ. ರುಂಡ ಒಂದು ಕಡೆ, ದೇಹ ಒಂದು ಕಡೆ ಬಿದ್ದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದರು. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT