<p><strong>ಹೊಸಪೇಟೆ (ವಿಜಯನಗರ): </strong>ನೆಲದಡಿ ‘ಆಪ್ಟಿಕಲ್ ಫೈಬರ್ ಕೇಬಲ್’ (ಒಎಫ್ಸಿ) ಹಾಕಲು ಹಗರಿಬೊಮ್ಮನಹಳ್ಳಿ ಶಾಸಕ ಭೀಮ ನಾಯ್ಕ ಲಂಚ ಕೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಒಎಫ್ಸಿ ಕೇಬಲ್ ಹಾಕಲು ವ್ಯಕ್ತಿಯೊಬ್ಬರಿಗೆ ಶಾಸಕರು ಪ್ರತಿ ಕಿ.ಮೀಗೆ ₹2 ಲಕ್ಷ ಲಂಚ ಕೇಳುತ್ತಿರುವುದು ಮತ್ತು ನೋಟಿನ ಕಂತೆಗಳನ್ನು ಪಡೆದು, ಇನ್ನೊಬ್ಬರಿಗೆ ಹಸ್ತಾಂತರಿಸುವುದು ವಿಡಿಯೊದಲ್ಲಿದೆ. ಟಿ.ವಿ. ಚಾನೆಲ್ ನಡೆಸಿದ ಸ್ಟಿಂಗ್ ಆಪರೇಷನ್ ಇದಾಗಿದೆ ಎಂದು ಗೊತ್ತಾಗಿದೆ.</p>.<p>‘ಬೆಂಗಳೂರಿನಲ್ಲೆ ಒಂದುವರೆ ಲಕ್ಷ ಮಾಡ್ತಾರೆ. ಇಲ್ಲಿ ಎರಡು ಲಕ್ಷ ಜಾಸ್ತಿ ಆಯ್ತು. ಸ್ವಲ್ಪ ಕಡಿಮೆ ಮಾಡಿ ಅಣ್ಣ’ ಎಂದು ವ್ಯಕ್ತಿಯೊಬ್ಬರು ಹೇಳುತ್ತಾರೆ. ‘ಏಯ್ ಇಲ್ಲಪ್ಪ, ಎರಡೆರಡು ಮಾಡು. ಏಯ್ ಒಂದು ಲಕ್ಷ ಆಗಲ್ಲ ಹೋಗಪ್ಪ’ ಎಂದು ಭೀಮ ನಾಯ್ಕ ಹೇಳುತ್ತಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಇದನ್ನೇ ಮುಂದಿಟ್ಟುಕೊಂಡು ಅವರ ವಿರೋಧಿಗಳು ಅವರನ್ನು ಟೀಕಿಸುತ್ತಿದ್ದಾರೆ. ಈ ಬಗ್ಗೆ ಶಾಸಕರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ): </strong>ನೆಲದಡಿ ‘ಆಪ್ಟಿಕಲ್ ಫೈಬರ್ ಕೇಬಲ್’ (ಒಎಫ್ಸಿ) ಹಾಕಲು ಹಗರಿಬೊಮ್ಮನಹಳ್ಳಿ ಶಾಸಕ ಭೀಮ ನಾಯ್ಕ ಲಂಚ ಕೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಒಎಫ್ಸಿ ಕೇಬಲ್ ಹಾಕಲು ವ್ಯಕ್ತಿಯೊಬ್ಬರಿಗೆ ಶಾಸಕರು ಪ್ರತಿ ಕಿ.ಮೀಗೆ ₹2 ಲಕ್ಷ ಲಂಚ ಕೇಳುತ್ತಿರುವುದು ಮತ್ತು ನೋಟಿನ ಕಂತೆಗಳನ್ನು ಪಡೆದು, ಇನ್ನೊಬ್ಬರಿಗೆ ಹಸ್ತಾಂತರಿಸುವುದು ವಿಡಿಯೊದಲ್ಲಿದೆ. ಟಿ.ವಿ. ಚಾನೆಲ್ ನಡೆಸಿದ ಸ್ಟಿಂಗ್ ಆಪರೇಷನ್ ಇದಾಗಿದೆ ಎಂದು ಗೊತ್ತಾಗಿದೆ.</p>.<p>‘ಬೆಂಗಳೂರಿನಲ್ಲೆ ಒಂದುವರೆ ಲಕ್ಷ ಮಾಡ್ತಾರೆ. ಇಲ್ಲಿ ಎರಡು ಲಕ್ಷ ಜಾಸ್ತಿ ಆಯ್ತು. ಸ್ವಲ್ಪ ಕಡಿಮೆ ಮಾಡಿ ಅಣ್ಣ’ ಎಂದು ವ್ಯಕ್ತಿಯೊಬ್ಬರು ಹೇಳುತ್ತಾರೆ. ‘ಏಯ್ ಇಲ್ಲಪ್ಪ, ಎರಡೆರಡು ಮಾಡು. ಏಯ್ ಒಂದು ಲಕ್ಷ ಆಗಲ್ಲ ಹೋಗಪ್ಪ’ ಎಂದು ಭೀಮ ನಾಯ್ಕ ಹೇಳುತ್ತಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಇದನ್ನೇ ಮುಂದಿಟ್ಟುಕೊಂಡು ಅವರ ವಿರೋಧಿಗಳು ಅವರನ್ನು ಟೀಕಿಸುತ್ತಿದ್ದಾರೆ. ಈ ಬಗ್ಗೆ ಶಾಸಕರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>