ರೋಗಿಗಳ ಜತೆ ಸಂತೋಷದಿಂದ ಕೆಲಸ ಮಾಡುತ್ತೇನೆ. ಸೋಂಕಿತರಿಗೆ ನೈತಿಕ ಬೆಂಬಲ, ಆತ್ಮವಿಶ್ವಾಸ ಮೂಡಿಸುತ್ತ ಉಪಚಾರ ಮಾಡುತ್ತೇನೆ. ವೈದ್ಯಧಿಕಾರಿ ಡಾ. ವಿನಯ್ ಕುಮಾರ್ ಮಾರ್ಗದರ್ಶನದಲ್ಲಿ ವೈದ್ಯರು ಸೂಚಿಸಿದ ಮಾತ್ರೆ, ಇಂಜೆಕ್ಷನ್ ಸಮಯಕ್ಕೆ ಸರಿಯಾಗಿ ಕೊಡುತ್ತೇನೆ. ಸೋಂಕಿತರ ಸೇವೆ ಮಾಡುವುದು ಒಂದು ಭಾಗ್ಯ ಎಂದು ನಂಬಿ ನಾನು ಸೇರಿದಂತೆ ರೇಖಾ, ಸಿತಾರ ಕೊರೊನಾ ವಾರ್ಡಿನ ಇತರೆ ಎಲ್ಲಾ ಸಿಬ್ಬಂದಿ ಕೆಲಸ ಮಾಡುತ್ತಿದ್ದೇವೆ ಎಂದು ಬಸಮ್ಮ ಗಂಗೆ ಹೇಳಿದರು.