ಪ್ರಾಧ್ಯಾಪಕ ವೀರೇಶ ಬಡಿಗೇರ, ‘ತರೀಕೆರೆ ಅವರು ಪ್ರಭುತ್ವ, ಧರ್ಮ, ಭಾಷೆ, ಸಂಸ್ಕೃತಿಗಳಿಗೆ ಮುಖಾಮುಖಿಯಾಗಿರುವುದನ್ನು ಅವರ ಕೃತಿಗಳಲ್ಲಿ ನಾವು ಕಾಣಬಹುದು. ಕರ್ನಾಟಕದ ಅನೇಕ ಪಂಥಗಳ ಮೇಲೆ ಮೊದಲ ಬಾರಿಗೆ ಬೆಳಕು ಚೆಲ್ಲಿದವರು. ಅನೇಕ ಹಳ್ಳಿಗಳನ್ನು ರಹಮತ್ ಅವರು ಸುತ್ತಿದ್ದಾರೆ. ಆ ಮೂಲಕ ಅನೇಕ ಉಪಸಂಸ್ಕೃತಿಯ ಚಹರೆಗಳನ್ನು ಗುರುತಿಸಿದ್ದಾರೆ. ನಿವೃತ್ತಿಯಾದ ನಂತರವೂ ರಹಮತ್ ಅವರ ಉಪಸಂಸ್ಕೃತಿಯ ಹುಡುಕಾಟ ನಿರಂತರವಾಗಿರಲಿ’ ಎಂದು ಆಶಿಸಿದರು.