ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರದಲ್ಲಿ ಕಳೆದ ಆರು ತಿಂಗಳಿಂದ ಬೈಕ್ ಮತ್ತು ಸ್ಕೂಟರ್ಗಳ ಕಳ್ಳತನದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು, ಅವರಿಂದ ₹ 10.82 ಲಕ್ಷ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
‘ಸೆ.16ರಂದು ನಗರದ ಮೆಹಬೂಬ ನಗರದಲ್ಲಿ ಬೈಕ್ ಕಳವಾದ ಬಗ್ಗೆ ದೂರು ದಾಖಲಾಗಿತ್ತು. ಇದನ್ನು ಆಧರಿಸಿ 17ರಂದು ಎಎಸ್ಐ ಬಿ.ಎಂ.ಸುರೇಶ್ ಮತ್ತು ಸಿಬ್ಬಂದಿ ಬಳ್ಳಾರಿ ಸರ್ಕಲ್ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಎರಡು ಬೈಕ್ಗಳಲ್ಲಿ ಬಂದ ನಾಲ್ವರ ವರ್ತನೆ ಅನುಮಾನದಿಂದ ಕೂಡಿದ್ದನ್ನು ಗಮನಿಸಿದರು. ಅವರನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಕಳೆದ ಆರು ತಿಂಗಳಲ್ಲಿ ಕಳವು ಮಾಡಲಾದ 14 ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿ ಲಭಿಸಿತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ತಿಳಿಸಿದ್ದಾರೆ.
ಡಿವೈಎಸ್ಪಿ ಮಂಜುನಾಥ ಟಿ. ನೇತೃತ್ವದಲ್ಲಿ ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಎಸ್.ಎಂ. ಬಾಳನಗೌಡ, ಪಿಎಸ್ಐ ಮುನಿರತ್ನಂ, ಎಎಸ್ಐ ಬಿ.ಎಂ.ಸುರೇಶ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು.