<p><strong>ಹೊಸಪೇಟೆ</strong> (ವಿಜಯನಗರ): ತಾಲ್ಲೂಕಿನ ಗುಂಡ್ಲುವದ್ದಿಗೇರಿಯ ಸೀತಾರಾಮಚಂದ್ರ ಮತ್ತು ಪಾಂಡುರಂಗ ದೇವಸ್ಥಾನದಲ್ಲಿ 50ನೇ ವರ್ಷದ ಶ್ರೀರಾಮ ನಾಮತಾರಕ ಮಹಾಮಂತ್ರ ಸಪ್ತಾಹ ಬುಧವಾರ ನಡೆದಿದ್ದು, ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಪುರಪ್ರವೇಶ ಮಾಡಿ ಭಕ್ತರಿಗೆ ಆಶೀರ್ವಚನ ನೀಡಿದರು.</p>.<p>‘ಸಮಾಜದಲ್ಲಿ ಧರ್ಮ ಪ್ರಜ್ಞೆ ಇರಬೇಕು, ಶ್ರೀರಾಮ ನಾಮತಾರಕ ಮಹಾಮಂತ್ರ ಪಠಣ ಸಾಮೂಹಿಕವಾಗಿ ನಡೆದಾಗ ಅದರ ಶಕ್ತಿ ಮಹೋನ್ನತವಾದುದು. ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು’ ಎಂದು ಶ್ರೀಗಳು ಆಶಿಸಿದರು.</p>.<p>ಇದಕ್ಕೆ ಮೊದಲು ಸಾಮೂಹಿಕ ಭಜನೆಯಲ್ಲೂ ಪಾಲ್ಗೊಂಡ ಶ್ರೀಗಳು, ಶ್ರೀರಾಮ ನಾಮತಾರಕ ಮಹಾಮಂತ್ರ ಸಪ್ತಾಹ ನಡೆಸುವ ನಿಟ್ಟಿನಲ್ಲಿ ಊರಿನ ಸಂಘಟಿತ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong> (ವಿಜಯನಗರ): ತಾಲ್ಲೂಕಿನ ಗುಂಡ್ಲುವದ್ದಿಗೇರಿಯ ಸೀತಾರಾಮಚಂದ್ರ ಮತ್ತು ಪಾಂಡುರಂಗ ದೇವಸ್ಥಾನದಲ್ಲಿ 50ನೇ ವರ್ಷದ ಶ್ರೀರಾಮ ನಾಮತಾರಕ ಮಹಾಮಂತ್ರ ಸಪ್ತಾಹ ಬುಧವಾರ ನಡೆದಿದ್ದು, ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಪುರಪ್ರವೇಶ ಮಾಡಿ ಭಕ್ತರಿಗೆ ಆಶೀರ್ವಚನ ನೀಡಿದರು.</p>.<p>‘ಸಮಾಜದಲ್ಲಿ ಧರ್ಮ ಪ್ರಜ್ಞೆ ಇರಬೇಕು, ಶ್ರೀರಾಮ ನಾಮತಾರಕ ಮಹಾಮಂತ್ರ ಪಠಣ ಸಾಮೂಹಿಕವಾಗಿ ನಡೆದಾಗ ಅದರ ಶಕ್ತಿ ಮಹೋನ್ನತವಾದುದು. ಜನರಲ್ಲಿ ಧರ್ಮ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು’ ಎಂದು ಶ್ರೀಗಳು ಆಶಿಸಿದರು.</p>.<p>ಇದಕ್ಕೆ ಮೊದಲು ಸಾಮೂಹಿಕ ಭಜನೆಯಲ್ಲೂ ಪಾಲ್ಗೊಂಡ ಶ್ರೀಗಳು, ಶ್ರೀರಾಮ ನಾಮತಾರಕ ಮಹಾಮಂತ್ರ ಸಪ್ತಾಹ ನಡೆಸುವ ನಿಟ್ಟಿನಲ್ಲಿ ಊರಿನ ಸಂಘಟಿತ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>