ಆಯಾ ಗಣೇಶ ಮಂಡಳಿಯವರು ಅಲಂಕರಿಸಿದ ವಾಹನದಲ್ಲಿ ಬೆನಕನನ್ನು ಪ್ರತಿಷ್ಠಾಪಿಸಿ, ‘ಗಣಪತಿ ಬೊಪ್ಪ ಮೊರ್ಯಾ, ಅಗಲೆ ಬರಸ್ ತು ಜಲ್ದಿ ಆ’, ಜೈ ಗಣೇಶ, ಜೈ ಜೈ ಗಣೇಶ’ ಎಂದು ಯುವಕರು ಭಕ್ತಿಭಾವದಿಂದ ಘೋಷಣೆ ಕೂಗಿದರು. ಡಿ.ಜೆ ಹಚ್ಚಿಕೊಂಡು ಮೂರ್ತಿಗಳ ಮೆರವಣಿಗೆಗೆ ಅವಕಾಶ ಕಲ್ಪಿಸದ ಕಾರಣ ಪಟಾಕಿ ಸಿಡಿಸುತ್ತ ಹೆಜ್ಜೆ ಹಾಕಿದರು. ತಮಟೆ ಬಾರಿಸಿ, ಸಂಭ್ರಮಿಸಿದರು.