‘ಮಾ.11ರಂದು ಬೆಳಿಗ್ಗೆ ಪಂಚಾಮೃತ, ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಸಂಜೆ 6ಕ್ಕೆ ಸ್ಥಳೀಯ ಕಲಾವಿದರು, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮರುದಿನ ಅನ್ನಸಂತರ್ಪಣೆ ನಡೆಯಲಿದೆ. ಈ ವರ್ಷ ವಿಶೇಷವಾಗಿ ಜ್ಯೋತಿರ್ಲಿಂಗ ಅಭಿಷೇಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಭಕ್ತರೇ ಸ್ವಹಸ್ತದಿಂದ ಕ್ಷೀರಾಭಿಷೇಕ ಮಾಡಬಹುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.