ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಛಗನ್ಭಾಯ್ ಪಟೇಲ್ ಉದ್ಘಾಟಿಸಿ, ‘ಕಾಲೇಜು ಕ್ಯಾಂಪಸ್ಗಳಲ್ಲಿ ಸಮವಸ್ತ್ರ ನೀತಿ ಕುರಿತು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಹೀಗಿದ್ದರೂ ಕೆಲ ವಿಭಜಕ ಶಕ್ತಿಗಳು ಶಿಕ್ಷಣ ಕ್ಷೇತ್ರವನ್ನು ಹಾಳುಗೆಡವಲು ಪ್ರಯತ್ನಿಸುತ್ತಿವೆ. ಕ್ಯಾಂಪಸ್ನಲ್ಲಿ ಸಾಮರಸ್ಯವಿರಬೇಕು. ಶಿಕ್ಷಣ ಕ್ಷೇತ್ರವು ಪಂಥೀಯ ವೇಷಗಳಿಂದ ಮುಕ್ತವಾಗಿರಬೇಕು’ ಎಂದು ಹೇಳಿದರು.