ಮರಿಯಮ್ಮನಹಳ್ಳಿ: ಪಟ್ಟಣದ ಹೊರವಲಯದ ರಾ. ಹೆ.50ರಲ್ಲಿ ಭಾನುವಾರ ತಡರಾತ್ರಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಟ್ಟೆ ವ್ಯಾಪಾರಿಗಳಾದ ಅಮರೇಶ್ (20) ಹಾಗೂ ಪವನ್ ಕುಮಾರ್ (20)ಮೃತಪಟ್ಟವರು.
ಈ ಇಬ್ಬರು ಕಾರಿನಲ್ಲಿ ದಾವಣಗೆರೆ ಯಿಂದ ಬಟ್ಟೆ ವ್ಯಾಪಾರ ಮುಗಿಸಿಕೊಂಡು ಸಿಂಧನೂರು ಕಡೆಗೆ ಸಾಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.