<p><strong>ಬಳ್ಳಾರಿ</strong>: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಅಖಂಡ ಜಿಲ್ಲೆಗೆ (ಬಳ್ಳಾರಿ–ವಿಜಯನಗರ)ಗೆ ಈ ವರ್ಷ ಶೇ.64.41ರಷ್ಟು ಫಲಿತಾಂಶ ಬಂದಿದೆ. ರ್ಯಾಂಕ್ ಪಟ್ಟಿಯಲ್ಲಿ ಎರಡೂ ಜಿಲ್ಲೆಗಳೂ 27ನೇ ಸ್ಥಾನದಲ್ಲಿವೆ.</p><p>ಕಳೆದ ವರ್ಷ ಶೇ.74.77ರಷ್ಟು ಫಲಿತಾಂಶ ಸಿಕ್ಕರೂ ರ್ಯಾಂಕ್ ಪಟ್ಟಿಯಲ್ಲಿ ಜಿಲ್ಲೆ 29ನೇ ಸ್ಥಾನದಲ್ಲಿತ್ತು. ಈ ವರ್ಷ ಫಲಿತಾಂಶ ಕುಸಿದರೂ ರ್ಯಾಂಕ್ನಲ್ಲಿ ಎರಡು ಸ್ಥಾನ ಮೇಲಕ್ಕೇರಿದೆ. 2023ರ ಫಲಿತಾಂಶದಲ್ಲೂ ಅವಿಭಜಿತ ಬಳ್ಳಾರಿ ಜಿಲ್ಲೆ 27ನೇ ಸ್ಥಾನದಲ್ಲಿತ್ತು. </p><p>ಕಲಾ ವಿಭಾಗದಲ್ಲಿ ವಿಜಯನಗರ ವಿದ್ಯಾರ್ಥಿಗಳು ಪಾರಮ್ಯ ಮೆರೆದಿದ್ದಾರೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಎರಡೂ ಜಿಲ್ಲೆಗಳ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ. ಮೂರು ವಿಭಾಗಗಳಲ್ಲಿ ಒಟ್ಟು 12 ಮಂದಿಗೆ ರ್ಯಾಂಕ್ ಸಿಕ್ಕಿದೆ. </p><p>ಎಂದಿನಂತೇ ಈ ಸಲವೂ ಕೊಟ್ಟೂರು, ಹೂವಿನ ಹಡಗಲಿಯ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ರ್ಯಾಂಕ್ಗಳನ್ನು ಬಾಚಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಘೋಷಿಸಲಾಗಿರುವ ಒಟ್ಟು 34 ರ್ಯಾಂಕ್ಗಳಲ್ಲಿ ವಿಜಯನಗರ ಜಿಲ್ಲೆಯ 10 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಈ ಪೈಕಿ ಬಹುತೇಕರು ಕನ್ನಡ ಮಾಧ್ಯಮದವರು ಎಂಬುದು ವಿಶೇಷ. ಅದರೆ, ಬಳ್ಳಾರಿ ಜಿಲ್ಲೆಯ ಯಾರೊಬ್ಬರೂ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. </p><p>ವಾಣಿಜ್ಯ ವಿಭಾಗದ 50 ರ್ಯಾಂಕ್ಗಳ ಪೈಕಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ತಲಾ ಒಬ್ಬೊಬ್ಬ ವಿದ್ಯಾರ್ಥಿ ಸ್ಥಾನ ಪಡೆದಿದ್ದಾರೆ. ಇನ್ನು ವಿಜ್ಞಾನದಲ್ಲಿ 44 ರ್ಯಾಂಕ್ಗಳು ಘೋಷಣೆಯಾಗಿದ್ದರೂ ಎರಡೂ ಜಿಲ್ಲೆಗಳ ಯಾರೊಬ್ಬರೂ ಸ್ಥಾನ ಪಡೆದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಅಖಂಡ ಜಿಲ್ಲೆಗೆ (ಬಳ್ಳಾರಿ–ವಿಜಯನಗರ)ಗೆ ಈ ವರ್ಷ ಶೇ.64.41ರಷ್ಟು ಫಲಿತಾಂಶ ಬಂದಿದೆ. ರ್ಯಾಂಕ್ ಪಟ್ಟಿಯಲ್ಲಿ ಎರಡೂ ಜಿಲ್ಲೆಗಳೂ 27ನೇ ಸ್ಥಾನದಲ್ಲಿವೆ.</p><p>ಕಳೆದ ವರ್ಷ ಶೇ.74.77ರಷ್ಟು ಫಲಿತಾಂಶ ಸಿಕ್ಕರೂ ರ್ಯಾಂಕ್ ಪಟ್ಟಿಯಲ್ಲಿ ಜಿಲ್ಲೆ 29ನೇ ಸ್ಥಾನದಲ್ಲಿತ್ತು. ಈ ವರ್ಷ ಫಲಿತಾಂಶ ಕುಸಿದರೂ ರ್ಯಾಂಕ್ನಲ್ಲಿ ಎರಡು ಸ್ಥಾನ ಮೇಲಕ್ಕೇರಿದೆ. 2023ರ ಫಲಿತಾಂಶದಲ್ಲೂ ಅವಿಭಜಿತ ಬಳ್ಳಾರಿ ಜಿಲ್ಲೆ 27ನೇ ಸ್ಥಾನದಲ್ಲಿತ್ತು. </p><p>ಕಲಾ ವಿಭಾಗದಲ್ಲಿ ವಿಜಯನಗರ ವಿದ್ಯಾರ್ಥಿಗಳು ಪಾರಮ್ಯ ಮೆರೆದಿದ್ದಾರೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಎರಡೂ ಜಿಲ್ಲೆಗಳ ವಿದ್ಯಾರ್ಥಿಗಳು ಹಿಂದೆ ಬಿದ್ದಿದ್ದಾರೆ. ಮೂರು ವಿಭಾಗಗಳಲ್ಲಿ ಒಟ್ಟು 12 ಮಂದಿಗೆ ರ್ಯಾಂಕ್ ಸಿಕ್ಕಿದೆ. </p><p>ಎಂದಿನಂತೇ ಈ ಸಲವೂ ಕೊಟ್ಟೂರು, ಹೂವಿನ ಹಡಗಲಿಯ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ರ್ಯಾಂಕ್ಗಳನ್ನು ಬಾಚಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಘೋಷಿಸಲಾಗಿರುವ ಒಟ್ಟು 34 ರ್ಯಾಂಕ್ಗಳಲ್ಲಿ ವಿಜಯನಗರ ಜಿಲ್ಲೆಯ 10 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ. ಈ ಪೈಕಿ ಬಹುತೇಕರು ಕನ್ನಡ ಮಾಧ್ಯಮದವರು ಎಂಬುದು ವಿಶೇಷ. ಅದರೆ, ಬಳ್ಳಾರಿ ಜಿಲ್ಲೆಯ ಯಾರೊಬ್ಬರೂ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. </p><p>ವಾಣಿಜ್ಯ ವಿಭಾಗದ 50 ರ್ಯಾಂಕ್ಗಳ ಪೈಕಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ತಲಾ ಒಬ್ಬೊಬ್ಬ ವಿದ್ಯಾರ್ಥಿ ಸ್ಥಾನ ಪಡೆದಿದ್ದಾರೆ. ಇನ್ನು ವಿಜ್ಞಾನದಲ್ಲಿ 44 ರ್ಯಾಂಕ್ಗಳು ಘೋಷಣೆಯಾಗಿದ್ದರೂ ಎರಡೂ ಜಿಲ್ಲೆಗಳ ಯಾರೊಬ್ಬರೂ ಸ್ಥಾನ ಪಡೆದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>