ಘಟನೆ ಕುರಿತು ಮೃತಳ ಪತಿ ಇಬ್ರಾಹಿಂ ದೂರು ನೀಡಿದ್ದು, ‘ಬೈಕ್ನಲ್ಲಿ ಹೋಗುವಾಗ ಇರ್ಫಾನ್ , ಆನಂದ್ ಬೈಕ್ ಅಡ್ಡಗಟ್ಟಿ ನೀನು, ನಿನ್ನ ಗಂಡನೊಂದಿಗೆ ರಾಜಿಯಾಗಿದ್ದಿಯ ಎಂದು ನನ್ನ ಪತ್ನಿಗೆ ಚಾಕುವಿನಿಂದ ಚುಚ್ಚಿದಾಗ ಅವಳು ಕೆಳಗಡೆ ಬಿದ್ದಳು. ನಾನು ಭಯದಿಂದ ಸ್ವಲ್ಪ ದೂರ ಬಂದು ಹಿಂದೆ ನೋಡಿದಾಗ ಆನಂದ್ ಎಂಬಾತ ಅವಳನ್ನು ನೆಲಕ್ಕೆ ಬಿಳಿಸಿ, ಇರ್ಫಾನ್ ಚಾಕುವಿನಿಂದ ಚುಚ್ಚುತ್ತಿದ್ದ. ನಾನು ಭಯದಿಂದ ಬಂದು ನಮ್ಮವರನ್ನು ಕರೆದುಕೊಂಡು ಹೋಗಿ ನೋಡಿದಾಗ ನನ್ನ ಹೆಂಡತಿ ಮೃತಪಟ್ಟಿದ್ದಳು’ ಎಂದು ಹೇಳಿದ್ದಾರೆ. ಅದೇ ಗ್ರಾಮದ ಇರ್ಫಾನ್, ಆನಂದ್ ಎಂಬುವವರನ್ನು ಬಂಧಿಸಿರುವ ಕಾನಹೊಸಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.