<p><strong>ವಿಜಯಪುರ:</strong> ನವ ಬೌದ್ದರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಸಾಹಿತಿ ಪ್ರೊ.ಎಚ್.ಟಿ.ಪೋತೆ ಅವರು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.</p><p>ದಲಿತ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿರುವ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p><p>ಡಾ.ಬಿ.ಆರ್.ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.</p><p>ದಲಿತ ಚಳವಳಿ ಹೋರಾಟಗಾರರ ಹಾಗೂ ಚಿಂತಕರ ಜೀವನ ಗ್ರಂಥಗಳ ಪ್ರಕಟಣೆಗೆ ಅನುದಾನ ನೀಡಬೇಕು ಎಂದರು.</p><p>ಸಫಾಯಿ ಕರ್ಮಚಾರಿ ಕೆಲಸದಲ್ಲಿ ಮಾನವ ಬಳಕೆ ಬದಲು ಯಂತ್ರೋಪಕರಣ ಬಳಸುವುದಾಗಬೇಕು.ಯಾರು ಸಫಾಯಿ ಕರ್ಮಚಾರಿ ಉದ್ಯೋಗದಲ್ಲಿದ್ದಾರೋ ಪರ್ಯಾಯ ಉದ್ಯೋಗಗಳನ್ನು ನೀಡಬೇಕು ಎಂದರು.</p><p>ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಕಡ್ಡಾಯದ ಜೊತೆಗೆ ಶೋಷಿತ ವರ್ಗದ ಸಾಹಿತ್ಯ, ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳು ಮನವರಿಕೆ ಮಾಡುವುದರಿಂದ ಅವರಲ್ಲಿ ಮಾನವೀಯ ಸಂಬಂಧಗಳು ಬೆಸೆಯಲು ಸಾಧ್ಯವಾಗುತ್ತದೆ ಎಂದರು.</p><p>ಸಂವಿಧಾನ ಸುಡುವ, ಮಹಾತ್ಮ ಗಾಂಧೀಜಿಯ ಅಣಕು ಹತ್ಯೆ ಮಾಡುವುದು ಸರ್ವೆ ಸಾಮಾನ್ಯವಾದ ಈ ಕಾಲದಲ್ಲಿ ಅಂತಹ ಶಕ್ತಿಗಳಿಗೆ ಬುದ್ದಿ ಕಲಿಸಬೇಕು, ದಲಿತ ಶೋಷಿತ, ಮಹಿಳಾ ಸಮುದಾಯದಲ್ಲಿ ಶಕ್ತಿ ತುಂಬಲು ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುವುದು ಸರ್ಕಾರದಿಂದ, ಸಾರ್ವಜನಿಕರಿಂದ ಆಗಬೇಕಿದೆ ಎಂದರು.</p><p>ದೇವಾಲಯಗಳು ಅಸಮಾನತೆಯ ಕೇಂದ್ರಗಳಾಗಿ ನೆಲೆ ನಿಂತಿರುವುದರಿಂದ ಸಾಮಾಜಿಕ ವಿಘಟನೆಗೆ, ಸಂಘರ್ಷಕ್ಕೆ ಕಾರಣವಾಗುತ್ತಿರುವುದರಿಂದ ಇಂಥ ಅವಮಾನಿಸುವ ಕೇಂದ್ರಗಳ ಪೋಷಣೆಗೆ ಸರ್ಕಾರ ಮುಂದಾಗಬಾರದು. ಮುಕ್ತ ಪ್ರವೇಶದ ಜೊತೆಗೆ ಮೀಸಲಾತಿ ನಿಯಮ ದೇವಾಲಯಗಳಲ್ಲೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.</p><p>ಅಡುಗೆ ಮನೆಯಲ್ಲಿ ಒಂದೇ ಸೌಟನ್ನು ಸಸ್ಯಾಹಾರಕ್ಕೆ, ಮಾಂಸಾಹಾರಕ್ಕೆ ಬಳಸಬಾರದು ಎಂಬ ಸುಧಾಮೂರ್ತಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ನಿಮ್ಮ(ಸುಧಾಮೂರ್ತಿ) ಮನೆಯಲ್ಲಿ ಪೂಜಿಸುವ</p><p>ದೇವಾನುದೇವತೆಗಳು ಯಾವ ಪ್ರಾಣಿಗಳ ಮೇಲೆ ಕುಳಿತಿವೆ. ಅವು ಮಾಂಸಾಹಾರಿ ಪ್ರಾಣಿಗಳಲ್ಲವೇ, ಅಂತಹ ಫೋಟೊಗಳನ್ನು ಮನೆಯಲ್ಲಿ ಏಕೆ ಇಟ್ಟಿದ್ದೀರಿ, ಕಿತ್ತೆಸೆಯಿರಿ ಎಂದು ಸವಾಲು ಹಾಕಿದರು.</p><p>ಮೇಲ್ವರ್ಗದ ಸಾಹಿತಿ, ಚಿಂತಕರ ಹೆಸರಲ್ಲಿ ಅನೇಕ ಪ್ರತಿಷ್ಠಾನ ಗಳು ಆರಂಭವಾಗಿವೆ. ಆದರೆ,</p><p>ದಲಿತ ಸಾಹಿತಿಗಳು, ಚಿಂತಕರ ಹೆಸರಲ್ಲಿ ಯಾವುದೇ ಒಂದು ಪ್ರತಿಷ್ಠಾನ ಇಲ್ಲ, ಸರ್ಕಾರವೇ ದಲಿತ ಲೇಖಕರ ಹೆಸರಲ್ಲಿ ಪ್ರತಿಷ್ಠಾನ ಆರಂಭಿಸಬೇಕು ಎಂದು ಒತ್ತಾಯಿಸಿದರು.</p><p>ನಮ್ಮ ಸಮಾಜದ ಮೇಲ್ವರ್ಗದವರು ದಲಿತ ಹಾಗೂ ಹಿಂದುಳಿದ ಸಮುದಾಯಗಳನ್ನು ತಮ್ಮ ಸಮೀಪಕ್ಕೆ ಕರೆದುಕೊಳ್ಳಬೇಕಾಗಿದೆ. ನೀರು, ಆಹಾರ, ವಿವಾಹಗಳ ಮೂಲಕ ಹತ್ತಿರಕ್ಕೆ ಕರೆದುಕೊಳ್ಳಲು ಸಾಧ್ಯವಿದೆ ಎಂದರು.</p><p>'ಭಾರತ ಪ್ರಕಾಶಿಸುತ್ತಿದೆ', 'ಸಬಕಾ ಸಾಥ್ ಸಬಕಾ ವಿಕಾಸ್' ಎಂಬ ಘೋಷ ವಾಕ್ಯಗಳು ಇಂದು ವಿಜೃಂಭಿಸುತ್ತಿವೆ. ಆದರೆ, ಬಡತನ ಎಲ್ಲ ಸಮುದಾಯಗಳಲ್ಲೂ ಹಾಗೆಯೇ ಸಾಗಿದೆ ಎಂದರು.</p><p>ಭಾರತ ಇಂದು ಅಂಗವೈಕಲ್ಯವಾಗಿದೆ. ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಆದರೆ, ದೇಶದ ಮಹಿಳೆಯರು ಧ್ವನಿ ಎತ್ತದಿರುವುದು ನಾಚಿಕೆಗೇಡು ಎಂದು ಹೇಳಿದರು.</p><p>ನಿಕಟಪೂರ್ವ ಅಧ್ಯಕ್ಷ ಅಲ್ಲಾಗಿರಿರಾಜ ಮಾತನಾಡಿ, ‘ಡಬಲ್ ಎಂಜಿನ್ ಸರ್ಕಾರ, ತ್ರಿಬಲ್ ಎಂಜಿನ್ ಸರ್ಕಾರಗಳ ಪರಿಣಾಮದಿಂದ ಇಂದು ಬರಹಗಾರರಿಗೆ ಪ್ರತ್ಯೇಕ ಬಂಧಿಖಾನೆ ಕಟ್ಟಬೇಕಾದ ಸಂದರ್ಭ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. </p><p>ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಇಂದು ಚಡ್ಡಿ, ಸೀರೆ ಮಾರುವ ಸಮ್ಮೇಳನಗಳು ಹೆಚ್ಚಾಗಿವೆ. ಪುಸ್ತಕ ಮಾರುವ ಸಮ್ಮೇಳನ ಕಡಿಮೆಯಾಗತೊಡಗಿವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ನವ ಬೌದ್ದರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಸಾಹಿತಿ ಪ್ರೊ.ಎಚ್.ಟಿ.ಪೋತೆ ಅವರು ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು.</p><p>ದಲಿತ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿರುವ 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p><p>ಡಾ.ಬಿ.ಆರ್.ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.</p><p>ದಲಿತ ಚಳವಳಿ ಹೋರಾಟಗಾರರ ಹಾಗೂ ಚಿಂತಕರ ಜೀವನ ಗ್ರಂಥಗಳ ಪ್ರಕಟಣೆಗೆ ಅನುದಾನ ನೀಡಬೇಕು ಎಂದರು.</p><p>ಸಫಾಯಿ ಕರ್ಮಚಾರಿ ಕೆಲಸದಲ್ಲಿ ಮಾನವ ಬಳಕೆ ಬದಲು ಯಂತ್ರೋಪಕರಣ ಬಳಸುವುದಾಗಬೇಕು.ಯಾರು ಸಫಾಯಿ ಕರ್ಮಚಾರಿ ಉದ್ಯೋಗದಲ್ಲಿದ್ದಾರೋ ಪರ್ಯಾಯ ಉದ್ಯೋಗಗಳನ್ನು ನೀಡಬೇಕು ಎಂದರು.</p><p>ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಕಡ್ಡಾಯದ ಜೊತೆಗೆ ಶೋಷಿತ ವರ್ಗದ ಸಾಹಿತ್ಯ, ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳು ಮನವರಿಕೆ ಮಾಡುವುದರಿಂದ ಅವರಲ್ಲಿ ಮಾನವೀಯ ಸಂಬಂಧಗಳು ಬೆಸೆಯಲು ಸಾಧ್ಯವಾಗುತ್ತದೆ ಎಂದರು.</p><p>ಸಂವಿಧಾನ ಸುಡುವ, ಮಹಾತ್ಮ ಗಾಂಧೀಜಿಯ ಅಣಕು ಹತ್ಯೆ ಮಾಡುವುದು ಸರ್ವೆ ಸಾಮಾನ್ಯವಾದ ಈ ಕಾಲದಲ್ಲಿ ಅಂತಹ ಶಕ್ತಿಗಳಿಗೆ ಬುದ್ದಿ ಕಲಿಸಬೇಕು, ದಲಿತ ಶೋಷಿತ, ಮಹಿಳಾ ಸಮುದಾಯದಲ್ಲಿ ಶಕ್ತಿ ತುಂಬಲು ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುವುದು ಸರ್ಕಾರದಿಂದ, ಸಾರ್ವಜನಿಕರಿಂದ ಆಗಬೇಕಿದೆ ಎಂದರು.</p><p>ದೇವಾಲಯಗಳು ಅಸಮಾನತೆಯ ಕೇಂದ್ರಗಳಾಗಿ ನೆಲೆ ನಿಂತಿರುವುದರಿಂದ ಸಾಮಾಜಿಕ ವಿಘಟನೆಗೆ, ಸಂಘರ್ಷಕ್ಕೆ ಕಾರಣವಾಗುತ್ತಿರುವುದರಿಂದ ಇಂಥ ಅವಮಾನಿಸುವ ಕೇಂದ್ರಗಳ ಪೋಷಣೆಗೆ ಸರ್ಕಾರ ಮುಂದಾಗಬಾರದು. ಮುಕ್ತ ಪ್ರವೇಶದ ಜೊತೆಗೆ ಮೀಸಲಾತಿ ನಿಯಮ ದೇವಾಲಯಗಳಲ್ಲೂ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.</p><p>ಅಡುಗೆ ಮನೆಯಲ್ಲಿ ಒಂದೇ ಸೌಟನ್ನು ಸಸ್ಯಾಹಾರಕ್ಕೆ, ಮಾಂಸಾಹಾರಕ್ಕೆ ಬಳಸಬಾರದು ಎಂಬ ಸುಧಾಮೂರ್ತಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ನಿಮ್ಮ(ಸುಧಾಮೂರ್ತಿ) ಮನೆಯಲ್ಲಿ ಪೂಜಿಸುವ</p><p>ದೇವಾನುದೇವತೆಗಳು ಯಾವ ಪ್ರಾಣಿಗಳ ಮೇಲೆ ಕುಳಿತಿವೆ. ಅವು ಮಾಂಸಾಹಾರಿ ಪ್ರಾಣಿಗಳಲ್ಲವೇ, ಅಂತಹ ಫೋಟೊಗಳನ್ನು ಮನೆಯಲ್ಲಿ ಏಕೆ ಇಟ್ಟಿದ್ದೀರಿ, ಕಿತ್ತೆಸೆಯಿರಿ ಎಂದು ಸವಾಲು ಹಾಕಿದರು.</p><p>ಮೇಲ್ವರ್ಗದ ಸಾಹಿತಿ, ಚಿಂತಕರ ಹೆಸರಲ್ಲಿ ಅನೇಕ ಪ್ರತಿಷ್ಠಾನ ಗಳು ಆರಂಭವಾಗಿವೆ. ಆದರೆ,</p><p>ದಲಿತ ಸಾಹಿತಿಗಳು, ಚಿಂತಕರ ಹೆಸರಲ್ಲಿ ಯಾವುದೇ ಒಂದು ಪ್ರತಿಷ್ಠಾನ ಇಲ್ಲ, ಸರ್ಕಾರವೇ ದಲಿತ ಲೇಖಕರ ಹೆಸರಲ್ಲಿ ಪ್ರತಿಷ್ಠಾನ ಆರಂಭಿಸಬೇಕು ಎಂದು ಒತ್ತಾಯಿಸಿದರು.</p><p>ನಮ್ಮ ಸಮಾಜದ ಮೇಲ್ವರ್ಗದವರು ದಲಿತ ಹಾಗೂ ಹಿಂದುಳಿದ ಸಮುದಾಯಗಳನ್ನು ತಮ್ಮ ಸಮೀಪಕ್ಕೆ ಕರೆದುಕೊಳ್ಳಬೇಕಾಗಿದೆ. ನೀರು, ಆಹಾರ, ವಿವಾಹಗಳ ಮೂಲಕ ಹತ್ತಿರಕ್ಕೆ ಕರೆದುಕೊಳ್ಳಲು ಸಾಧ್ಯವಿದೆ ಎಂದರು.</p><p>'ಭಾರತ ಪ್ರಕಾಶಿಸುತ್ತಿದೆ', 'ಸಬಕಾ ಸಾಥ್ ಸಬಕಾ ವಿಕಾಸ್' ಎಂಬ ಘೋಷ ವಾಕ್ಯಗಳು ಇಂದು ವಿಜೃಂಭಿಸುತ್ತಿವೆ. ಆದರೆ, ಬಡತನ ಎಲ್ಲ ಸಮುದಾಯಗಳಲ್ಲೂ ಹಾಗೆಯೇ ಸಾಗಿದೆ ಎಂದರು.</p><p>ಭಾರತ ಇಂದು ಅಂಗವೈಕಲ್ಯವಾಗಿದೆ. ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಆದರೆ, ದೇಶದ ಮಹಿಳೆಯರು ಧ್ವನಿ ಎತ್ತದಿರುವುದು ನಾಚಿಕೆಗೇಡು ಎಂದು ಹೇಳಿದರು.</p><p>ನಿಕಟಪೂರ್ವ ಅಧ್ಯಕ್ಷ ಅಲ್ಲಾಗಿರಿರಾಜ ಮಾತನಾಡಿ, ‘ಡಬಲ್ ಎಂಜಿನ್ ಸರ್ಕಾರ, ತ್ರಿಬಲ್ ಎಂಜಿನ್ ಸರ್ಕಾರಗಳ ಪರಿಣಾಮದಿಂದ ಇಂದು ಬರಹಗಾರರಿಗೆ ಪ್ರತ್ಯೇಕ ಬಂಧಿಖಾನೆ ಕಟ್ಟಬೇಕಾದ ಸಂದರ್ಭ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು. </p><p>ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಇಂದು ಚಡ್ಡಿ, ಸೀರೆ ಮಾರುವ ಸಮ್ಮೇಳನಗಳು ಹೆಚ್ಚಾಗಿವೆ. ಪುಸ್ತಕ ಮಾರುವ ಸಮ್ಮೇಳನ ಕಡಿಮೆಯಾಗತೊಡಗಿವೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>