ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಿರಾಶ್ರಿತರ ಕೇಂದ್ರದ ಅಧೀಕ್ಷಕಿ ಪದ್ಮಜಾ ಪಾಟೀಲ, ಶುಕ್ರವಾರ ಕೇಂದ್ರದ ಸಿಬ್ಬಂದಿ ಬಂಧಿಸಿ ಕರೆತಂದಿದ್ದ ವೃದ್ಧ ಭಿಕ್ಷುಕನನ್ನು ವಿಚಾರಣೆ ಮಾಡಿದಾಗ ಅವರು ಇಂಚಿಗೇರಿ ಗ್ರಾಮದ ನಿವಾಸಿ ಮುತ್ತಪ್ಪ ವಡೆಯರ ಎಂದು ತಿಳಿದುಬಂದಿತು. ಊರಿನವರ ಸಹಕಾರದಿಂದ ಅವರ ಮಗ ರಾಮಗೊಂಡ ವಡೆಯರ ಅವರನ್ನು ಕೇಂದ್ರಕ್ಕೆ ಕರೆಯಿಸಿ, ಹಣದ ಸಮೇತ ವೃದ್ಧನನ್ನು ಮನೆಗೆ ಕಳುಹಿಸಿಕೊಟ್ಟಿದ್ದೇವೆ ಎಂದು ತಿಳಿಸಿದರು.