ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಾಗದ ರೈತ: ಮುಂದುವರಿದ ಕಾರ್ಯಾಚರಣೆ

Last Updated 9 ಜುಲೈ 2021, 15:54 IST
ಅಕ್ಷರ ಗಾತ್ರ

ಆಲಮೇಲ: ಸಮೀಪದ ಕುರಬತಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಹಳ್ಳ ದಾಟುವಾಗ ಕೊಚ್ಚಿ ಹೋಗಿರುವರೈತ ಬಸವಂತಪ್ಪ ಅಂಬಾಗೋಳ ಪತ್ತೆ ಕಾರ್ಯಾಚರಣೆ ಶುಕ್ರವಾರ ದಿನಪೂರ್ತಿ ನಡೆಯಿತು.

ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ರಾತ್ರಿವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಈಜುಗಾರರು ಸತತವಾಗಿ ಶೋಧಾ ಕಾರ್ಯಾಚಾರಣೆ ಮಾಡುತ್ತಿದ್ದು, ಯಾವುದೇ ಸುಳಿವು ಲಭಿಸಲಿಲ್ಲ.

ಎರಡು ದಿನವಾದರೂ ರೈತನ ಸುಳಿವು ಸಿಗದೇ ಇರುವುದರಿಂದಕುಟುಂಬದವರು ಆತಂಕಕೊಳಗಾಗಿದ್ದಾರೆ.

ಸಿಂದಗಿ ತಹಶೀಲ್ದಾರ್‌ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಉಸ್ತುವಾರಿಯಲ್ಲಿ ಪತ್ತೆ ಕಾರ್ಯಾಚರಣೆ ನಡೆದಿದೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸುರೇಶ ಗಡ್ಡಿ ಹೇಳಿದರು.

ತಾರಾಪುರ ಗ್ರಾಮದ ಭೀಮಾ ಹಿನ್ನೀರಿನಲ್ಲೂ ಶೋಧ ನಡೆದಿದ್ದು, ನುರಿತ ಮೀನುಗಾರರ ತಂಡವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಕಂದಾಯ ಅಧಿಕಾರಿ ಅತ್ತಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT