<p><strong>ಸಿಂದಗಿ:</strong> ‘ಪಟ್ಟಣದಲ್ಲಿ 8-10 ಸಾವಿರ ಜನಸಂಖ್ಯೆ ಹೊಂದಿದ ತಳವಾರ ಸಮುದಾಯಕ್ಕೆ ಒಂದು ಕಲ್ಯಾಣಮಂಟಪವಿಲ್ಲ. ಹೀಗಾಗಿ ಹೈಟೆಕ್ ಕಲ್ಯಾಣಮಂಟಪ ನಿರ್ಮಾಣಕ್ಕಾಗಿ ಮತಕ್ಷೇತ್ರದ ಶಾಸಕರು ₹5 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು’ ಎಂದು ತಳವಾರ ಮಹಾಸಭಾ ಸಂಘ ನಗರ ಘಟಕದ ಅಧ್ಯಕ್ಷ ಪ್ರಶಾಂತ ಕದ್ದರಕಿ ಮನವಿ ಮಾಡಿದರು.</p>.<p>ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರು ತಳವಾರ ಕಲ್ಯಾಣಮಂಟಪಕ್ಕಾಗಿ ಸರ್ಕಾರದಿಂದ 20 ಗುಂಟೆ ಜಮೀನು ಮಂಜೂರು ಮಾಡಿಸಿದ್ದಾರೆ. ಇದಕ್ಕಾಗಿ ಹಿಂದುಳಿದ ವರ್ಗದ ಅನುದಾನದಲ್ಲಿ ₹2 ಕೋಟಿ ಬಿಡುಗಡೆ ಮಾಡುವ ಭರವಸೆಯೂ ನೀಡಿದ್ದಾರೆ. ಇದಕ್ಕೂ ಮೊದಲು ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ ಅವರು ತಮ್ಮ ವೈಯಕ್ತಿಕ ₹31 ಲಕ್ಷದಲ್ಲಿ 11 ಗುಂಟೆ ಜಮೀನು ತಳವಾರ ಸಮಾಜದ ಸಮುದಾಯಕ್ಕಾಗಿ ಖರೀದಿಸಿ ಕೊಟ್ಟಿದ್ದಾರೆ. ಮೋರಟಗಿ ನಾಕಾ ಬಳಿ ಸ.ನಂ 281/5 ಈ ಜಾಗೆ ಉತಾರಿಯಲ್ಲಿ ಕೂಡ ಸಂಘದ ಹೆಸರು ಸೇರ್ಪಡೆಯಾಗಿದೆ. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮುದಾಯ ಭವನಕ್ಕಾಗಿ ₹2 ಕೋಟಿ ಅನುದಾನ ಕೂಡ ಮಂಜೂರು ಮಾಡಿಸಿದ್ದರು. ಆದರೆ ಅದು ಬಿಡುಗಡೆಗೊಳ್ಳಲಿಲ್ಲ’ ಎಂದು ತಿಳಿಸಿದರು.</p>.<p>ಈ ಭವನಕ್ಕೂ ಶಾಸಕರು ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಕೇಳಿಕೊಂಡರು.</p>.<p>ತಳವಾರ ಮಹಾಸಭಾ ಸಂಘದ ಕಾರ್ಯದರ್ಶಿ ಪೀರೂ ಕೆರೂರ, ಸಂಘದ ತಾಲ್ಲೂಕು ಶಾಖೆಯ ಅಧ್ಯಕ್ಷ ಈರಣ್ಣ ಕುರಿ, ಜಿಲ್ಲಾ ಘಟಕದ ನಿರ್ದೇಶಕ ವಿಠ್ಠಲ ಯರಗಲ್ಲ, ಬಸವರಾಜ ರಂಜಣಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ‘ಪಟ್ಟಣದಲ್ಲಿ 8-10 ಸಾವಿರ ಜನಸಂಖ್ಯೆ ಹೊಂದಿದ ತಳವಾರ ಸಮುದಾಯಕ್ಕೆ ಒಂದು ಕಲ್ಯಾಣಮಂಟಪವಿಲ್ಲ. ಹೀಗಾಗಿ ಹೈಟೆಕ್ ಕಲ್ಯಾಣಮಂಟಪ ನಿರ್ಮಾಣಕ್ಕಾಗಿ ಮತಕ್ಷೇತ್ರದ ಶಾಸಕರು ₹5 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು’ ಎಂದು ತಳವಾರ ಮಹಾಸಭಾ ಸಂಘ ನಗರ ಘಟಕದ ಅಧ್ಯಕ್ಷ ಪ್ರಶಾಂತ ಕದ್ದರಕಿ ಮನವಿ ಮಾಡಿದರು.</p>.<p>ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿಯವರು ತಳವಾರ ಕಲ್ಯಾಣಮಂಟಪಕ್ಕಾಗಿ ಸರ್ಕಾರದಿಂದ 20 ಗುಂಟೆ ಜಮೀನು ಮಂಜೂರು ಮಾಡಿಸಿದ್ದಾರೆ. ಇದಕ್ಕಾಗಿ ಹಿಂದುಳಿದ ವರ್ಗದ ಅನುದಾನದಲ್ಲಿ ₹2 ಕೋಟಿ ಬಿಡುಗಡೆ ಮಾಡುವ ಭರವಸೆಯೂ ನೀಡಿದ್ದಾರೆ. ಇದಕ್ಕೂ ಮೊದಲು ಮತಕ್ಷೇತ್ರದ ಮಾಜಿ ಶಾಸಕ ರಮೇಶ ಭೂಸನೂರ ಅವರು ತಮ್ಮ ವೈಯಕ್ತಿಕ ₹31 ಲಕ್ಷದಲ್ಲಿ 11 ಗುಂಟೆ ಜಮೀನು ತಳವಾರ ಸಮಾಜದ ಸಮುದಾಯಕ್ಕಾಗಿ ಖರೀದಿಸಿ ಕೊಟ್ಟಿದ್ದಾರೆ. ಮೋರಟಗಿ ನಾಕಾ ಬಳಿ ಸ.ನಂ 281/5 ಈ ಜಾಗೆ ಉತಾರಿಯಲ್ಲಿ ಕೂಡ ಸಂಘದ ಹೆಸರು ಸೇರ್ಪಡೆಯಾಗಿದೆ. ಇದಕ್ಕೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮುದಾಯ ಭವನಕ್ಕಾಗಿ ₹2 ಕೋಟಿ ಅನುದಾನ ಕೂಡ ಮಂಜೂರು ಮಾಡಿಸಿದ್ದರು. ಆದರೆ ಅದು ಬಿಡುಗಡೆಗೊಳ್ಳಲಿಲ್ಲ’ ಎಂದು ತಿಳಿಸಿದರು.</p>.<p>ಈ ಭವನಕ್ಕೂ ಶಾಸಕರು ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಕೇಳಿಕೊಂಡರು.</p>.<p>ತಳವಾರ ಮಹಾಸಭಾ ಸಂಘದ ಕಾರ್ಯದರ್ಶಿ ಪೀರೂ ಕೆರೂರ, ಸಂಘದ ತಾಲ್ಲೂಕು ಶಾಖೆಯ ಅಧ್ಯಕ್ಷ ಈರಣ್ಣ ಕುರಿ, ಜಿಲ್ಲಾ ಘಟಕದ ನಿರ್ದೇಶಕ ವಿಠ್ಠಲ ಯರಗಲ್ಲ, ಬಸವರಾಜ ರಂಜಣಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>