<p><strong>ಮುದ್ದೇಬಿಹಾಳ:</strong> ತಾಲ್ಲೂಕಿನ ಆರೇಮುರಾಳ ಗ್ರಾಮದ ರೈತ ಮಹಿಳೆ ಸಾವಿತ್ರಿ ರಮೇಶ ವಗ್ಗರ 15 ವರ್ಷಗಳಿಂದ ಬೆರಣಿ ತಟ್ಟಿ, ಮಾರುವ ಕಾಯಕದಲ್ಲಿ ತೊಡಗಿದ್ದಾರೆ. ಇದು ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ. </p>.<p>ಸಾವಿತ್ರಿ ವಗ್ಗರ ಅವರದ್ದು ಕೃಷಿ ಹಿನ್ನೆಲೆಯುಳ್ಳ ಕುಟುಂಬ. ಮನೆಯಲ್ಲಿ ನಾಲ್ಕು ಆಕಳು, ಎರಡು ಕೋಣ, ನಾಲ್ಕು ಕರು, ಎರಡು ದನಗಳಿವೆ. ಕೋಳಿ, ಆಡುಗಳನ್ನೂ ಸಾಕಿದ್ದಾರೆ. ದನಕರುಗಳಿಂದ ಬರುವ ಸಗಣಿಯನ್ನು ನಿತ್ಯ (ಕುರುಳು) ಬಡಿದು ಜೋಡಿಸಿ ಇಡುತ್ತಾರೆ.</p>.<p>ಸಾವಿತ್ರಿ ವಗ್ಗರ ಅವರು ದೇವರ ಅಭಿಷೇಕಕ್ಕೆ, ಪೂಜೆಗೆ ಬೇಕಾದ ಶುದ್ಧ ಪಂಚಗವ್ಯವನ್ನು ಅತೀ ಕಡಿಮೆ ದರದಲ್ಲಿ ಜನರಿಗೆ ನೀಡುತ್ತಾರೆ. ಆಕಳ ತುಪ್ಪ, ಹಾಲು, ಮೊಸರು, ಗೋಮೂತ್ರ, ಜೇನು ತುಪ್ಪವನ್ನು ತಯಾರಿಸಿ ಕೊಡುತ್ತಾರೆ.</p>.<p><strong>ಚಿನ್ನ, ಜಮೀನು ಖರೀದಿ:</strong></p>.<p>ಸಾವಿತ್ರಿ ವಗ್ಗರ ಅವರ ಕುಟುಂಬ ಬೆರಣಿ ಮಾರಿಯೇ ಪ್ರತಿ ವರ್ಷ ₹50 ಸಾವಿರದವರೆಗೆ ಆದಾಯ ಗಳಿಸುತ್ತಾರೆ. ಅದೇ ಹಣದಲ್ಲಿ 10 ವರ್ಷಗಳಲ್ಲಿ ಚಿನ್ನ, ಜಮೀನು ಖರೀದಿಸಿದ್ದಾರೆ.</p>.<p>‘10 ತೊಲೆ ಚಿನ್ನ, ಆರೇಮುರಾಳದಲ್ಲಿ 2 ಎಕರೆ ಜಮೀನು, ಸಿಂದಗಿ ತಾಲ್ಲೂಕಿನಲ್ಲಿ 3 ಎಕರೆ ಜಮೀನು ಖರೀದಿಸಿದ್ದೇವೆ. ನಮಗೆ ಮೂವರು ಮಕ್ಕಳಲ್ಲಿ ಒಬ್ಬ ಮಗ ಎಲ್ಎಲ್ಬಿ ಓದುತ್ತಿದ್ದರೆ, ಇನ್ನೊಬ್ಬ ಪುತ್ರನ ದ್ವಿತೀಯ ಪಿಯುಸಿ ಶಿಕ್ಷಣ ಪೂರ್ಣಗೊಂಡಿದೆ. ಮಗಳಿಗೆ ಮದುವೆ ಮಾಡಿದ್ದೇವೆ’ ಎಂದು ಸಾವಿತ್ರಿ ವಗ್ಗರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮನೆಯ ತಗಡಿನ ಚಾವಣಿ ಮೇಲೆ ಬೆರಣಿಯನ್ನು ತಟ್ಟಿ ಒಣಗಿಸುತ್ತೇನೆ. ಬೇಕಾದವರಿಗೆ ತಲಾ ಒಂದು ಬೆರಣಿಗೆ ₹ 5 ರಂತೆ ಮಾರುತ್ತೇನೆ. ಬಾಣಂತನಕ್ಕೆ ಒಯ್ಯುವವರು 100 ರಿಂದ 200 ಕುರುಳು ಖರೀದಿಸುತ್ತಾರೆ. ಆದರೆ, ಎತ್ತಿನ ಬಂಡಿಗೆ ಹಳಿ ಜೋಡಿಸುವರು 500 ರಿಂದ 600 ಬೆರಣಿ ಕೊಳ್ಳುತ್ತಾರೆ’ ಎಂದರು.</p>.<p>ಸಾವಿತ್ರಿ ಅವರ ಪತಿ ರಮೇಶ ವಗ್ಗರ ಮುದ್ದೇಬಿಹಾಳದ ಎಪಿಎಂಸಿಯಲ್ಲಿ ಅಡತಿ ಅಂಗಡಿಯಲ್ಲಿ ಕೆಲಸ ಮಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ:</strong> ತಾಲ್ಲೂಕಿನ ಆರೇಮುರಾಳ ಗ್ರಾಮದ ರೈತ ಮಹಿಳೆ ಸಾವಿತ್ರಿ ರಮೇಶ ವಗ್ಗರ 15 ವರ್ಷಗಳಿಂದ ಬೆರಣಿ ತಟ್ಟಿ, ಮಾರುವ ಕಾಯಕದಲ್ಲಿ ತೊಡಗಿದ್ದಾರೆ. ಇದು ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ. </p>.<p>ಸಾವಿತ್ರಿ ವಗ್ಗರ ಅವರದ್ದು ಕೃಷಿ ಹಿನ್ನೆಲೆಯುಳ್ಳ ಕುಟುಂಬ. ಮನೆಯಲ್ಲಿ ನಾಲ್ಕು ಆಕಳು, ಎರಡು ಕೋಣ, ನಾಲ್ಕು ಕರು, ಎರಡು ದನಗಳಿವೆ. ಕೋಳಿ, ಆಡುಗಳನ್ನೂ ಸಾಕಿದ್ದಾರೆ. ದನಕರುಗಳಿಂದ ಬರುವ ಸಗಣಿಯನ್ನು ನಿತ್ಯ (ಕುರುಳು) ಬಡಿದು ಜೋಡಿಸಿ ಇಡುತ್ತಾರೆ.</p>.<p>ಸಾವಿತ್ರಿ ವಗ್ಗರ ಅವರು ದೇವರ ಅಭಿಷೇಕಕ್ಕೆ, ಪೂಜೆಗೆ ಬೇಕಾದ ಶುದ್ಧ ಪಂಚಗವ್ಯವನ್ನು ಅತೀ ಕಡಿಮೆ ದರದಲ್ಲಿ ಜನರಿಗೆ ನೀಡುತ್ತಾರೆ. ಆಕಳ ತುಪ್ಪ, ಹಾಲು, ಮೊಸರು, ಗೋಮೂತ್ರ, ಜೇನು ತುಪ್ಪವನ್ನು ತಯಾರಿಸಿ ಕೊಡುತ್ತಾರೆ.</p>.<p><strong>ಚಿನ್ನ, ಜಮೀನು ಖರೀದಿ:</strong></p>.<p>ಸಾವಿತ್ರಿ ವಗ್ಗರ ಅವರ ಕುಟುಂಬ ಬೆರಣಿ ಮಾರಿಯೇ ಪ್ರತಿ ವರ್ಷ ₹50 ಸಾವಿರದವರೆಗೆ ಆದಾಯ ಗಳಿಸುತ್ತಾರೆ. ಅದೇ ಹಣದಲ್ಲಿ 10 ವರ್ಷಗಳಲ್ಲಿ ಚಿನ್ನ, ಜಮೀನು ಖರೀದಿಸಿದ್ದಾರೆ.</p>.<p>‘10 ತೊಲೆ ಚಿನ್ನ, ಆರೇಮುರಾಳದಲ್ಲಿ 2 ಎಕರೆ ಜಮೀನು, ಸಿಂದಗಿ ತಾಲ್ಲೂಕಿನಲ್ಲಿ 3 ಎಕರೆ ಜಮೀನು ಖರೀದಿಸಿದ್ದೇವೆ. ನಮಗೆ ಮೂವರು ಮಕ್ಕಳಲ್ಲಿ ಒಬ್ಬ ಮಗ ಎಲ್ಎಲ್ಬಿ ಓದುತ್ತಿದ್ದರೆ, ಇನ್ನೊಬ್ಬ ಪುತ್ರನ ದ್ವಿತೀಯ ಪಿಯುಸಿ ಶಿಕ್ಷಣ ಪೂರ್ಣಗೊಂಡಿದೆ. ಮಗಳಿಗೆ ಮದುವೆ ಮಾಡಿದ್ದೇವೆ’ ಎಂದು ಸಾವಿತ್ರಿ ವಗ್ಗರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮನೆಯ ತಗಡಿನ ಚಾವಣಿ ಮೇಲೆ ಬೆರಣಿಯನ್ನು ತಟ್ಟಿ ಒಣಗಿಸುತ್ತೇನೆ. ಬೇಕಾದವರಿಗೆ ತಲಾ ಒಂದು ಬೆರಣಿಗೆ ₹ 5 ರಂತೆ ಮಾರುತ್ತೇನೆ. ಬಾಣಂತನಕ್ಕೆ ಒಯ್ಯುವವರು 100 ರಿಂದ 200 ಕುರುಳು ಖರೀದಿಸುತ್ತಾರೆ. ಆದರೆ, ಎತ್ತಿನ ಬಂಡಿಗೆ ಹಳಿ ಜೋಡಿಸುವರು 500 ರಿಂದ 600 ಬೆರಣಿ ಕೊಳ್ಳುತ್ತಾರೆ’ ಎಂದರು.</p>.<p>ಸಾವಿತ್ರಿ ಅವರ ಪತಿ ರಮೇಶ ವಗ್ಗರ ಮುದ್ದೇಬಿಹಾಳದ ಎಪಿಎಂಸಿಯಲ್ಲಿ ಅಡತಿ ಅಂಗಡಿಯಲ್ಲಿ ಕೆಲಸ ಮಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>