ವಿಜಯಪುರ ಮಹಾನಗರ ಪಾಲಿಕೆಯ ಉಪ ಮೇಯರ್ ಗೋಪಾಲ ಘಟಕಾಂಬಳೆ, ಶಂಕರ ಕುಂಬಾರ ಬಿಜೆಪಿಯ ಕಾರ್ಪೊರೇಟರ್ಗಳು. ಮಾಜಿ ಸಚಿವ ಅಪ್ಪು ಬೆಂಬಲಿಗರು. ಗಣೇಶ ಹಬ್ಬದ ಶುಭಾಶಯ ಕೋರುವ ತಮ್ಮ ಜಾಹೀರಾತು ಫಲಕದಲ್ಲಿ ಒಂದೆಡೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಯ ಭಾವಚಿತ್ರ ಪ್ರಕಟಿಸಿದ್ದರೆ, ಮತ್ತೊಂದು ಮಗ್ಗುಲಲ್ಲಿ ಎಂ.ಬಿ.ಪಾಟೀಲ ಭಾವಚಿತ್ರ ಹಾಕುವ ಮೂಲಕ ತಮ್ಮ ಅಭಿಮಾನ, ನಿಷ್ಠೆ ಮೆರೆದಿದ್ದಾರೆ.