<p>ತಾಳಿಕೋಟೆ: ಕೊರೊನಾ ಅವಧಿಯಲ್ಲಿ ಹೆತ್ತ ಕಂದಮ್ಮಗಳನ್ನು ಹತ್ತಿರ ಕರೆದು ಮುದ್ದಿಸಿಲ್ಲ, ಅಳುವ ಮಗ-ಮಗಳನ್ನು ಹತ್ತಿರ ಸೇರಿಸಿಲ್ಲ. ಜೊತೆ ಮಲಗಿ ಅಪ್ಪಿಕೊಂಡು ಮಲಗಿ ನಿದ್ರಿಸದಂತಹ ಪರಿಸ್ಥಿತಿ. ವೈಯಕ್ತಿಕ ಸಂತೋಷ ಬಿಟ್ಟು ರೋಗಿಗಳ ಆರೋಗ್ಯ ಸೇವೆ ಮಾಡುತ್ತಿದ್ದೇವೆ.</p>.<p>ಹೀಗೆಂದವರು ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 15 ವರ್ಷಗಳಿಂದ ಶುಶ್ರೂಷಕ ಅಧಿಕಾರಿಯಾಗಿರುವ ಜ್ಯೋತಿ ಮಲ್ಲಿಕಾರ್ಜುನ ಬೋರಾಮಣಿ(ಕೋಳೂರಗಿ).</p>.<p>ಹತ್ತಿರವಿದ್ದರೂ ಮಕ್ಕಳನ್ನು ಮುದ್ದಿಸದಿರುವಂತಹ ಸ್ಥಿತಿ ಯಾವ ತಾಯಿಗೂ ಬರದಿರಲಿ. ಮಕ್ಕಳನ್ನು ನೆನೆದರೆ ಹೃದಯ ಹಿಂಡಿದಂತಾಗುತ್ತದೆ ಎಂದು ಕಣ್ಣಚಲ್ಲಿ ನೀರು ತಂದರು.</p>.<p>ಆಸ್ಪತ್ರೆಯಲ್ಲಿ ನಿತ್ಯ ಕನಿಷ್ಠ ನಾಲ್ಕೈದು ಜನರಾದರೂ ಕೊರೊನಾ ರೋಗಿಗಳಿರುತ್ತಾರೆ. ಸೋಂಕಿದ್ದರೂ ಹೇಳುವುದಿಲ್ಲ. ಮಾಸ್ಕ್ ತೆಗೆದು ಮಾತನಾಡುತ್ತಾರೆ. ಅವರ ಉಸಿರು ಮುಖ, ಮೈಗೆ ತಾಗುತ್ತದೆ. ಸೋಂಕಿತರಿಗಿಂತ ಜೊತೆ ಬರುವವರು ತಾಳ್ಮೆಯಿಂದ ವರ್ತಿಸುವುದಿಲ್ಲ, ಸಹನೆ ಕಡಿಮೆ. ರೋಗಿಗಳ ಮೇಲಾಗಲಿ, ಜೊತೆಯಿದ್ದವರ ಮೇಲಾಗಲಿ ಆ ಕ್ಷಣಕ್ಕೆ ಕೋಪ ಬಂದರೂ ಅವರ ಸ್ಥಿತಿಯಲ್ಲಿದ್ದಾಗ ನಮ್ಮ ಪಾಡೂ ಹಾಗೇ ಇರುತ್ತದೆ ಎಂದು ಮನಸ್ಸಿಗೆ ಸಂತೈಸಿಕೊಂಡು ಕೆಲಸ ಮಾಡುತ್ತಿರುವೆ.</p>.<p>ಸೇವೆ ಪಡೆದವರು ಹೇಳುವ ಧನ್ಯವಾದಗಳು ಸಂತಸ ತರುತ್ತವೆ. ಇಚೇಗೆ ಪತಿಕೂಡ ಕೊರೊನಾ ಸೋಂಕು ತಗುಲಿ ವಿಜಯಪುರದಲ್ಲಿ ಚಿಕಿತ್ಸೆ ಪಡೆದು ಬಂದರು. ದೇವರು ದೊಡ್ಡವನು ಕ್ಷೇಮವಾಗಿ ಮರಳಿದರು.</p>.<p>ಹೆರಿಗೆ ತಜ್ಞ ವೈದ್ಯರಿಲ್ಲದಿದ್ದರೂ ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಪ್ರತಿ ತಿಂಗಳೂ ಸರಾಸರಿ 70-80 ಗರ್ಭಿಣಿಯರಿಗೆ ಸಿಜೆರಿಯನ್ ಇಲ್ಲವೇ, ಸುರಕ್ಷಿತ ಹೆರಿಗೆ ಮಾಡಿಸಿದ್ದೇವೆ. ಕೋವಿಡ್; ಲಕ್ಷಣ ಇದ್ದವರೂ ಹೆರಿಗೆ ಮಾಡಿಸಿಕೊಂಡಿದ್ದಾರೆ.</p>.<p>ಯಾವುದೇ ಅನಾರೋಗ್ಯ ಕಂಡು ಬಂದರೂ ತಕ್ಷಣ ವೈದ್ಯರ ಬಳಿ ಬರಬೇಕು. ವ್ಯಾಕ್ಸಿನ್ ಹಾಕಿಸಿಕೊಂಡವರು ಇಂದಿನವರೆಗೆ ತೀರಿಕೊಂಡ ವರದಿಗಳಿಲ್ಲ. ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಂಡು, ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾಳಿಕೋಟೆ: ಕೊರೊನಾ ಅವಧಿಯಲ್ಲಿ ಹೆತ್ತ ಕಂದಮ್ಮಗಳನ್ನು ಹತ್ತಿರ ಕರೆದು ಮುದ್ದಿಸಿಲ್ಲ, ಅಳುವ ಮಗ-ಮಗಳನ್ನು ಹತ್ತಿರ ಸೇರಿಸಿಲ್ಲ. ಜೊತೆ ಮಲಗಿ ಅಪ್ಪಿಕೊಂಡು ಮಲಗಿ ನಿದ್ರಿಸದಂತಹ ಪರಿಸ್ಥಿತಿ. ವೈಯಕ್ತಿಕ ಸಂತೋಷ ಬಿಟ್ಟು ರೋಗಿಗಳ ಆರೋಗ್ಯ ಸೇವೆ ಮಾಡುತ್ತಿದ್ದೇವೆ.</p>.<p>ಹೀಗೆಂದವರು ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 15 ವರ್ಷಗಳಿಂದ ಶುಶ್ರೂಷಕ ಅಧಿಕಾರಿಯಾಗಿರುವ ಜ್ಯೋತಿ ಮಲ್ಲಿಕಾರ್ಜುನ ಬೋರಾಮಣಿ(ಕೋಳೂರಗಿ).</p>.<p>ಹತ್ತಿರವಿದ್ದರೂ ಮಕ್ಕಳನ್ನು ಮುದ್ದಿಸದಿರುವಂತಹ ಸ್ಥಿತಿ ಯಾವ ತಾಯಿಗೂ ಬರದಿರಲಿ. ಮಕ್ಕಳನ್ನು ನೆನೆದರೆ ಹೃದಯ ಹಿಂಡಿದಂತಾಗುತ್ತದೆ ಎಂದು ಕಣ್ಣಚಲ್ಲಿ ನೀರು ತಂದರು.</p>.<p>ಆಸ್ಪತ್ರೆಯಲ್ಲಿ ನಿತ್ಯ ಕನಿಷ್ಠ ನಾಲ್ಕೈದು ಜನರಾದರೂ ಕೊರೊನಾ ರೋಗಿಗಳಿರುತ್ತಾರೆ. ಸೋಂಕಿದ್ದರೂ ಹೇಳುವುದಿಲ್ಲ. ಮಾಸ್ಕ್ ತೆಗೆದು ಮಾತನಾಡುತ್ತಾರೆ. ಅವರ ಉಸಿರು ಮುಖ, ಮೈಗೆ ತಾಗುತ್ತದೆ. ಸೋಂಕಿತರಿಗಿಂತ ಜೊತೆ ಬರುವವರು ತಾಳ್ಮೆಯಿಂದ ವರ್ತಿಸುವುದಿಲ್ಲ, ಸಹನೆ ಕಡಿಮೆ. ರೋಗಿಗಳ ಮೇಲಾಗಲಿ, ಜೊತೆಯಿದ್ದವರ ಮೇಲಾಗಲಿ ಆ ಕ್ಷಣಕ್ಕೆ ಕೋಪ ಬಂದರೂ ಅವರ ಸ್ಥಿತಿಯಲ್ಲಿದ್ದಾಗ ನಮ್ಮ ಪಾಡೂ ಹಾಗೇ ಇರುತ್ತದೆ ಎಂದು ಮನಸ್ಸಿಗೆ ಸಂತೈಸಿಕೊಂಡು ಕೆಲಸ ಮಾಡುತ್ತಿರುವೆ.</p>.<p>ಸೇವೆ ಪಡೆದವರು ಹೇಳುವ ಧನ್ಯವಾದಗಳು ಸಂತಸ ತರುತ್ತವೆ. ಇಚೇಗೆ ಪತಿಕೂಡ ಕೊರೊನಾ ಸೋಂಕು ತಗುಲಿ ವಿಜಯಪುರದಲ್ಲಿ ಚಿಕಿತ್ಸೆ ಪಡೆದು ಬಂದರು. ದೇವರು ದೊಡ್ಡವನು ಕ್ಷೇಮವಾಗಿ ಮರಳಿದರು.</p>.<p>ಹೆರಿಗೆ ತಜ್ಞ ವೈದ್ಯರಿಲ್ಲದಿದ್ದರೂ ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ಪ್ರತಿ ತಿಂಗಳೂ ಸರಾಸರಿ 70-80 ಗರ್ಭಿಣಿಯರಿಗೆ ಸಿಜೆರಿಯನ್ ಇಲ್ಲವೇ, ಸುರಕ್ಷಿತ ಹೆರಿಗೆ ಮಾಡಿಸಿದ್ದೇವೆ. ಕೋವಿಡ್; ಲಕ್ಷಣ ಇದ್ದವರೂ ಹೆರಿಗೆ ಮಾಡಿಸಿಕೊಂಡಿದ್ದಾರೆ.</p>.<p>ಯಾವುದೇ ಅನಾರೋಗ್ಯ ಕಂಡು ಬಂದರೂ ತಕ್ಷಣ ವೈದ್ಯರ ಬಳಿ ಬರಬೇಕು. ವ್ಯಾಕ್ಸಿನ್ ಹಾಕಿಸಿಕೊಂಡವರು ಇಂದಿನವರೆಗೆ ತೀರಿಕೊಂಡ ವರದಿಗಳಿಲ್ಲ. ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಂಡು, ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>