ಮೂರು ಪಕ್ಷದಲ್ಲಿ ಕೋಟಿ ಆಸ್ತಿವಂತರು
ರಾಜ್ಯದ ಜನತೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮೂರು ಪಕ್ಷಗಳಿಗೆ ಅಧಿಕಾರ ನೀಡಿ ನೋಡಿದೆ. ಮೂರು ಪಕ್ಷದಲ್ಲಿ ಸುಮಾರು ಶೇ.70 ರಷ್ಟು ಜನ ಎಂ.ಎಲ್.ಎ ಎಂಪಿಗಳಾದ ಮೇಲೆ 100 ಕೋಟಿ ಆಸ್ತಿಯನ್ನು ಮಾಡಿದ್ದಾರೆ. ಅಧಿಕಾರ ಬಂದ ನಂತರ ಇಷ್ಟು ಪ್ರಮಾಣದ ದುಡ್ಡು ಯಾವ ರೀತಿ ದುಡದಿದ್ದಾರೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು. ರಾಜ್ಯದಾದ್ಯಂತ ಎಎಪಿ ಪಕ್ಷ ಪ್ರವಾಸ ಮಾಡುತ್ತಿದೆ. ಹಳ್ಳಿಗಳಿಗೆ ಹೋಗಿ ಜನರೊಂದಿಗೆ ಸಮಾಲೋಚನೆ ಮಾಡಲಾಗುತ್ತಿದೆ. ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ. ಬಡ ಮಕ್ಕಳು ಬೆಳೆಯಲು ಎಚ್ಚೆತ್ತುಕೊಳ್ಳಲು ಎಎಪಿ ಜಾಗೃತಿ ಮೂಡಿಸುತ್ತಿದೆ. ರಾಜ್ಯದ ತೆರಿಗೆ ಹಣ ಸರಿಯಾಗಿ ಬಳಕೆಯಾಗಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕರಿಗೆ ಮನವರಿಕೆ ಮಾಡುತ್ತಿದೆ ಎಂದರು.