<p><strong>ವಿಜಯಪುರ:</strong> ಕೋವಿಡ್ನಿಂದ ಸಾವಿಗೀಡಾದ ಇಬ್ಬರು ವ್ಯಕ್ತಿಗಳ ಶವವನ್ನು ಇಲ್ಲಿನ ಚಾಲುಕ್ಯ ನಗರದಲ್ಲಿನ ಶ್ರೀಸಿದ್ಧೇಶ್ವರ ರುದ್ರಭೂಮಿಯಲ್ಲಿ ಹೂಳಿರುವ ಕಾರಣಕ್ಕೆ ಸ್ಥಳೀಯರು ಸಶ್ಮಾನದ ಗೇಟಿಗೆ ಸೋಮವಾರ ಮುಳ್ಳು ಕಂಟಿ ಹಚ್ಚಿ, ಬಂದ್ ಮಾಡಿದ್ದಾರೆ.</p>.<p>‘ಕೋವಿಡ್ ಮುಗಿಯುವವರೆಗೂ ಯಾರೂ ಸ್ಮಶಾನದಲ್ಲಿ ಶವಗಳನ್ನು ಹೂಳದಂತೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಚಾಲುಕ್ಯನಗರ ಮತ್ತು ಸಿದ್ಧಿ ವಿನಾಯಕ ಕಾಲೊನಿ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.</p>.<p>‘ಕೋವಿಡ್ನಿಂದ ಸಾವಿಗೀಡಾದವರ ಶವಗಳನ್ನು ಹೂಳಿದ ಬಳಿಕ ಪಿಪಿಇ ಕಿಟ್ಗಳನ್ನು ಸಶ್ಮಾನದಲ್ಲಿ ಹಾಗೆಯೇ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ಹಾಗೂ ಮಹಾನಗರ ಪಾಲಿಕೆಗೆ ದೂರು ನೀಡಿದ ಬಳಿಕ ಅವುಗಳನ್ನು ವಿಲೇವಾರಿ ಮಾಡಿದ್ದಾರೆ. ಸ್ಮಶಾನದ ಸಮೀಪದ ಮನೆಗಳಲ್ಲಿರುವ ವೃದ್ದರು, ಮಕ್ಕಳು, ಮಹಿಳೆಯರು ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳ ಬಳಿ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>‘ಸಶ್ಮಾನವನ್ನು ಬಂದ್ ಮಾಡದಿದ್ದರೆ ಮುಷ್ಕರ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಕೋವಿಡ್ನಿಂದ ಸಾವಿಗೀಡಾದ ಇಬ್ಬರು ವ್ಯಕ್ತಿಗಳ ಶವವನ್ನು ಇಲ್ಲಿನ ಚಾಲುಕ್ಯ ನಗರದಲ್ಲಿನ ಶ್ರೀಸಿದ್ಧೇಶ್ವರ ರುದ್ರಭೂಮಿಯಲ್ಲಿ ಹೂಳಿರುವ ಕಾರಣಕ್ಕೆ ಸ್ಥಳೀಯರು ಸಶ್ಮಾನದ ಗೇಟಿಗೆ ಸೋಮವಾರ ಮುಳ್ಳು ಕಂಟಿ ಹಚ್ಚಿ, ಬಂದ್ ಮಾಡಿದ್ದಾರೆ.</p>.<p>‘ಕೋವಿಡ್ ಮುಗಿಯುವವರೆಗೂ ಯಾರೂ ಸ್ಮಶಾನದಲ್ಲಿ ಶವಗಳನ್ನು ಹೂಳದಂತೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಚಾಲುಕ್ಯನಗರ ಮತ್ತು ಸಿದ್ಧಿ ವಿನಾಯಕ ಕಾಲೊನಿ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.</p>.<p>‘ಕೋವಿಡ್ನಿಂದ ಸಾವಿಗೀಡಾದವರ ಶವಗಳನ್ನು ಹೂಳಿದ ಬಳಿಕ ಪಿಪಿಇ ಕಿಟ್ಗಳನ್ನು ಸಶ್ಮಾನದಲ್ಲಿ ಹಾಗೆಯೇ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ಹಾಗೂ ಮಹಾನಗರ ಪಾಲಿಕೆಗೆ ದೂರು ನೀಡಿದ ಬಳಿಕ ಅವುಗಳನ್ನು ವಿಲೇವಾರಿ ಮಾಡಿದ್ದಾರೆ. ಸ್ಮಶಾನದ ಸಮೀಪದ ಮನೆಗಳಲ್ಲಿರುವ ವೃದ್ದರು, ಮಕ್ಕಳು, ಮಹಿಳೆಯರು ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳ ಬಳಿ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>‘ಸಶ್ಮಾನವನ್ನು ಬಂದ್ ಮಾಡದಿದ್ದರೆ ಮುಷ್ಕರ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>