<p><strong>ಇಂಡಿ:</strong> ‘ಆಧುನಿಕ ಕೃಷಿ ಪದ್ಧತಿಗಳ ಮೂಲಕ ರೈತರನ್ನು ಸಮೃದ್ಧಗೊಳಿಸುವ ಅಡಿಪಾಯವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ತಾಲ್ಲೂಕಿನಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ’ ಎಂದು ಕೃಷಿ ಉಪ ನಿರ್ದೇಕ ಚಂದ್ರಕಾಂತ ಪವಾರ ಹೇಳಿದರು.</p>.<p>ತಾಲ್ಲೂಕಿನ ಹಿಂಗಣಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕೃಷಿ ಇಲಾಖೆಯಿಂದ ಮಂಗಳವಾರ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ‘ತಾಲ್ಲೂಕಿನ ಐದು ಲಕ್ಷ ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುವುದು ಕೃಷಿ ಇಲಾಖೆ ಉದ್ದೇಶ. ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಾತರಿಪಡಿಸುವುದು, ರೈತರ ಆದಾಯವನ್ನು ಸುಧಾರಿಸುವ ಮತ್ತು ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಈ ಅಭಿಯಾನದಲ್ಲಿ ಸೇರಿದೆ. ಈ ಅಂದೋಲನ ಖರೀಫ್ ಮತ್ತು ರಾಬಿ ಬೆಳೆಗಳಿಗೆ ಬಿತ್ತನೆ ಆರಂಭಕ್ಕೆ ಮುಂಚೆ ಪ್ರತಿವರ್ಷ ನಡೆಸಲು ಉದ್ದೇಶಿಸಲಾಗಿದೆ’ ಎಂದರು.</p>.<p>ಭಾರತೀಯ ತೋಟಗಾರಿಕೆ ಸಂಸ್ಥೆಯ ಬೆಂಗಳೂರಿನ ಅಧಿಕಾರಿ ಮಂಜುನಾಥ ಎಲ್. ಮಾತನಾಡಿದರು.</p>.<p>ಕೃಷಿ ವಿಜ್ಞಾನಿ ಪ್ರಸಾದ, ಕೃಷಿ ವಿಜ್ಞಾನಿ ಪ್ರಕಾಶ, ವಿಜ್ಞಾನಿ ವೀಣಾ, ವಿಜ್ಞಾನಿ ಬಾಲಾಜಿ ಕೃಷಿ ಸಂಕಲ್ಪ ಅಭಿಯಾನ ಕುರಿತು ರೈತರಿಗೆ ತಿಳಿಸಿದರು.</p>.<p>ರಾಜಶೇಖರ, ನಜೀರಸಾಬ, ಅಂಬಣ್ಣ ಕೇಲಿ, ಜಗದೀಶ ಮಹಾದೇವ ಪೂಜಾರ, ಲೀಲಾವತಿ ಗಾಯಕವಾಡ, ಜ್ಯೋತಿ ಬೇನೂರ, ಶ್ರೀದೇವಿ ಕಟ್ಟಿಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ:</strong> ‘ಆಧುನಿಕ ಕೃಷಿ ಪದ್ಧತಿಗಳ ಮೂಲಕ ರೈತರನ್ನು ಸಮೃದ್ಧಗೊಳಿಸುವ ಅಡಿಪಾಯವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ತಾಲ್ಲೂಕಿನಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ’ ಎಂದು ಕೃಷಿ ಉಪ ನಿರ್ದೇಕ ಚಂದ್ರಕಾಂತ ಪವಾರ ಹೇಳಿದರು.</p>.<p>ತಾಲ್ಲೂಕಿನ ಹಿಂಗಣಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕೃಷಿ ಇಲಾಖೆಯಿಂದ ಮಂಗಳವಾರ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ‘ತಾಲ್ಲೂಕಿನ ಐದು ಲಕ್ಷ ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುವುದು ಕೃಷಿ ಇಲಾಖೆ ಉದ್ದೇಶ. ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಾತರಿಪಡಿಸುವುದು, ರೈತರ ಆದಾಯವನ್ನು ಸುಧಾರಿಸುವ ಮತ್ತು ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಈ ಅಭಿಯಾನದಲ್ಲಿ ಸೇರಿದೆ. ಈ ಅಂದೋಲನ ಖರೀಫ್ ಮತ್ತು ರಾಬಿ ಬೆಳೆಗಳಿಗೆ ಬಿತ್ತನೆ ಆರಂಭಕ್ಕೆ ಮುಂಚೆ ಪ್ರತಿವರ್ಷ ನಡೆಸಲು ಉದ್ದೇಶಿಸಲಾಗಿದೆ’ ಎಂದರು.</p>.<p>ಭಾರತೀಯ ತೋಟಗಾರಿಕೆ ಸಂಸ್ಥೆಯ ಬೆಂಗಳೂರಿನ ಅಧಿಕಾರಿ ಮಂಜುನಾಥ ಎಲ್. ಮಾತನಾಡಿದರು.</p>.<p>ಕೃಷಿ ವಿಜ್ಞಾನಿ ಪ್ರಸಾದ, ಕೃಷಿ ವಿಜ್ಞಾನಿ ಪ್ರಕಾಶ, ವಿಜ್ಞಾನಿ ವೀಣಾ, ವಿಜ್ಞಾನಿ ಬಾಲಾಜಿ ಕೃಷಿ ಸಂಕಲ್ಪ ಅಭಿಯಾನ ಕುರಿತು ರೈತರಿಗೆ ತಿಳಿಸಿದರು.</p>.<p>ರಾಜಶೇಖರ, ನಜೀರಸಾಬ, ಅಂಬಣ್ಣ ಕೇಲಿ, ಜಗದೀಶ ಮಹಾದೇವ ಪೂಜಾರ, ಲೀಲಾವತಿ ಗಾಯಕವಾಡ, ಜ್ಯೋತಿ ಬೇನೂರ, ಶ್ರೀದೇವಿ ಕಟ್ಟಿಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>