<p><strong>ಸೊಲಾಪುರ</strong>: ನಗರದ ಹೀರಾಚಂದ ನೇಮಚಂದ ವಾಚನಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಡಾ. ರವೀಂದ್ರ ಚಿಂಚೋಳಕರ ಅವರು ರಚಿಸಿದ ‘ರಾಜಕೀಯ ಮತ್ತು ಪತ್ರಿಕೋದ್ಯಮ’ ಕೃತಿಯನ್ನು ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರು ಬಿಡುಗಡೆಗೊಳಿಸಿದರು.</p>.<p>ಆನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಾಗೂ ರಾಜಕೀಯ ಕ್ಷೇತ್ರದವರು ಅವಶ್ಯ ಓದಲು ಬೇಕಾದ ಪುಸ್ತಕ ಇದಾಗಿದೆ. ವಿವಿಧ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೂ ಆಯ್ಕೆ ಮಾಡಬಹುದಾಗಿದೆ ಎಂದರು.</p>.<p>ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ರಾಜಕೀಯ ಪತ್ರಿಕೋದ್ಯಮದ ಅವಲೋಕನ ಮಾಡಿರುವುದರ ಜೊತೆಗೆ, ಪತ್ರಿಕೋದ್ಯಮ ಹೇಗಿರಬೇಕು, ರಾಜಕಾರಣದಲ್ಲಿ ಯಾವ ಬದಲಾವಣೆಗಳು ಆಗಬೇಕು ಎಂಬುದರ ಮೇಲೂ ಸೂಕ್ತವಾಗಿ ಬೆಳಕು ಚೆಲ್ಲಲಾಗಿದೆ ಎಂದು ಹೇಳಿದರು.</p>.<p>ಪ್ರೊ. ಸುಧೀರ ಗೌಹಾಣೆ ಮಾತನಾಡಿ, ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಅಪರಾಧಿಕ ಹಿನ್ನೆಲೆಯವರು ಕಡಿಮೆ ಇದ್ದರು. ಈಗ ಆ ಪ್ರಮಾಣ ಹೆಚ್ಚಾಗುತ್ತಿದೆ ಎಂದರು.</p>.<p>ಲೇಖಕ ಡಾ. ರವೀಂದ್ರ ಚಿಂಚೋಳಕರ ಮಾತನಾಡಿ, ಪತ್ರಿಕೋದ್ಯಮದಲ್ಲಿ ಬದಲಾವಣೆ ತರಬಲ್ಲ ಶಕ್ತಿ ಇದೆ. ಯುವಕರು ರಾಜಕಾರಣವನ್ನು ದ್ವೇಷಿಸದೇ, ಉತ್ತಮ ರಾಜಕೀಯ ನಾಯಕರಾಗಿ ಮುಂದಕ್ಕೆ ಬರಬೇಕು ಎಂದು ಹೇಳಿದರು.</p>.<p>ಪತ್ರಕರ್ತ ಸುನಿಲ ಪಾಟೀಲ ಮಾತನಾಡಿ, ಇಂದಿನ ಕಾಲಕ್ಕೆ ಈ ಪುಸ್ತಕ ಅಗತ್ಯವಾಗಿತ್ತು ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರೊ. ಶ್ರೀಕಾಂತ ಯೆಳೇಗಾವಕರ ಮಾತನಾಡಿ, ಸೊಲಾಪುರ ಜಿಲ್ಲೆಯಲ್ಲಿ ಅಬ್ದುಲ್ ರಸೂಲ್ ಕುರ್ಬಾನ್ ಹುಸೇನ್ ಅವರ ಕಾಲದಿಂದ ಹೋರಾಟಗಾರ ಪತ್ರಕರ್ತರ ಪರಂಪರೆ ಇದೆ ಎಂದು ಹೇಳಿದರು.</p>.<p>ರಾಜಕೀಯ ವಿಶ್ಲೇಷಕ ರಾಜಾ ಮಾನೆ ಮಾತನಾಡಿ, ಮುದ್ರಿತ ಪತ್ರಿಕೋದ್ಯಮದಿಂದ ಡಿಜಿಟಲ್ ಪತ್ರಿಕೋದ್ಯಮದವರೆಗೆ ನಡೆದ ಮಹತ್ತರ ಬದಲಾವಣೆಗಳನ್ನೂ ಅವರು ಉಲ್ಲೇಖಿಸಿದರು.</p>.<p>ಪ್ರೊ. ಸಂತೋಷ ಪವಾರ, ಪ್ರಕಾಶಕ ಪಿಂಪಳಾಪುರೆ, ಡಾ.ಅಂಬಾದಾಸ ಭಾಸ್ಕೆ, ವಿಶ್ರಾಂತ ಕುಲಪತಿ ಪ್ರೊ. ಸುಧೀರ ಗೌಹಾಣೆ, ಶ್ರಮಿಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಕ್ರಮ ಖೇಲಗುಡೆ ಹಾಗೂ ಛತ್ರಪತಿ ಸಂಭಾಜಿನಗರದ ವಿದ್ಯಾರ್ಥಿ ಪುಸ್ತಕ ಪ್ರಕಾಶನದ ಶಶಿಕಾಂತ ಪಿಂಪಳಾಪುರೆ ವಿದ್ಯಾರ್ಥಿಗಳು, ಪತ್ರಕರ್ತರು, ನಾಗರಿಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊಲಾಪುರ</strong>: ನಗರದ ಹೀರಾಚಂದ ನೇಮಚಂದ ವಾಚನಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಡಾ. ರವೀಂದ್ರ ಚಿಂಚೋಳಕರ ಅವರು ರಚಿಸಿದ ‘ರಾಜಕೀಯ ಮತ್ತು ಪತ್ರಿಕೋದ್ಯಮ’ ಕೃತಿಯನ್ನು ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರು ಬಿಡುಗಡೆಗೊಳಿಸಿದರು.</p>.<p>ಆನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಾಗೂ ರಾಜಕೀಯ ಕ್ಷೇತ್ರದವರು ಅವಶ್ಯ ಓದಲು ಬೇಕಾದ ಪುಸ್ತಕ ಇದಾಗಿದೆ. ವಿವಿಧ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೂ ಆಯ್ಕೆ ಮಾಡಬಹುದಾಗಿದೆ ಎಂದರು.</p>.<p>ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ರಾಜಕೀಯ ಪತ್ರಿಕೋದ್ಯಮದ ಅವಲೋಕನ ಮಾಡಿರುವುದರ ಜೊತೆಗೆ, ಪತ್ರಿಕೋದ್ಯಮ ಹೇಗಿರಬೇಕು, ರಾಜಕಾರಣದಲ್ಲಿ ಯಾವ ಬದಲಾವಣೆಗಳು ಆಗಬೇಕು ಎಂಬುದರ ಮೇಲೂ ಸೂಕ್ತವಾಗಿ ಬೆಳಕು ಚೆಲ್ಲಲಾಗಿದೆ ಎಂದು ಹೇಳಿದರು.</p>.<p>ಪ್ರೊ. ಸುಧೀರ ಗೌಹಾಣೆ ಮಾತನಾಡಿ, ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಅಪರಾಧಿಕ ಹಿನ್ನೆಲೆಯವರು ಕಡಿಮೆ ಇದ್ದರು. ಈಗ ಆ ಪ್ರಮಾಣ ಹೆಚ್ಚಾಗುತ್ತಿದೆ ಎಂದರು.</p>.<p>ಲೇಖಕ ಡಾ. ರವೀಂದ್ರ ಚಿಂಚೋಳಕರ ಮಾತನಾಡಿ, ಪತ್ರಿಕೋದ್ಯಮದಲ್ಲಿ ಬದಲಾವಣೆ ತರಬಲ್ಲ ಶಕ್ತಿ ಇದೆ. ಯುವಕರು ರಾಜಕಾರಣವನ್ನು ದ್ವೇಷಿಸದೇ, ಉತ್ತಮ ರಾಜಕೀಯ ನಾಯಕರಾಗಿ ಮುಂದಕ್ಕೆ ಬರಬೇಕು ಎಂದು ಹೇಳಿದರು.</p>.<p>ಪತ್ರಕರ್ತ ಸುನಿಲ ಪಾಟೀಲ ಮಾತನಾಡಿ, ಇಂದಿನ ಕಾಲಕ್ಕೆ ಈ ಪುಸ್ತಕ ಅಗತ್ಯವಾಗಿತ್ತು ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಪ್ರೊ. ಶ್ರೀಕಾಂತ ಯೆಳೇಗಾವಕರ ಮಾತನಾಡಿ, ಸೊಲಾಪುರ ಜಿಲ್ಲೆಯಲ್ಲಿ ಅಬ್ದುಲ್ ರಸೂಲ್ ಕುರ್ಬಾನ್ ಹುಸೇನ್ ಅವರ ಕಾಲದಿಂದ ಹೋರಾಟಗಾರ ಪತ್ರಕರ್ತರ ಪರಂಪರೆ ಇದೆ ಎಂದು ಹೇಳಿದರು.</p>.<p>ರಾಜಕೀಯ ವಿಶ್ಲೇಷಕ ರಾಜಾ ಮಾನೆ ಮಾತನಾಡಿ, ಮುದ್ರಿತ ಪತ್ರಿಕೋದ್ಯಮದಿಂದ ಡಿಜಿಟಲ್ ಪತ್ರಿಕೋದ್ಯಮದವರೆಗೆ ನಡೆದ ಮಹತ್ತರ ಬದಲಾವಣೆಗಳನ್ನೂ ಅವರು ಉಲ್ಲೇಖಿಸಿದರು.</p>.<p>ಪ್ರೊ. ಸಂತೋಷ ಪವಾರ, ಪ್ರಕಾಶಕ ಪಿಂಪಳಾಪುರೆ, ಡಾ.ಅಂಬಾದಾಸ ಭಾಸ್ಕೆ, ವಿಶ್ರಾಂತ ಕುಲಪತಿ ಪ್ರೊ. ಸುಧೀರ ಗೌಹಾಣೆ, ಶ್ರಮಿಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಕ್ರಮ ಖೇಲಗುಡೆ ಹಾಗೂ ಛತ್ರಪತಿ ಸಂಭಾಜಿನಗರದ ವಿದ್ಯಾರ್ಥಿ ಪುಸ್ತಕ ಪ್ರಕಾಶನದ ಶಶಿಕಾಂತ ಪಿಂಪಳಾಪುರೆ ವಿದ್ಯಾರ್ಥಿಗಳು, ಪತ್ರಕರ್ತರು, ನಾಗರಿಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>