ಜಿಲ್ಲೆಯ ತಿಕೋಟಾ, ಬಾಬಾನಗರ, ಕನಮಡಿ, ಸೋಮದೇವರ ಹಟ್ಟಿ, ಮನಗೂಳಿ, ಉಕ್ಕಲಿ, ಮಲಘಾಣ, ಹುಣಶ್ಯಾಳ ಪಿ.ಬಿ., ಮಸೂತಿ, ಕರಭಂಟನಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಒಂದು ವರ್ಷದಿಂದ ಆಗಾಗ ಭೂಮಿಯೊಳಗೆ ಭಯಾನಕ ಶಬ್ಧ ಹಾಗೂ ಕಂಪನವಾಗುತ್ತಿದೆ. ಈ ಕುರಿತು ಜಿಲ್ಲಾಡಳಿತದ ಮನವಿ ಮೇರೆಗೆ ಬೆಂಗಳೂರಿನ ಭೂವಿಜ್ಞಾನಿಗಳು ಸ್ಥಳಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ, ಇದು ಭೂ ಕಂಪನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.